Home ರಾಜ್ಯತಾಳಗುಪ್ಪದಲ್ಲಿ ಸರಣಿ ಕಳ್ಳತನ – ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ – ತಾಳಗುಪ್ಪ ರೈಲ್ವೆ ನಿಲ್ದಾಣವೇ ಕೊನೆಯ ನಿಲ್ದಾಣವಾಗಿರುವುದೇ ನೇರ ಕಾರಣ – ಮೂರನೇ ಕಣ್ಣು (C. C. CAMERA ) ಗಳನ್ನೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸದೇ ಇರುವುದೇ ಸರಣಿ ಕಳ್ಳತನಕ್ಕೆ ರಹದಾರಿ..!! ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕಳ್ಳ ಯಾರು..? ಬಂಗಾರದ ಅಂಗಡಿಯಲ್ಲಿ ಕದ್ದ ಬಂಗಾರ ವೆಷ್ಟು.. ?

ತಾಳಗುಪ್ಪದಲ್ಲಿ ಸರಣಿ ಕಳ್ಳತನ – ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ – ತಾಳಗುಪ್ಪ ರೈಲ್ವೆ ನಿಲ್ದಾಣವೇ ಕೊನೆಯ ನಿಲ್ದಾಣವಾಗಿರುವುದೇ ನೇರ ಕಾರಣ – ಮೂರನೇ ಕಣ್ಣು (C. C. CAMERA ) ಗಳನ್ನೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸದೇ ಇರುವುದೇ ಸರಣಿ ಕಳ್ಳತನಕ್ಕೆ ರಹದಾರಿ..!! ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕಳ್ಳ ಯಾರು..? ಬಂಗಾರದ ಅಂಗಡಿಯಲ್ಲಿ ಕದ್ದ ಬಂಗಾರ ವೆಷ್ಟು.. ?

by EDITOR NEWS WARRIORS
0 comments

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಪೇಟೆಯಲ್ಲಿ ನಿರಂತರ ಸರಣಿ ಕಳ್ಳತನ ನೆಡೆಯುತ್ತಿದ್ದೂ, ಪೊಲೀಸ್ ಇಲಾಖೆಯೂ ಕಳ್ಳರಿಗೆ ಬಲೆ ಬೀಸುವಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.

ಸರಣಿ ಕಳ್ಳತನ ಹಿಂದೇ ತಾಳಗುಪ್ಪದಲ್ಲಿ ಕೊನೆಯ ರೈಲ್ವೆ ನಿಲ್ದಾಣವಾಗಿರುವುದೇ ಪ್ರಮುಖ ಕಾರಣವಾಗಿದೆ. ರಾತ್ರಿ ಸುಮಾರು 10:00 ಗಂಟೆಯಿಂದ 11:00 ಗಂಟೆ ಒಳಗೆ ಬರುವ ಬೆಂಗಳೂರು ರೈಲು ಇದೆ ರೈಲು ಮುಂಜಾನೆ 05:00 ಗಂಟೆಗೆ ಪುನಃ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುತ್ತದೆ. ಏತನ್ಮಧ್ಯೆ ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಬರುವ ಕಳ್ಳರು ತಾಳಗುಪ್ಪ ಪೇಟೆಯಲ್ಲಿನ ಅಂಗಡಿಗಳನ್ನೂ ಸರಣಿ ಕಳ್ಳತನ ಮಾಡಿ ಅಂಗಡಿಗಳನ್ನೂ ದೋಚಿ ಮುಂಜಾನೆ 05:00 ಗಂಟೆಗೆ ಹೊರಡುವ ರೈಲಿಗೆ ಹೋಗುತ್ತಿದ್ದಾರೆ.

ನಿನ್ನೆ ರಾತ್ರಿಯೂ ಸಹ ತಾಳಗುಪ್ಪ ಪೇಟೆಯಲ್ಲಿ ಸರಣಿ ಕಳ್ಳತನ ನೆಡೆದಿದ್ದೂ, ಬಂಗಾರದ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಹಸ್ಯ ಕ್ಯಾಮೆರಾದಲ್ಲಿ ಸರಿಯಾದ ಕಳ್ಳ ಯಾರು ?

ಬಂಗಾರದ ಅಂಗಡಿಯಲ್ಲಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುವ ಕಳ್ಳ ಯಾರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗ ವಾಗಬೇಕಾಗಿದೆ…

ಪೊಲೀಸ್ ಇಲಾಖೆಯೂ ಕಳ್ಳತನವಾಗಿರುವ ಸ್ಥಳದಲ್ಲಿದ್ದೂ, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಬೆರಳಚ್ಚುಗಾರರು, ಶ್ವಾನದಳ ಶಿವಮೊಗ್ಗ ನಗರದಿಂದ ಹೊರಟಿರುವ ಮಾಹಿತಿ ದೊರೆತಿದೆ.

ರೈಲ್ವೆ ಅಧಿಕಾರಿಗಳಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಮೂರನೇ ಕಣ್ಣು (C. C. CAMERA ) ಗಳನ್ನೂ ಅಳವಡಿಸುವಂತೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ…9449553305…..

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...