ಶಿವಮೊಗ್ಗ: ನ್ಯೂ ಮಂಡ್ಲಿಯ ದಸ್ತಿಗಿರ್ ಎಂಬುವರ ಸಹೋದರ ಇಲ್ಯಾಜ್ ಅಹಮದ್ ಮೂರು ವರ್ಷಗಳ ಹಿಂದೆ ಶೇಷಾದ್ರಿಪುರಂನ ನಿವಾಸಿಯೊಂದಿಗೆ ಮದುವೆಯಾಗಿದ್ದರು.
ಪತ್ನಿಯ ನಡತೆ ನಾಲ್ಕೈದು ತಿಂಗಳಿಂದ ಸರಿಯಿಲ್ಲ ಎಂದು ಪತಿ ಇಲ್ಯಾಜ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಸಂಧಾನದ ಹಂತದಲ್ಲಿ ವೇಳೆ ಇಲ್ಯಾಜ್ ಜೊತೆ ಬಂದ ರೆಹಮತ್ ಯಾನೆ ಡಾಲರ್, ಮುಸ್ತಾಫಾ ಹಾಗೂ ಮುನ್ನ ಆತನ ಪತ್ನಿಯನ್ನ ಕಂಡು ಪತ್ನಿಯ ಪರ ಮಾತನಾಡಿದ್ದರು.
ನಂತರದಲ್ಲಿ ರೆಹಮತ್ ಮತ್ತು ಇಬ್ಬರು ಮೂವರು ಆಕೆಗೆ ಜೊತೆ ತಿರುಗಾಡಲು ಆರಂಭಿಸಿದ್ದಾರೆ. ಇದರಿಂದ ಇಲ್ಯಾಜ್ ಗೆ ಬೈಯುವುದು, ಬೆದರಿಸುವುದು ಮಾಡಲಾರಂಭಿಸಿದ್ದಾರೆ. ನಂತರ ಇಲ್ಯಾಜ್ ಗೆ ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಎಂದು ಬೆದರಿಸಿ ಜುಲೈ 7 ರಂದು ಕೆಎಸ್ಆರ್ ಟಿಸಿ ಡಿಪೋ ಬಳಿ ಕರೆಯಿಸಿ ಸಂಸಾರ ನಡೆಸಿಕೊಂಡು ಹೋಗುವಂತೆ ಧಮ್ಕಿ ಹಾಕಿ ಅವ್ಯಾಚ್ಯಶಬ್ದಗಳಿಂದ ನಿಂದಿಸಿದ್ದಾರೆ.
ಈ ವೇಳೆ ಇಲ್ಯಾಸ್ ನ ಪತ್ನಿ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಇಲ್ಯಾಸ್ ಮನನೊಂದು. ಆ.04 ರಂದು ಇಲ್ಯಾಸ್ ವಿಷ ಸೇವಿಸಿದ್ದಾರೆ. ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.
ಆ.06 ರಂದು ಅವರಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿನಲ್ಲಿ ಚಿಕಿತ್ಸೆ ನಿರಾಕರಿಸಿರುವುದಾಗಿ ತಿಳಿದು ಬಂದಿದೆ. ಮತ್ತೆ ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು .
ಕೌಟುಂಬಿಕ ಕಲಹ ಸರಿ ಮಾಡಲು ಬಂದವರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮನನೊಂದ ಪತಿಗೆ ಟಾರ್ಚರ್ ನೀಡಿ ವಿಷಸೇವಿಸುವಂತೆ ಮಾಡಿರುವ ಆರೋಪದ ಮೇರೆಗೆ ಪತ್ನಿಯೂ ಸೇರಿ ನಾಲ್ವರ ಮೇಲೆ ದೂರು ದಾಖಲಾಗಿದೆ. ಇದರಲ್ಲಿ ಕಾಂಗ್ರೆಸ್ ನ ಮೈನಾರಿಟಿ ಘಟಕದ ಕಾರ್ಯದರ್ಶಿ ರೆಹಮತ್ ಯಾನೆ ಡಾಲರ್, ಮುಷ್ತಾಕ್, ಮುನ್ನಾ ಹಾಗೂ ಪತ್ನಿಯ ಹೆಸರು ಇದೆ.