191
ಭದ್ರಾವತಿ ತಾಲೂಕು ಅರಬಿಳಿಚಿಯ ನಾಲ್ವರು ಭದ್ರಾ ಎಡದಂಡೆ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದಿದ್ದಾಗ ಕಾಲು ಜಾರಿ ಬಿದ್ದು ದುರ್ಮರಣ ಹೊಂದಿದ್ದಾರೆ .

ಏನಿದು ಘಟನೆ :
ಅರಬಿಳಿಚಿಯ ನೀಲಾಬಾಯಿ ಎಂಬ ಸುಮಾರು 45 ವರ್ಷದ ಮಹಿಳೆಗೆ ಶ್ವೇತಾ ಹಾಗೂ ರವಿಕುಮಾರ್ ಎನ್ನುವ ಮಕ್ಕಳಿದ್ದು ಶ್ವೇತಾ ಗೆ ಸುಮಾರು 26 ವರ್ಷ ರವಿಕುಮಾರ್ ಗೆ ಸುಮಾರು 23 ವರ್ಷ ಶ್ವೇತಾ ನನ್ನು ಬೆಂಡಗಟ್ಟಿಗೆ ಪರಶುರಾಮ್ ಎನ್ನುವ 36 ವರ್ಷದ ವ್ಯಕ್ತಿ ಜೊತೆ ವಿವಾಹ ಮಾಡಿಕೊಡಲಾಗಿತ್ತು ಆದರೆ ಇದೇ ತಿಂಗಳ 13 /14/ 15 ರಂದು ಜಾತ್ರೆ ಇದ್ದ ಪ್ರಯುಕ್ತ ಅಳಿಯ ಪರಶುರಾಮ್ ಮತ್ತು ಮಗಳು ಶ್ವೇತಾ ತಮ್ಮ ಇಬ್ಬರು ಮಕ್ಕಳೊಂದಿಗೆ ನೀಲಾಬಾಯಿ ಅವರ ಮನೆ ಅರಬಿಳಿಚಿಗೆ ಬಂದಿದ್ದರು ಆದರೆ ಜಾತ್ರೆ ಮುಗಿಸಿ ಬಟ್ಟೆ ತೊಳೆಯಲು ಎರಡು ಬೈಕ್ ನಲ್ಲಿ ನಾಲ್ಕು ಜನ ಭದ್ರಾ ಎಡದಂಡೆ ನಾಲಿಗೆ ಬಂದಿದ್ದಾರೆ ಆ ಸಮಯದಲ್ಲಿ ನಾಲೆಗೆ ಹಾಕಿದ ರ್ರ್ ಪ್ ನಲ್ಲಿ ಜಾರಿ ಬಿದ್ದು ನೀರಿಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಒಬ್ಬರನ್ನು ರಕ್ಷಿಸಲು ಇನ್ನೊಬ್ಬರು ಹೋಗಿ ನಾಲ್ಕು ಜನರು ನಿರುಪಾಲಾಗಿದ್ದಾರೆ.

ಭದ್ರಾ ಎಡದಂಡೆ ನಾಲೆ 18 ರಿಂದ 20 ಅಡಿ ಆಳವಿದ್ದು ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತಮ್ಮ ಬೋಟ್ ಗಳನ್ನು ಬಳಸಿ ನಿರುಪಾಲಾದವರನ್ನು ಹುಡುಕುವ ಶತ ಪ್ರಯತ್ನದಲ್ಲಿ ತೊಡಗಿದ್ದಾರೆ. ಹರಿಯುವ ನೀರಾದ್ದರಿಂದ ಶವಗಳು ಮುಂದೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


