Wednesday, April 30, 2025
Google search engine
Homeಶಿವಮೊಗ್ಗನವುಲೆಯಲ್ಲಿ ಚಿರತೆ ಪ್ರತ್ಯಕ್ಷ ನಿಜಾನಾ..?ಅರಣ್ಯ ಇಲಾಖೆಯ ಅಧಿಕಾರಿಗಳು ಏನಂತಾರೆ..? ಇವಾಗ ಚಿರತೆ ಎಲ್ಲಿದೆ..?

ನವುಲೆಯಲ್ಲಿ ಚಿರತೆ ಪ್ರತ್ಯಕ್ಷ ನಿಜಾನಾ..?ಅರಣ್ಯ ಇಲಾಖೆಯ ಅಧಿಕಾರಿಗಳು ಏನಂತಾರೆ..? ಇವಾಗ ಚಿರತೆ ಎಲ್ಲಿದೆ..?

ಶಿವಮೊಗ್ಗದಲ್ಲಿ ಆಗಾಗ ಚಿರತೆ, ಕರಡಿ , ಆನೆ, ಪ್ರತ್ಯಕ್ಷ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಶ್ರಮವಹಿಸಿ ಹಿಡಿಯುತ್ತಿದ್ದಾರೆ.

ಆದರೆ ನಗರಕ್ಕೆ ಆಗಮಿಸುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದಾಗಿ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ.

ಇತ್ತೀಚಿಗೆ ಶಿವಮೊಗ್ಗದ ನವುಲೆ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಎಲ್ಲೆಡೆ ಸುದ್ದಿ ಬರುತ್ತಿದೆ. ಆದರೆ ಇದರ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರಿಕೆ ವಿಚಾರಿಸಿದಾಗ ಚಿರತೆ ಹದಿನೈದು ದಿನಗಳ ಹಿಂದೆ ನವುಲೆಯ ಕೃಷಿ ಕಾಲೇಜಿನ ಹಿಂಭಾಗ ಕಾಣಿಸಿಕೊಂಡಿದೆ ಎಂದು ಅಲ್ಲಿನ ಸೆಕ್ಯೂರಿಟಿ ಒಬ್ಬರು ಹೇಳಿದ್ದರು ಆದರೆ ನಾವು ಅದನ್ನು ಪರಿಶೀಲಿಸಿದಾಗ ಚಿರತೆ ಅಲ್ಲಿಂದ ಪಾಸಾಗಿದ್ದರೆ ಮುಂದೆ  ಅಬ್ಬಲಗೆರೆ, ಕೋಟೆಗಂಗೂರು, ಭಾಗಗಳಿಗೆ ತೆರಳಬೇಕು ಸಾಮಾನ್ಯವಾಗಿ ಹುಲಿ ಸ್ವಭಾವ ಹಾಗೂ ಚಿರತೆ ಸ್ವಭಾವ ಭಿನ್ನವಾಗಿರುತ್ತದೆ. ಹುಲಿ ಒಂದು ಕಡೆ ಬೀಡುಬಿಟ್ಟರೆ ಮತ್ತೊಂದು ಹುಲಿ ಬಂದು ಅದನ್ನು ಓಡಿಸುವವರೆಗೂ ಅದು ಅಲ್ಲಿನ ಪ್ರಾಣಿಗಳನ್ನು ಮನುಷ್ಯರನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತದೆ ಆದರೆ ಚಿರತೆ ಹಾಗಲ್ಲ ಅಲ್ಲಲ್ಲೇ ಬಿಡು ಬಿಟ್ಟು ಒಂದೆರಡು ದಿನ ತನ್ನ ಆಹಾರವನ್ನು ಪೂರೈಸಿಕೊಂಡು ಮತ್ತೆ ಬೇರೆ ಸ್ಥಳಗಳಿಗೆ ತೆರಳುತ್ತಿರುತ್ತದೆ. ಹಾಗಾಗಿ ಚಿರತೆ ನಾವು ಅಲ್ಲಿ ಇಲ್ಲ ಎಂದು ಹೇಳುತ್ತಿಲ್ಲ ಅಥವಾ ಇದೆ ಎಂದು ಹೇಳುತ್ತಿಲ್ಲ ನಮ್ಮ ಕಾರ್ಯಚರಣೆಯನ್ನು ಮುಂದುವರಿಸಿದ್ದೇವೆ ಜನರು ಕೂಡ ಸ್ವಲ್ಪ ಜಾಗೃತರಾಗಿ ಇದ್ದರೆ ಒಳಿತು ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಅರಣ್ಯ ಇಲಾಖೆಯ ಹೆಲ್ಪ್ಲೈನ್ ನಂಬರ್ 1926 ಗೆ ಕರೆ ಮಾಡಿ ಮಾಹಿತಿ ತಿಳಿಸಿ ಆದರೆ ಮಾಹಿತಿ ಅಧಿಕೃತವಾಗಿರಲಿ ಎಂದು ಪತ್ರಿಕೆ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಅರಣ್ಯ ಒತ್ತುವರಿ ಕಾಡು ಪ್ರಾಣಿಗಳ ಪಾಲಿಗೆ ವರದಾನವಾಗಿದೆಯಾ..?

ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದು ಎಲ್ಲೋ ಒಂದೊಂದು ಕಡೆ ಒಂದಷ್ಟು ಜಾಗವನ್ನು ಬಿಡುತ್ತಿದ್ದಾರೆ ಇದು ವನ್ಯಜೀವಿಗಳಿಗೆ ವರದಾನವಾಗಿದ್ದು ಅವುಗಳು ಅವುಗಳನ್ನು ಆಕ್ರಮಿಸಿಕೊಂಡು ಬಿಡು ಬಿಟ್ಟು ಅಲ್ಲಿಂದ ತಮ್ಮ ಕಾರ್ಯಚರಣೆಯನ್ನು ಮುಂದುವರೆಸಿಕೊಂಡು ಅಲ್ಲಿ ಬರುವ ಕಾಡುಪ್ರಾಣಿಗಳಾದ ಹಂದಿ, ಮೊಲ, ನಾಯಿಗಳನ್ನು ಬೇಟೆಯಾಡುತ್ತವೆ. ಒಂದೊಂದು ಬಾರಿ ಮನುಷ್ಯರ ಮೇಲು ಅಟ್ಯಾಕ್ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ. ಮೊದಲೇ ಬೇಸಿಗೆಕಾಲ ನೀರನ್ನು ಹುಡುಕಿಕೊಂಡು ಬರುವ ಕಾಡುಪ್ರಾಣಿಗಳು ಇಲ್ಲಿ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತವೆ.

ಸ್ಥಳೀಯ ನಾಗರಿಕರು ಜಾಗೃತರಾಗಿ ಇದ್ದರೆ ಒಳಿತು ಹಾಗೆ  ಯಾವುದೇ ಮಾಹಿತಿಗಳಿದ್ದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತನ್ನಿ…

ಅರಣ್ಯ ಇಲಾಖೆಯ ಹೆಲ್ಪ್ಲೈನ್ ನಂಬರ್ 1926 ಗೆ ಕರೆ ಮಾಡಿ ಮಾಹಿತಿ ತಿಳಿಸಿ

ರಘುರಾಜ್ ಹೆಚ್‌. ಕೆ ‌..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...