
ಸರ್ಕಾರಿ ನೌಕರರ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲ್ಲೂಕು ಶಾಖೆ ತೀರ್ಥಹಳ್ಳಿ ವತಿಯಿಂದ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, 1920 ರಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ದೇಶದಲ್ಲಿ ಅತ್ಯಂತ ಬಲಿಷ್ಟ ಹಾಗೂ ಮಾದರಿ ಸಂಘಟನೆಯಾಗಿದ್ದು.ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ಸರ್ಕಾರಿ ನೌಕರರಿಗೆ ದೊರಕಬೇಕಾದ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.
ಈ ಹಿಂದಿನ ಎಲ್ಲಾ ಅಧ್ಯಕ್ಷರೂ ಈ ಸಂಘಟನೆಯನ್ನು ಚೆನ್ನಾಗಿ ಮುನ್ನಡೆಸಿದ್ದಾರೆ. 2019 ರಲ್ಲಿ ಸಿ ಎಸ್ ಷಡಾಕ್ಷರಿ ರಾಜ್ಯಾಧ್ಯಕ್ಷರಾದ ಬಳಿಕವಂತೂ ಸರ್ಕಾರದಿಂದ ಹಲವಾರು ಐತಿಹಾಸಿಕ ಆದೇಶಗಳಾಗಲು ಸಂಘ ಕಾರಣವಾಗಿದೆ.
ರಾಜ್ಯಾಧ್ಯಕ್ಷರ ಹಾಗೂ ಸಂಘಟನೆಯ ಯಶಸ್ಸನ್ನು ಸಹಿಸದ ಕೆಲ ವ್ಯಕ್ತಿಗಳು ಇತ್ತೀಚೆಗೆ ರಾಜ್ಯಾಧ್ಯಕ್ಷರ ವಿರುದ್ದ ತೇಜೋವಧೆ ಮಾಡುವ ಸಂದೇಶಗಳನ್ನು ಜಾಲತಾಣಗಳಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡುತಿದ್ದಾರೆ. ಅಲ್ಲದೆ ಐದು ಜನ ನೌಕರರು ರಾಜ್ಯಾಧ್ಯಕ್ಷರ ವಿರುದ್ದ ಸಲ್ಲದ ಆರೋಪಗಳನ್ನು ಮಾಡಿ ಸಂಘದ ಪದಾಧಿಕಾರಿಗಳನ್ನು ವಜಾ ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ದೂರು ನೀಡಿರುತ್ತಾರೆ. ಇದು ಬಲಿಷ್ಟ ಸರ್ಕಾರಿ ನೌಕರರ ಸಂಘವನ್ನು ದುರ್ಬಲಗೊಳಿಸುವ ಹುನ್ನಾರವಾಗಿ ಕಾಣಿಸುತ್ತಿದೆ.
ಆದ್ದರಿಂದ ರಾಜ್ಯಾಧ್ಯಕ್ಷರ ಮತ್ತು ಸಂಘದ ಪ್ರತಿಷ್ಟೆಗೆ ದಕ್ಕೆ ತರಲು ಯತ್ನಿಸುತ್ತಿರುವ ಶಾಂತಾರಾಮ, ಗುರುಸ್ವಾಮಿ, ಮೆಹಬೂಬ್ ಭಾಷಾ, ನಿಂಗೇಗೌಡ,ಶಿವರುದ್ರಯ್ಯ ಎಂಬುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಸಂಘದ,ಕಾರ್ಯದರ್ಶಿ ರಾಮು ಬಿ,,ಉಪಾಧ್ಯಕ್ಷರಾದ ರಾಘವೇಂದ್ರ ಎಸ್,, ಯಲ್ಲಪ್ಪ ವಡ್ಡರ್, ಸಂಘಟನಾ ಕಾರ್ಯದರ್ಶಿ ರಮೇಶ್,, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್ ಸೇರಿದಂತೆ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.
ರಘುರಾಜ್ ಹೆಚ್.ಕೆ…9449553305…