
ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆ ಯು ಹಲವು ವರ್ಷಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನಡೆಸಿಕೊಂಡು ಬರುತ್ತಿದೆ. ಹೊರ ರಾಜ್ಯಗಳಲ್ಲೂ ಕೆಲವು ಕಾರ್ಯಕ್ರಮಗಳನ್ನು ನಡೆಸಿದೆ.
ಉದಾ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ.
ಇತ್ತೀಚೆಗೆ ಧರ್ಮಸ್ಥಳ,
ಕುವೆಂಪು ಅವರ ಕುಪ್ಪಳ್ಳಿ ಸೇರಿದಂತೆ ಹಲವೆಡೆ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಾರಿ ಜಾಗೃತಿ ಟ್ರಸ್ಟ್ ಮೈಸೂರಿನಲ್ಲಿ ಪುಸ್ತಕ ಬಿಡುಗಡೆ, ನಗೆ ಹಬ್ಬ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಿ ಸಾಧಕ ಮಹಿಳೆಯರಿಗೆ ಕೆಂಪಮ್ಮ ಪುರಸ್ಕಾರವನ್ನು ನೀಡಿದ ಸಂಭ್ರಮವು ಅವಿಸ್ಮರಣೀಯ
ಯುವ ಕವಿಗಳಿಗೆ ವೇದಿಕೆಗಳನ್ನು ಕಲ್ಪಿಸಿ ಕೊಡುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಯೋಜನೆಗಳು ಜಾಗೃತಿ ಟ್ರಸ್ಟ್ ನಿಂದ ನಿರಂತರವಾಗಿದೆ
30 -12 – 22 ಶುಕ್ರವಾರ ಕುವೆಂಪು ಜಯಂತಿ ಅಂಗವಾಗಿ
ಏರ್ಪಡಿಸಿರುವ ಸಾಹಿತ್ಯೋತ್ಸವ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಅದ್ದೂರಿಯಾಗಿ ನಡೆಯಲಿದೆ ಒಂದು ಗಾಯನ ಹಾಗೂ ಒಂದು ಕವನ ವಾಚನ ನಿರಂತರವಾಗಿ ನಡೆಯುತ್ತಿರುತ್ತದೆ.
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಕುವೆಂಪುರವರ ಕನ್ನಡಾಭಿಮಾನದ ಸಾಲುಗಳಿಗೆ ನಿಮ್ಮ ಗಾಯನ ಹಾಗೂ ನಿಮ್ಮ ಕವನ ವಾಚನಗಳು ಸುಮಧುರ ಮಲ್ಲಿಗೆಯಾಗಿ ಅರಳಿ ಬರಲಿ. ಕವಿ ಕಲ್ಪನೆಯಲ್ಲಿ ಕಾವೇರಿ ಸಂಭ್ರಮಧಾರೆಯಾಗಿ ಬರಲಿ
ಮಾತೃಭಾಷೆ ಮಾತೃಭೂಮಿ ಮಡಿಲಲ್ಲಿ ಉದ್ಯಾನವನದ ಸೊಬಗಿನಸಿರಿಯಲ್ಲಿ ನಾವೆಲ್ಲರೂ ಸೇರಿ ಸಂಭ್ರಮಿಸೋಣ ಸರ್ವರಿಗೂ ಪ್ರೋತ್ಸಾಹಿಸೋಣ. ಕುವೆಂಪುರವರ ಆದರ್ಶ ತತ್ವಗಳನ್ನು ಅನುಸರಿಸೋಣ
ಅವರ ಕಾವ್ಯಧಾರೆ ಸಾಗರದಲ್ಲಿ ಮಿಂದೇಳೋಣ
ನಮ್ಮೆಲ್ಲರ ಜ್ಞಾನಾರ್ಜನೆಗೆ ಸ್ಪೂರ್ತಿಯಾಗಿಸಿಕೊಳ್ಳೋಣ…
ತಾವು ಬನ್ನಿ ತಮ್ಮ ಸ್ನೇಹಿತರನ್ನು ಕರೆತನ್ನಿ.
ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ…
ದಿನಾಂಕ : 30-12-22, ಶುಕ್ರವಾರ
ಬೆಳಿಗ್ಗೆ : 10.15 ರಿಂದ.
ಸ್ಥಳ – ಶಾಂತಿನಗರ ನಂಜಪ್ಪ ಸರ್ಕಲ್ ಬಳಿ ಇರುವ ರಿಚ್ಮಂಡ್ ಟೌನ್ ಉದ್ಯಾನವನ ಟಿವಿ 9 ಬಳಿ ಬೆಂಗಳೂರು….
ರಘುರಾಜ್ ಹೆಚ್.ಕೆ..9449553305..


1 comment
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.