Home ರಾಜ್ಯರಾಜಾಹುಲಿ ಬಿಎಸ್ ವೈ, ಹಿಂದೂಹುಲಿ ಕೆ,ಎಸ್ ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರುಗಳು ಇಲ್ಲದ ಸದನದಲ್ಲಿ ಸಿದ್ದು & ಡಿಕೆ ಟೀಮ್ ಎದುರಿಸಲು ಬಿಜೆಪಿ ಸಜ್ಜು..! ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಗೆ ವಿರೋಧ ಪಕ್ಷ ನಾಯಕನ ಪಟ್ಟ ಸಾಧ್ಯತೆ‌..?!

ರಾಜಾಹುಲಿ ಬಿಎಸ್ ವೈ, ಹಿಂದೂಹುಲಿ ಕೆ,ಎಸ್ ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರುಗಳು ಇಲ್ಲದ ಸದನದಲ್ಲಿ ಸಿದ್ದು & ಡಿಕೆ ಟೀಮ್ ಎದುರಿಸಲು ಬಿಜೆಪಿ ಸಜ್ಜು..! ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಗೆ ವಿರೋಧ ಪಕ್ಷ ನಾಯಕನ ಪಟ್ಟ ಸಾಧ್ಯತೆ‌..?!

by EDITOR NEWS WARRIORS
0 comments

ಕರ್ನಾಟಕದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ತೆಗೆದುಕೊಂಡು ಸ್ಪಷ್ಟ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಿದೆ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಸೇರಿದಂತೆ ಎಂಟು ಜನ ಸಚಿವರ ಪ್ರಮಾಣವಚನ ಆಗಿದೆ.

ಇತ್ತ ಕಡೆ ಪ್ರಬಲ ಆಡಳಿತ ಪಕ್ಷವಾಗಿದ್ದ ಬಿಜೆಪಿ ಕೇವಲ 65 ಸ್ಥಾನಗಳನ್ನು ಪಡೆದುಕೊಂಡು ಹೀನಾಯ ಸ್ಥಿತಿಯಲ್ಲಿ ಸೋಲು ಅನುಭವಿಸಿದೆ. ಇನ್ನು ಜೆಡಿಎಸ್ 19 ಸ್ಥಾನಗಳಿಗೆ ತನ್ನ ಗೆಲುವಿನ ಓಟವನ್ನು ನಿಲ್ಲಿಸಿದೆ.

ಹಾಗಾಗಿ ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೆಸ್ಗೆ ಈಗ ಆಕ್ಸಿಜನ್ ಸಿಕ್ಕಂತಾಗಿದ್ದು ಆರೋಗ್ಯವಂತ ಬಿಜೆಪಿ ಕೋಮ ಹಂತ ತಲುಪಿದೆ.

ಕಾಂಗ್ರೆಸ್ಸೇನೋ ಸರ್ಕಾರ ರಚನೆ ಮಾಡಿ ಆಯಿತು ಆದರೆ ವಿರೋಧ ಪಕ್ಷದಲ್ಲಿ ಸಿದ್ದು ಅಂಡ್ ಟೀಮ್ ಅನ್ನು ಪ್ರಬಲವಾಗಿ ವಿರೋಧಿಸುವ ಪ್ರಶ್ನಿಸುವ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಬಿಜೆಪಿ ಇದೆ.

ಆದರೆ ಅದರ ಕೊರತೆ ಬಿಜೆಪಿಗೆ ಸದ್ಯ ಎದ್ದು ಕಾಣುತ್ತಿದೆ ಏಕೆಂದರೆ ಬಿಜೆಪಿಯ ಘಟಾನುಘಟಿ ನಾಯಕರುಗಳು ಸೋತಿದ್ದಾರೆ. ಇನ್ನು ಯಡಿಯೂರಪ್ಪ ಈಶ್ವರಪ್ಪ ರವರು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷವನ್ನೇ ಬಿಟ್ಟು ಹೋಗಿದ್ದಾರೆ. ಸಿಟಿ ರವಿ, ಶ್ರೀರಾಮುಲು, ಸುಧಾಕರ್, ಮಾಧುಸ್ವಾಮಿ, ಸೋಮಣ್ಣ ಅಂತಹ ಘಟಾನುಘಟಿ ನಾಯಕರುಗಳು ಸೋತಿದ್ದಾರೆ.

ಹಾಗಾಗಿ ಕಾಂಗ್ರೆಸ್ಸನ್ನು ಪ್ರಬಲವಾಗಿ ಸದನದಲ್ಲಿ ಎದುರಿಸಲು ಉತ್ತಮ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ನೋಡುವುದಾದರೆ ಮುಂಚೂಣಿಯಲ್ಲಿರುವ ಹೆಸರುಗಳು ಆರ್ ಅಶೋಕ್, ಬಸವನಗೌಡ ಪಾಟೀಲ್ ಯತ್ನಾಳ್, ಹಿರಿಯರಾದ ಆರಗ ಜ್ಞಾನೇಂದ್ರ, ಹೀಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ.

ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗುವ ಸಾಧ್ಯತೆ ಇದೆ ಏಕೆಂದರೆ ಆಡಳಿತಾತ್ಮಕವಾಗಿ ಆಳ ಅಗಲವನ್ನು ತಿಳಿದುಕೊಂಡಿರುವ ಬೊಮ್ಮಾಯಿ ಕಾನೂನು ವಿಚಾರವಾಗಿಯೂ ಹಣಕಾಸು ವಿಚಾರವಾಗಿಯೂ ಆರ್ಥಿಕ ವಿಚಾರವಾಗಿಯೂ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

ಹಾಗಾಗಿ ಪ್ರಬಲವಾಗಿ ಸಿದ್ದು& ಡಿಕೆ ಟೀಮ್ ಅನ್ನು ಎದುರಿಸಲು ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ಸಮರ್ಥರು ಎಂದು ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡುವ ಸಾಧ್ಯತೆ ಇದೆ..

ರಘುರಾಜ್ ಹೆಚ್.ಕೆ…9449553305….

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...