Wednesday, April 30, 2025
Google search engine
Homeಶಿವಮೊಗ್ಗಗೃಹ ಸಚಿವರಿಂದ ಸಾಗರ ಬಂಧೀಖಾನೆಗೆ ಬಿಡುಗಡೆಯ ಭಾಗ್ಯ ಸಿಗುತ್ತಾ?

ಗೃಹ ಸಚಿವರಿಂದ ಸಾಗರ ಬಂಧೀಖಾನೆಗೆ ಬಿಡುಗಡೆಯ ಭಾಗ್ಯ ಸಿಗುತ್ತಾ?

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸುಸಜ್ಜಿತವಾದ ಸುಮಾರು 54 ಜನ ವಿಚಾರಣಾಧೀನ ಆರೋಪಿತರನ್ನು ಬಂಧಿಸಿಡಲು ತಯಾರಾಗಿರುವ ಸಾಗರದ ಉಪ ಕಾರಾಗೃಹ ಇನ್ನೂ ಬಿಡುಗಡೆಯ ಭಾಗ್ಯವನ್ನು ಕಂಡಿಲ್ಲ.

ಸಾಗರ, ಹೊಸನಗರ, ಸೊರಬ ವ್ಯಾಪ್ತಿಯ ಆರೋಪಿತರು ಮಾನ್ಯ ನ್ಯಾಯಾಲಯದ ಆದೇಶ ಮೇರೆಗೆ ಇದೆ ಕಾರಾಗೃಹಕ್ಕೆ ಶಿಕ್ಷೆಯ ತೀರ್ಪಿ ಗೆ ಒಳ ಪಡೆದವರನ್ನು ಸಾಗರದ ಉಪ ಕಾರಾಗೃಹಗಳಲ್ಲಿ ಬಂದಿಸಿ ಇಡಲಾಗುತ್ತದೆ.ಆದರೇ ಈ ಕಾರಾಗೃಹ ಕಳೆದ ಹಲವು ವರ್ಷಗಳಿಂದ ರಿಪೇರಿ ಎಂಬ ಕುಂಟುನೆಪವೊಡ್ಡಿ ಮುಚ್ಚಿದ್ದು ಈ ಉಪ ಕಾರಾಗೃಹ ಇದುವರೆಗೂ ಪ್ರಾರಂಭವಾಗಿಲ್ಲ, ಸಾಗರದ ಉಪ ಕಾರಾಗೃಹ ಸುತ್ತಲೂ ಅತ್ಯಾಧುನಿಕ ಮೂರನೇ ಕಣ್ಣು(ಸಿ. ಸಿ. ಕ್ಯಾಮೆರಾ ) ಗಳು ಅಳವಡಿಸಿದ್ದಲ್ಲದೇ,ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಉಪ ಕಾರಾಗೃಹ ರಿಪೇರಿ ಮುಗಿದು ವರ್ಷಗಳೇ ಕಳೆದರೂ ಬಂಧಿಖಾನೆ ಇಲಾಖೆಯ ಮುಖ್ಯಸ್ಥರ ಬೇಜವಾಬ್ದಾರಿತನದಿಂದ ಸುಸಜ್ಜಿತ ಉಪ ಕಾರಾಗೃಹ ಪ್ರಾರಂಭವಾಗದೇ ಇರುವುದರಿಂದ ಸರಕಾರದ ಭೋಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ,

ಆರೋಪಿತರನ್ನು ಮಾನ್ಯ ನ್ಯಾಯಾಲಯದಿಂದ ಶಿವಮೊಗ್ಗದ ಮಾಚೇನಹಳ್ಳಿಯ ಕೇಂದ್ರ ಕಾರಾಗ್ರಹಕ್ಕೆ ಕರೆದುಕೊಂಡು ಹೋಗಿ ಬಿಟ್ಟುಬರುವುದು, ಅಲ್ಲದೇ ಆರೋಪಿತರ ವಿಚಾರಣಾ ದಿನಾಂಕದಂದು ಪುನಃ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಸಾಗರ,ಸೊರಬ, ಹೊಸನಗರ ಮಾನ್ಯ ನ್ಯಾಯಾಲಯಗಳಿಗೆ ಕರೆದುಕೊಂಡು ಬರುವುದು ಇದೆಲ್ಲಾ ಪೊಲೀಸ್ ಇಲಾಖೆ ನಿರ್ವಹಿಸುತ್ತಿರುವುದು ಕಷ್ಟಕರವಾಗಿರುತ್ತದೆ. ಅಲ್ಲದೇ ಆರೋಪಿತರ ಕುಟುಂಬದವರು ಭೇಟಿ ಮಾಡಲು ದೂರದ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಹೋಗಿಬರಲು ಸಹ ಎಲ್ಲೋ ಒಂದುಕಡೆ ಹರಸಾಹಸ ಆಗುತ್ತಿರುವ ಹಿನ್ನೆಲೆ ಕೂಡಲೇ ಸಾಗರದ ಉಪ ಕಾರಾಗೃಹ ಪ್ರಾರಂಭ ಮಾಡಿ ಸರ್ಕಾರಕ್ಕೆ ಆಗುತ್ತಿರುವ ನಷ್ಟ,ಆರೋಪಿತರಿಗೆ ಹಾಗೂ ಅವರ ಸಂಬಂಧಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಆದಷ್ಟು ಬೇಗ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಸ್ಥಳೀಯರ ಒತ್ತಾಯ…

ವರದಿ..ಓಂಕಾರ ಎಸ್, ವಿ ತಾಳಗುಪ್ಪ

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...