Wednesday, April 30, 2025
Google search engine
Homeರಾಷ್ಟ್ರೀಯ"ನ್ಯೂಸ್ ವಾರಿಯರ್ಸ್" ಮನವಿಗೆ ಸ್ಪಂದಿಸಿ ಆಗುಂಬೆಯ ಗುಂಡಿ ಬಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಾತ್ಕಾಲಿಕ ದುರಸ್ತಿ...

“ನ್ಯೂಸ್ ವಾರಿಯರ್ಸ್” ಮನವಿಗೆ ಸ್ಪಂದಿಸಿ ಆಗುಂಬೆಯ ಗುಂಡಿ ಬಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿಸಿದ ನ್ಯಾಷನಲ್ ಸಂಸ್ಥೆ..!ಎಲ್ಲಾ ಗುತ್ತಿಗೆದಾರರಲ್ಲೂ ಇದೇ ಕಾಳಜಿ ಇದ್ದರೆ ಒಳಿತು..!!

ತೀರ್ಥಹಳ್ಳಿ :ವಿಶ್ವ ಪ್ರಸಿದ್ಧ ಆಗುಂಬೆಯ ಮುಖ್ಯ ರಸ್ತೆಯಲ್ಲಿ ದಿನನಿತ್ಯವೂ ಸಾವಿರಾರು ವಾಹನಗಳು ಸಂಚರಿ ತಿರುತ್ತವೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಮಣಿಪಾಲ್ ಆಸ್ಪತ್ರೆಗೆ ನಿತ್ಯವೂ ದಾವಣಗೆರೆ ,ಚಿತ್ರದುರ್ಗ, ಶಿವಮೊಗ್ಗ, ಹರಪನಹಳ್ಳಿ ಹೊಸಪೇಟೆ, ಬಳ್ಳಾರಿಯಿಂದಲೂ ಸಹ ಸಾಕಷ್ಟು ಜನ ಚಿಕಿತ್ಸೆಗಾಗಿ ಬರುತ್ತಾರೆ. ಹಾಗೆ ನಿತ್ಯವು ಆಗುಂಬೆಗೆ ಪ್ರವಾಸಿಗರು ಕೂಡ ದಂಡುದಂಡಾಗಿ ಬರುವುದು ಸರ್ವೇ ಸಾಮಾನ್ಯ ಹಾಗಾಗಿ ಸಹಜವಾಗಿಯೇ ಆಗುಂಬೆಯ ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ವಾಹನಗಳು ದಿನನಿತ್ಯ ಸಂಚರಿಸುತ್ತವೆ.

ಅಧಿಕ ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಗಳು :

ಕರ್ನಾಟಕದ ಚಿರಾಪುಂಜಿ ಎಂದೆ ಪ್ರಸಿದ್ಧಿ ಪಡೆದಿರುವ ಆಗುಂಬೆಯಲ್ಲಿ ಆರು ತಿಂಗಳು ಸತತವಾಗಿ ಮಳೆ ಇರುತ್ತದೆ. ಈ ಮಳೆಯ ಆರ್ಭಟಕ್ಕೆ ನ್ಯಾಷನಲ್ ಅಂತಹ ಸಂಸ್ಥೆ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಕೂಡ ಗುಂಡಿ ಬಿದ್ದು ಪ್ರಯಾಣಿಕರಿಗೆ ಅನಾಹುತಗಳು ಸಂಭವಿಸುತ್ತಿವೆ.

ಗುಂಡಿ ಬಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ ನ್ಯಾಷನಲ್ ಸಂಸ್ಥೆ :

ಹೀಗೆ ಗುಂಡಿ ಬಿದ್ದ ರಸ್ತೆಯ ವಿಷಯವನ್ನು ಆಗುಂಬೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅರ್ಚಕರಾದ ಗಜೇಂದ್ರ ಭಟ್ಟರು ಪತ್ರಿಕೆಯ ಗಮನಕ್ಕೆ ತಂದಾಗ ಪತ್ರಿಕೆ ಕೂಡಲೇ ನ್ಯಾಷನಲ್ ಸಂಸ್ಥೆಗೆ ವಿಷಯ ತಿಳಿಸಿದಾಗ ಕೂಡಲೇ ಸ್ಪಂದಿಸಿದ ಸಂಸ್ಥೆಯವರು ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ. ಮುಂದೆ ಸ್ವಲ್ಪ ಮಳೆ ಕಡಿಮೆಯಾದ ನಂತರ ಶಾಶ್ವತ ರಸ್ತೆ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ…

ಅತೀವ ಕಾಳಜಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಅರ್ಚಕರಾದ ಗಜೇಂದ್ರ ಭಟ್ಟರು ಪತ್ರಿಕೆಗೆ ತಿಳಿಸಿದ್ದಕ್ಕಾಗಿ ಹಾಗೂ ಕೂಡಲೇ ಇದಕ್ಕೆ ಸ್ಪಂದಿಸಿದ ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಶರೀಫ್ ಅವರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕೆ ಕಡೆಯಿಂದ ಧನ್ಯವಾದಗಳು…

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...