Wednesday, April 30, 2025
Google search engine
Homeಶಿವಮೊಗ್ಗಪತಿಗೆ ಟಾರ್ಚರ್ ನಾಲ್ವರ ಮೇಲೆ ಎಫ್ ಐ ಆರ್..!

ಪತಿಗೆ ಟಾರ್ಚರ್ ನಾಲ್ವರ ಮೇಲೆ ಎಫ್ ಐ ಆರ್..!

ಶಿವಮೊಗ್ಗ: ನ್ಯೂ ಮಂಡ್ಲಿಯ ದಸ್ತಿಗಿರ್ ಎಂಬುವರ ಸಹೋದರ ಇಲ್ಯಾಜ್ ಅಹಮದ್ ಮೂರು ವರ್ಷಗಳ ಹಿಂದೆ ಶೇಷಾದ್ರಿಪುರಂನ ನಿವಾಸಿಯೊಂದಿಗೆ ಮದುವೆಯಾಗಿದ್ದರು.

ಪತ್ನಿಯ ನಡತೆ ನಾಲ್ಕೈದು ತಿಂಗಳಿಂದ ಸರಿಯಿಲ್ಲ ಎಂದು ಪತಿ ಇಲ್ಯಾಜ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಸಂಧಾನದ ಹಂತದಲ್ಲಿ ವೇಳೆ ಇಲ್ಯಾಜ್ ಜೊತೆ ಬಂದ ರೆಹಮತ್ ಯಾನೆ ಡಾಲರ್, ಮುಸ್ತಾಫಾ ಹಾಗೂ ಮುನ್ನ ಆತನ ಪತ್ನಿಯನ್ನ ಕಂಡು ಪತ್ನಿಯ ಪರ ಮಾತನಾಡಿದ್ದರು.

ನಂತರದಲ್ಲಿ ರೆಹಮತ್ ಮತ್ತು ಇಬ್ಬರು ಮೂವರು ಆಕೆಗೆ ಜೊತೆ ತಿರುಗಾಡಲು ಆರಂಭಿಸಿದ್ದಾರೆ. ಇದರಿಂದ ಇಲ್ಯಾಜ್ ಗೆ ಬೈಯುವುದು, ಬೆದರಿಸುವುದು ಮಾಡಲಾರಂಭಿಸಿದ್ದಾರೆ. ನಂತರ ಇಲ್ಯಾಜ್ ಗೆ ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಎಂದು ಬೆದರಿಸಿ ಜುಲೈ 7 ರಂದು ಕೆಎಸ್ಆರ್ ಟಿಸಿ ಡಿಪೋ ಬಳಿ ಕರೆಯಿಸಿ ಸಂಸಾರ ನಡೆಸಿಕೊಂಡು ಹೋಗುವಂತೆ ಧಮ್ಕಿ ಹಾಕಿ ಅವ್ಯಾಚ್ಯಶಬ್ದಗಳಿಂದ ನಿಂದಿಸಿದ್ದಾರೆ.

ಈ ವೇಳೆ ಇಲ್ಯಾಸ್ ನ ಪತ್ನಿ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಇಲ್ಯಾಸ್ ಮನನೊಂದು. ಆ.04 ರಂದು ಇಲ್ಯಾಸ್ ವಿಷ ಸೇವಿಸಿದ್ದಾರೆ. ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.

ಆ.06 ರಂದು ಅವರಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿನಲ್ಲಿ ಚಿಕಿತ್ಸೆ ನಿರಾಕರಿಸಿರುವುದಾಗಿ ತಿಳಿದು ಬಂದಿದೆ. ಮತ್ತೆ ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು .

ಕೌಟುಂಬಿಕ ಕಲಹ ಸರಿ ಮಾಡಲು ಬಂದವರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಮನನೊಂದ ಪತಿಗೆ ಟಾರ್ಚರ್ ನೀಡಿ ವಿಷಸೇವಿಸುವಂತೆ ಮಾಡಿರುವ ಆರೋಪದ ಮೇರೆಗೆ ಪತ್ನಿಯೂ ಸೇರಿ ನಾಲ್ವರ ಮೇಲೆ ದೂರು ದಾಖಲಾಗಿದೆ. ಇದರಲ್ಲಿ ಕಾಂಗ್ರೆಸ್ ನ ಮೈನಾರಿಟಿ ಘಟಕದ ಕಾರ್ಯದರ್ಶಿ ರೆಹಮತ್ ಯಾನೆ ಡಾಲರ್, ಮುಷ್ತಾಕ್, ಮುನ್ನಾ ಹಾಗೂ ಪತ್ನಿಯ ಹೆಸರು ಇದೆ.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...