Home ಶಿವಮೊಗ್ಗBig news : ಬೊಮ್ಮನಕಟ್ಟೆಯಲ್ಲಿ ಭೀಕರ ಕೊಲೆ..! ಘಟನೆ ನಡೆದು 24 ಗಂಟೆ ಒಳಗೆ ನಾಲ್ವರು ಆರೋಪಿಗಳ ಬಂಧನ..?! ಪ್ರಮುಖ ಆರೋಪಿಗಳು ಹೋಗಿದ್ದೆಲ್ಲಿಗೆ..?!

Big news : ಬೊಮ್ಮನಕಟ್ಟೆಯಲ್ಲಿ ಭೀಕರ ಕೊಲೆ..! ಘಟನೆ ನಡೆದು 24 ಗಂಟೆ ಒಳಗೆ ನಾಲ್ವರು ಆರೋಪಿಗಳ ಬಂಧನ..?! ಪ್ರಮುಖ ಆರೋಪಿಗಳು ಹೋಗಿದ್ದೆಲ್ಲಿಗೆ..?!

by EDITOR NEWS WARRIORS
0 comments

ಶಿವಮೊಗ್ಗ : ನಿನ್ನೆ ಸರಿಸುಮಾರು ಒಂದು ಗಂಟೆಯ ಹೊತ್ತಿಗೆ ನಗರದ ಹಳೆ ಬೊಮ್ಮನಕಟ್ಟೆಯಲ್ಲಿ ನವುಲೆ ಆನಂದನ ಶಿಷ್ಯ‌ ರಾಜೇಶ್ ಶೆಟ್ಟಿಯ ಭೀಕರ ಕೊಲೆಯಾಗಿತ್ತು.

ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ಎಲ್ಲರೆದುರು ರಾಜೇಶ್ ಶೆಟ್ಟಿಯನ್ನು ಕೊಚ್ಚಿ ಕೊಚ್ಚಿ ಕೊಂದಿದ್ದರು.

ಈ ಘಟನೆ ನಡೆದು 24 ಗಂಟೆಯ ಒಳಗೆ ಆರು ಜನ ಆರೋಪಿಗಳಲ್ಲಿ ನಾಲ್ವರನ್ನು ಶಿವಮೊಗ್ಗ ವ್ಯಾಪ್ತಿಯೊಳಗೆ ವಿನೋಬನಗರ ಪೊಲೀಸರು ಹಿಡಿದಿದ್ದು ಸ್ಥಳ ಮಾಹಜರಿಗೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ದ ಘಟನೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಗಣೇಶ, ಚಿಟ್ಟೆ ನಾಗ, ವೆಂಕಟೇಶ, ಕಿರಣ್ ಗೌಡ, ಶಿವಮೊಗ್ಗ ವ್ಯಾಪ್ತಿಯೊಳಗೆ ಸೆರೆ ಸಿಕ್ಕಿದ್ದು ಪ್ರಮುಖ ಆರೋಪಿಗಳಾದ ಡಿಂಗಾ ದೀಪು ಹಾಗೂ ಕರಿಯ ವಿನಯ ತಲೆಮೆರೆಸಿಕೊಂಡಿದ್ದಾರೆ.

ಪ್ರಕರಣದ ದಲ್ಲಿದ್ದ ಎಲ್ಲಾ ಆರೋಪಿಗಳು ರೌಡಿಶೀಟರ್ ಗಳಾಗಿದ್ದು ಹಿಂದೆ ನಡೆದ ವೈಯಕ್ತಿಕ ಜಗಳ ಅತಿರೇಕಕ್ಕೆ ಹೋಗಿ ಈಗ ಅದು ‌ ರಾಜೇಶ್ ಶೆಟ್ಟಿ ಕೊಲೆಯಲ್ಲಿ ಅಂತ್ಯವಾಗಿದೆ.

ಎನ್ಕೌಂಟರಿಗೆ ಹೆದರಿ ಎಸ್ಕೇಪ್ ಆದ್ರಾ ಡಿಂಗಾ ದೀಪು ಕರಿಯಾ ವಿನಯ..?!

ಹಾಡು ಹಗಲೇ ಶಿವಮೊಗ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಹಾವಳಿ ಮಿತಿಮೀರಿದೆ ಮಚ್ಚಿನಲ್ಲಿ ಕೊಚ್ಚುವುದು ‌ ಮಾಮೂಲಾಗಿದೆ ಇದನ್ನು ನಿಯಂತ್ರಿಸಲು ಪೊಲೀಸರು ಸಹ ಸಾಕಷ್ಟು ಸಲ ತಮ್ಮ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ಈ ಪ್ರಕರಣದಲ್ಲೂ ಕೂಡ ಹಾಡು ಹಗಲೇ ವಿನಯ್ ತಂಡ ರೌಡಿಶೀಟರ್ ರಾಜೇಶ್ ಶೆಟ್ಟಿಯನ್ನು ಭೀಕರ ಕೊಲೆ ಮಾಡಿದ್ದರಿಂದ ಎಲ್ಲಿ ನಮ್ಮನ್ನು ಎನ್ಕೌಂಟರ್ ಮಾಡಿಬಿಡುತ್ತಾರೋ ಎಂದು ಹೆದರಿ ತಲೆಮರಿಸಿಕೊಂಡು ಓಡಿ ಹೋಗಿದ್ದಾರೆ ಎನ್ನುತ್ತದೆ ಶಿವಮೊಗ್ಗ ಭೂಗತ ಲೋಕ.

ರಘುರಾಜ್ ಹೆಚ್.ಕೆ..9449553305…

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...