Wednesday, April 30, 2025
Google search engine
Homeಶಿವಮೊಗ್ಗBig news : ಬೊಮ್ಮನಕಟ್ಟೆಯಲ್ಲಿ ಭೀಕರ ಕೊಲೆ..! ಘಟನೆ ನಡೆದು 24 ಗಂಟೆ ಒಳಗೆ ನಾಲ್ವರು...

Big news : ಬೊಮ್ಮನಕಟ್ಟೆಯಲ್ಲಿ ಭೀಕರ ಕೊಲೆ..! ಘಟನೆ ನಡೆದು 24 ಗಂಟೆ ಒಳಗೆ ನಾಲ್ವರು ಆರೋಪಿಗಳ ಬಂಧನ..?! ಪ್ರಮುಖ ಆರೋಪಿಗಳು ಹೋಗಿದ್ದೆಲ್ಲಿಗೆ..?!

ಶಿವಮೊಗ್ಗ : ನಿನ್ನೆ ಸರಿಸುಮಾರು ಒಂದು ಗಂಟೆಯ ಹೊತ್ತಿಗೆ ನಗರದ ಹಳೆ ಬೊಮ್ಮನಕಟ್ಟೆಯಲ್ಲಿ ನವುಲೆ ಆನಂದನ ಶಿಷ್ಯ‌ ರಾಜೇಶ್ ಶೆಟ್ಟಿಯ ಭೀಕರ ಕೊಲೆಯಾಗಿತ್ತು.

ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ಎಲ್ಲರೆದುರು ರಾಜೇಶ್ ಶೆಟ್ಟಿಯನ್ನು ಕೊಚ್ಚಿ ಕೊಚ್ಚಿ ಕೊಂದಿದ್ದರು.

ಈ ಘಟನೆ ನಡೆದು 24 ಗಂಟೆಯ ಒಳಗೆ ಆರು ಜನ ಆರೋಪಿಗಳಲ್ಲಿ ನಾಲ್ವರನ್ನು ಶಿವಮೊಗ್ಗ ವ್ಯಾಪ್ತಿಯೊಳಗೆ ವಿನೋಬನಗರ ಪೊಲೀಸರು ಹಿಡಿದಿದ್ದು ಸ್ಥಳ ಮಾಹಜರಿಗೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ದ ಘಟನೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಗಣೇಶ, ಚಿಟ್ಟೆ ನಾಗ, ವೆಂಕಟೇಶ, ಕಿರಣ್ ಗೌಡ, ಶಿವಮೊಗ್ಗ ವ್ಯಾಪ್ತಿಯೊಳಗೆ ಸೆರೆ ಸಿಕ್ಕಿದ್ದು ಪ್ರಮುಖ ಆರೋಪಿಗಳಾದ ಡಿಂಗಾ ದೀಪು ಹಾಗೂ ಕರಿಯ ವಿನಯ ತಲೆಮೆರೆಸಿಕೊಂಡಿದ್ದಾರೆ.

ಪ್ರಕರಣದ ದಲ್ಲಿದ್ದ ಎಲ್ಲಾ ಆರೋಪಿಗಳು ರೌಡಿಶೀಟರ್ ಗಳಾಗಿದ್ದು ಹಿಂದೆ ನಡೆದ ವೈಯಕ್ತಿಕ ಜಗಳ ಅತಿರೇಕಕ್ಕೆ ಹೋಗಿ ಈಗ ಅದು ‌ ರಾಜೇಶ್ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.

ಎನ್ಕೌಂಟರಿಗೆ ಹೆದರಿ ಎಸ್ಕೇಪ್ ಆದ್ರಾ ಡಿಂಗಾ ದೀಪು ಕರಿಯಾ ವಿನಯ..?!

ಹಾಡು ಹಗಲೇ ಶಿವಮೊಗ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಹಾವಳಿ ಮಿತಿಮೀರಿದೆ ಮಚ್ಚಿನಲ್ಲಿ ಕೊಚ್ಚುವುದು ‌ ಮಾಮೂಲಾಗಿದೆ ಇದನ್ನು ನಿಯಂತ್ರಿಸಲು ಪೊಲೀಸರು ಸಹ ಸಾಕಷ್ಟು ಸಲ ತಮ್ಮ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ಈ ಪ್ರಕರಣದಲ್ಲೂ ಕೂಡ ಹಾಡು ಹಗಲೇ ವಿನಯ್ ತಂಡ ರೌಡಿಶೀಟರ್ ರಾಜೇಶ್ ಶೆಟ್ಟಿಯನ್ನು ಭೀಕರ ಕೊಲೆ ಮಾಡಿದ್ದರಿಂದ ಎಲ್ಲಿ ನಮ್ಮನ್ನು ಎನ್ಕೌಂಟರ್ ಮಾಡಿಬಿಡುತ್ತಾರೋ ಎಂದು ಹೆದರಿ ತಲೆಮರಿಸಿಕೊಂಡು ಓಡಿ ಹೋಗಿದ್ದಾರೆ ಎನ್ನುತ್ತದೆ ಶಿವಮೊಗ್ಗ ಭೂಗತ ಲೋಕ.

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...