ಶಿವಮೊಗ್ಗ : ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು. ಪ್ರಾಚಾರ್ಯರಾದ ಡಾ.ಎಚ್.ಎಸ್.ನಾಗಭೂಷಣ ಅವರು ಗಾಂಧಿ ಪ್ರತಿಮೆ ಹಾಗೂ ಶಾಸ್ತ್ರೀ ಜೀ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ.ಪವಿತ್ರಾ ಎಸ್.ಟಿ. ವಿಶೇಷ ಉಪನ್ಯಾಸ ನೀಡಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ಪ್ರಾಧ್ಯಾಪಕರಾದ ಡಾ.ನರೇಂದ್ರ ನಾಯಕ ಮತ್ತಿತರರಿದ್ದರು. ರಾಷ್ಟ್ರೀಯ ಎನ್.ಎಸ್.ಎಸ್.ಯುವ ಯೋಧ ಪ್ರಶಸ್ತಿ ಪುರಸ್ಕೃತ ನಾಗವೇಣಿ ಎನ್.ಮತ್ತವರ ತಂಡದಿಂದ ಗಾಂಧಿ ಸ್ಮೃತಿ, ಭಜನೆ ಕಾರ್ಯಕ್ರಮ ನಡೆಯಿತು.