ಶಿವಮೊಗ್ಗ: ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ಹಾಗೂ ಹಾಲಿ ಕಾರ್ಪೋರೆಟ್ ರ ಯಮುನಾ ರಂಗೇಗೌಡ ಪ್ರತಿನಿಧಿಸುವರುವ ವಾರ್ಡ್ ನಂ: 14 ರಲ್ಲಿ R.O.B ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಹಲವು ವರ್ಷಗಳಿಂದ ವಾಹನ ದಟ್ಟನೆ ಸಮಸ್ಯೆಯಿಂದ ಬೇಸತ್ತಿದ್ದ ನಾಗರೀಕರಿಗೆ ಈ ಕಾಮಗಾರಿ ಬಹಳಷ್ಟು ಅನುಕೂಲವಾಗುತ್ತದೆ.
ಆದರೇ 14 ನೇ ವಾರ್ಡಿನ ಸಿದ್ದೇಶ್ವರ ನಗರ, ಚಿಕ್ಕಲ್, ಶಾಂತಮ್ಮ ಬಡಾವಣೆ, ಕೋರಿ ರುದ್ರಪ್ಪ ಬಡಾವಣೆ, ಹೊಳೆಹೊನ್ನೂರು ರಸ್ತೆ ಸಮೀಪದ ಎಲ್ಲಾ ನಾಗರೀಕರಿಗೆ ದಿನ ನಿತ್ಯದ ಸಂಚಾರಕ್ಕೆ ಅನುಕೂಲವಾಗುವಂತೆ UNDERPASS ( ಕೆಳ ರಸ್ತೆಯ ) ವ್ಯವಸ್ಥೆ ಮಾಡಿಕೊಡಬೇಕಾಗಿ, ಲೋಕಸಭಾ ಸದಸ್ಯರಾದ ಬಿ. ವೈ. ರಾಘವೇಂದ್ರ ರವರಿಗೆ ವಾರ್ಡ್ ನಂ.14ರಲ್ಲಿ R.O.B ಕಾಮಗಾರಿ ನಡೆಯುತ್ತಿದ್ದು ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗುವಂತೆ ಲಘು ವಾಹನ ಓಡಾಡಲು underpass ರಸ್ತೆ ನಿರ್ಮಾಣ ಮಾಡಿಕೊಡಬೇಕಾಗಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಂಗೇಗೌಡರು, ಚಂದ್ರಪ್ಪ, ಸಿದ್ದಣ್ಣ, ಕಾರ್ತಿಕ್, ಅಯಾಜ್ ಖಾನ್, ದೇವರಾಜ್, ರಾಜು ಸ್ಥಳೀಯರು ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ..9449553305...