
ಶಿವಮೊಗ್ಗ: ತುಂಗಾನಗರ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರಿಯಾಂಕ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಮಂಜುಳಾ 30 ವರ್ಷ ಮತ್ತು ಗಂಡ ದಿನೇಶ್ ನಡುವೆ ಜಗಳ ಆಗಿದ್ದು ಅದು ವಿಕೋಪಕ್ಕೆ ಹೋಗಿ ಗಂಡ ದಿನೇಶ್ ಚಾಕುವಿನಿಂದ ಹೆಂಡತಿಯ ಕುತ್ತಿಗೆಯನ್ನು ಚುಚ್ಚಿದ್ದಾನೆ..

ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ಗಂಡ :
ಗಂಡ ಹೆಂಡತಿಯರ ನಡುವೆ ನಿರಂತರವಾಗಿ ಜಗಳವಾಗುತ್ತಿತ್ತು. ಗಂಡ ದಿನೇಶ್ ಮೆಸ್ಕಾಂ ನೌಕರನಾಗಿದ್ದು. ಕುಡಿಯುವ ಅಭ್ಯಾಸ ಇದ್ದ ಈತನು ಪ್ರತಿನಿತ್ಯ ಮನೆಗೆ ಲೇಟಾಗಿ ಬರುತ್ತಿದ್ದ ಇದನ್ನು ಪ್ರಶ್ನಿಸಿ ಹೆಂಡತಿ ಜಗಳ ಮಾಡುತ್ತಿದ್ದಳು. ಇದು ಅತಿರೇಕಕ್ಕೆ ಹೋಗಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಅನೈತಿಕ ಸಂಬಂಧದ ಸುಳಿವು :
ಮದುವೆಯಾಗಿ 12 ವರ್ಷ ಕಳೆದಿರುವ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಜುಳ ಮತ್ತಿಘಟ್ಟದ ನಿವಾಸಿಯಾದ ರಾಗಿದ್ದಾರೆ.
ದಿನೇಶ್ ಮಂಜುಳ ಕುತ್ತಿಗೆ ಕೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಪತ್ನಿಯನ್ನ ಚಾಕುವಿನಿಂದ ಕೊಲೆ ಮಾಡಿ ತನ್ನ ಕೈಗಳನ್ನ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತುಂಗ ನಗರ ಪೊಲೀಸರು ಭೇಟಿ ನೀಡಿದ್ದಾರೆ. ಗಂಡ ಹೆಂಡತಿ ಪರಸ್ಪರ ಅನುಮಾನಾಸ್ಪದವಾಗಿ ಯಾವಾಗಲೂ ಜಗಳವಾಡುತ್ತಿದ್ದರಿಂದ ಇವರ ನಡುವೆ ಅನೈತಿಕ ಸಂಬಂಧದ ಶಂಕೆ ಕಾಡುತ್ತಿದೆ ಎನ್ನುವುದು ಕೆಲವು ಸ್ಥಳೀಯರ ಅಭಿಪ್ರಾಯ ಒಟ್ಟಾರೆಯಾಗಿ ಪೊಲೀಸರ ಸೂಕ್ತ ತನಿಖೆಯಿಂದ ಎಲ್ಲವೂ ಸಮಗ್ರವಾಗಿ ಹೊರ ಬರಬೇಕಾಗಿದೆ…
ರಘುರಾಜ್ ಹೆಚ್.ಕೆ…9449553305…

