ಶಿವಮೊಗ್ಗ:-ಶಿವಮೊಗ್ಗ ನಗರದಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಪರಿಣಾಮ ಶಿವಮೊಗ್ಗ ನಗರದ ಹಲವಡೆ ಅದರಲ್ಲೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದೂ, ವಿದ್ಯಾನಗರದ 13 ನೇ ತಿರುವಿನಲ್ಲಿ ಮಗು ಹಾಗೂ ಪೋಷಕರು ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದು, ತಕ್ಷಣವೇ ಈ ಸಂತ್ರಸ್ತರ ನೆರವಿಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮಗು ಹಾಗೂ ಪೋಷಕರನ್ನೂ ಸಂರಕ್ಷಣೆ ಮಾಡಿದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸೇವೆಗೆ ಪೋಷಕರು ಹಾಗೂ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.