Sunday, June 15, 2025
Google search engine
Homeಶಿವಮೊಗ್ಗವಿದ್ಯೆ ಕೇವಲ ಹಣ ಗಳಿಕೆಯ ಮಾರ್ಗವಾಗಬಾರದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ...

ವಿದ್ಯೆ ಕೇವಲ ಹಣ ಗಳಿಕೆಯ ಮಾರ್ಗವಾಗಬಾರದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!

ಯುವಜನತೆಯಿಂದ ನಮ್ಮ ಸಮಾಜಕ್ಕೆ,,ನಮ್ಮ ದೇಶಕ್ಕೆ ದೊಡ್ಡ ನಿರೀಕ್ಷೆಯಿದೆ.ವಿದ್ಯೆ ಕೇವಲ ಹಣ ಗಳಿಕೆಗೆ ಮಾರ್ಗವಾಗಬಾರದು.ಪಡೆದ ವಿದ್ಯೆ,ದಕ್ಕಿದ ಸ್ಥಾನಮಾನಗಳು ಕೇವಲ ಸ್ವಾರ್ಥಕ್ಕಷ್ಟೇ ಸೀಮಿತವಾಗದೆ ಒಂದಿಷ್ಟು ಸಮಾಜಕ್ಕೂ ಉಪಯೋಗವಾಗುವಂತಿರಬೇಕು.ಈ ದಿಸೆಯಲ್ಲಿ ನಮ್ಮ ಯುವಜನತೆಯ ಚಿಂತನೆಗಳಿರಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.ಅವರು ಇಂಜಿನಿಯರಿಂಗ್ ಉನ್ನತ ವ್ಯಾಸಾಂಗಕ್ಕೆ ಇಂಗ್ಲೇಂಡಿಗೆ ತೆರಳುತ್ತಿರುವ ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಖಜಾಂಚಿ ಉಷಾರವರ ಪುತ್ರ ಅಮೋಘರವರನ್ನು ತಾಲ್ಲೂಕು ಅರೋಗ್ಯ ಇಲಾಖಾ ನೌಕರರ ಸಂಘದ ವತಿಯಿಂದ ಅಭಿನಂದಿಸಿ, ಶುಭಹಾರೈಸಿ ಮಾತನಾಡಿದರು.


ಮುಂದುವರಿದು ಸಮಾಜಮುಖಿ ಕಾಳಜಿಗಳಿಲ್ಲದೆ ಕೇವಲ ತಾನು ತನ್ನ‌ ಕುಟುಂಬ ಎಂಬ ಸೀಮಿತ ಚೌಕಟ್ಟಿನೊಳಗಿರುವ ವ್ಯಕ್ತಿ ಎಷ್ಟೇ ಹಣ, ಆಸ್ತಿ ಪಾಸ್ತಿ, ಉನ್ನತ ಸ್ಥಾನಮಾನಗಳನ್ನು ಗಳಿಸಿದರೂ ಸಮಾಜ ಆತನನ್ನು ನಮ್ಮವನೆಂದು ಒಪ್ಪಿಕೊಳ್ಳುವುದಿಲ್ಲ. ಮಾತ್ರವಲ್ಲ ಅಂತಹ ಗಳಿಕೆ ಸ್ವತಃ ಆತನಿಗೇ ತೃಪ್ತಭಾವ ನೀಡುವುದಿಲ್ಲ. ಆದ್ದರಿಂದ ಬದುಕು ಒಂದಿಷ್ಟಾದರೂ ಸಾರ್ಥಕವೆನಿಸಲು ಒಂದಿಷ್ಟು ಸಮಾಜಮುಖಿ ಕಾಳಜಿ, ಬದ್ದತೆಗಳಿರಲೇಬೇಕು ಎಂದರು.


ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಷೆ ಗೀತಾ ಎಲ್. ಪದಾಧಿಕಾರಿಗಳಾದ ಶಿವಶಂಕರ್ ಡಿ ಸಿ, ಅನುಸೂಯ ಬಿ ಆರ್, ನೀಲಮ್ಮ, ಈಶ್ವರಪ್ಪ, ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಅನಿತ ಬಿ ಸಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟೀ ಕಾರ್ಯದರ್ಶಿ ಗುರುಪ್ರಸಾದ್ ಮತ್ತಿತರಿದ್ದರು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!