Home ಶಿವಮೊಗ್ಗಸಾಗರ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ – ಬರೋಬ್ಬರಿ 08,20,000/- ಮೌಲ್ಯದ ದುಬಾರಿ ಬೈಕ್ ಸಹಿತ ಕಳ್ಳರ ಬಂಧನ..!!

ಸಾಗರ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ – ಬರೋಬ್ಬರಿ 08,20,000/- ಮೌಲ್ಯದ ದುಬಾರಿ ಬೈಕ್ ಸಹಿತ ಕಳ್ಳರ ಬಂಧನ..!!

by EDITOR NEWS WARRIORS
0 comments

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬೈಕ್ ಪ್ರಕರಣ ವರದಿಯಾಗಿದ್ದರಿಂದ ಲಕ್ಷ್ಮಿ ಪ್ರಸಾದ್ (ಐಪಿಎಸ್ ) ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರು ಬೈಕ್ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಅದೇಶಿಸಿದ ಮೇರೆಗೆ ,

ರೋಹನ್ ಜಗದೀಶ್ (ಐಪಿಎಸ್ ) ಸಹಾಯಕ ಪೊಲೀಸ್ ಅಧೀಕ್ಷಕರು, ಸಹಾಯಕ ಪೊಲೀಸ್ ಸಾಗರ ಉಪ ವಿಭಾಗ ಸಾಗರ ಮತ್ತು ಕಾರ್ಗಲ್ ಸರ್ಕಲ್ ಇನ್ಸ್ಪೆಕ್ಟರ್, ಪ್ರಭಾರ ಸಾಗರ ನಗರ ಪೊಲೀಸ್ ಠಾಣೆ ಕೃಷ್ಣಪ್ಪ ಕೆ. ವಿ. ರವರ ಮಾರ್ಗದರ್ಶನದಲ್ಲಿ ಕಾರ್ಗಲ್ ಪೊಲೀಸ್ ಠಾಣಾ ಪೊಲೀಸ್ ಪಿ. ಎಸ್. ಐ. ತಿರುಮಲೇಶ್ ಮತ್ತು ಸಾಗರ ನಗರ ಪೊಲೀಸ್ ಠಾಣಾ ಪಿ. ಎಸ್. ಐ. ಟಿ. ಡಿ. ಸಾಗರ್ಕರ್ ರವರ ನೇತೃತ್ವದಲ್ಲಿ ಸಾಗರ ಪೊಲೀಸ್ ಅಪರಾಧ ಸಿಬ್ಬಂದಿಗಳಾದ ಎಚ್. ಸಿ. ರತ್ನಾಕರ್, ಸಿ. ಪಿ. ಸಿ. ಗಳಾದ ಶ್ರೀ ಸಂತೋಷ ನಾಯ್ಕ್, ಶ್ರೀಧರ್, ಯೋಗೇಶ್, ಲೋಕೇಶ್, ಮೈಲಾರಿ, ಭರತ್ ಕುಮಾರ್, ವಿಶ್ವನಾಥ್, ಮಂಜುನಾಥ್ ರವರನ್ನು ಒಳಗೊಂಡ ಪೊಲೀಸ್ ತಂಡ ,

ದಿನಾಂಕ 28/06/2022 ರ ಬೆಳಗಿನ ಜಾವ ಸಾಗರ ಪಟ್ಟಣದಲ್ಲಿ ಆರೋಪಿತರಾದ ( ಎ 1)ಸಮೀರ್ @ ಸೈಕ್ @ ಪ್ಯಾಟ್ರನ್ ತಂದೆ ಹಕಿಬ್ ಉಲ್ಲಾ 23 ವರ್ಷ, ಮುಸ್ಲಿಂ ಜಾತಿ, ಬೆಂಗಳೂರಿನಲ್ಲಿ ಸಿಗರೇಟ್ ಕಂಪನಿಯಲ್ಲಿ ಕೆಲಸ, 4 ನೇ ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಸ್ವಂತ ಮನೆ, ಎದುರು ಅಂಜನಾಪುರ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ – ಎ (2) ಮಹ್ಮದ್ ಖಾದ್ರಿ @ ಸುಹೇಲ್ @ ಮಾಕಿ @ ಪಠನ್, ತಂದೆ ಹುಸೇನ್ ಸಾಬ್ 19 ವರ್ಷ, ಮುಸ್ಲಿಂ ಜಾತಿ, ಕಾರ್ ಮೆಕ್ಯಾನಿಕ್ ಕೆಲಸ, (ನವುಲೇಯಲ್ಲಿರುವ ಎಕ್ಸ್ಪೋರ್ಟ್ ಗ್ಯಾರೇಜ್ ನಲ್ಲಿ ಕೆಲಸ ) ವಾಸ ಶಾಂತಿ ನಗರ ಲಾಸ್ಟ ಬಸ್ ನಿಲ್ದಾಣ ಹತ್ತಿರ ಬೇಕರಿ ಪಕ್ಕ ಕ್ಯಾಂಟೀನ್ ಶಿವಮೊಗ್ಗ – ಎ (3) ಜುನೈದ್ ಖಾನ್ @ ಡಾನ್ ತಂದೆ ಆಜೀಜ್ ಪಾಶ, 20 ವರ್ಷ, ಮುಸ್ಲಿಂ ಜಾತಿ, ಕೆಲಸ ಡ್ರೈವಿಂಗ್ ಕೆಲಸ, ವಾಸ 5 ನೇ ತಿರುವು, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ನಗರ, ರವರನ್ನು ಸಾಗರ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ,

ಆರೋಪಿತರು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ, ಭದ್ರಾವತಿ, ಹರಿಹರ, ದಾವಣಗೆರೆ, ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಗಳನ್ನೂ ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ ಆರೋಪಿತರನ್ನು ದಸ್ತಗಿರಿ ಮಾಡಿ ಸುಮಾರು 08,20,000/- ಮೌಲ್ಯದ ವಿವಿಧ ಕಂಪನಿಯ 06 ಬೈಕ್ ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರೂಪಡಿಸಲಾಯಿತು. ಬೈಕ್ ಕಳ್ಳರನ್ನು ಬಂಧಿಸಿ ಯಶಸ್ವಿಯಾದ ತಂಡಕ್ಕೆ ಲಕ್ಷ್ಮಿ ಪ್ರಸಾದ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಪೊಲೀಸ್ ಅಧೀಕ್ಷಕರು, ರೋಹನ್ ಜಗದೀಶ್ (ಐಪಿಎಸ್ ) ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ರವರು ಅಭಿನಂದನೆ ಸಲ್ಲಿಸಿರುತ್ತಾರೆ.

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...