Wednesday, April 30, 2025
Google search engine
Homeರಾಜ್ಯಗೌಡ್ರ ಗದ್ಲ ದಲ್ಲಿ ಗೆಲ್ಲೋರು ಯಾರು? ಹಣಬಲವೋ ಜನಬಲವೋ..!

ಗೌಡ್ರ ಗದ್ಲ ದಲ್ಲಿ ಗೆಲ್ಲೋರು ಯಾರು? ಹಣಬಲವೋ ಜನಬಲವೋ..!

ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸ್ಥಾನದ ಚುನಾವಣೆ ದಿನದಿಂದ ದಿನಕ್ಕೆ ಗರಿಗೆದರಿದ್ದು ಅಧಿಕಾರ ಹಿಡಿಯಲು ಭದ್ರಾವತಿ- ತೀರ್ಥಹಳ್ಳಿ ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ.

ತೀರ್ಥಹಳ್ಳಿ ಮಲೆನಾಡು ಗೌಡರ ಪಾರುಪತ್ಯ ಜಾಸ್ತಿ:

ಶಿವಮೊಗ್ಗ ಮತ್ತು ಉತ್ತರ ಕನ್ನಡಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ತೀರ್ಥಹಳ್ಳಿ ಮಲೆನಾಡು ಗೌಡರ ಪಾರುಪತ್ಯ ಹೆಚ್ಚು ಮತ ಕ್ಷೇತ್ರದಲ್ಲಿ ತೀರ್ಥಹಳ್ಳಿ, ಭದ್ರಾವತಿಯಲ್ಲಿ ಹೆಚ್ಚು ಮತದಾರರು ಇದ್ದಾರೆ. ಶಿವಮೊಗ್ಗ ನಂತರದಸ್ಥಾನದಲ್ಲಿದೆ. ಕಳೆದ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಡಿ.ವಿ. ರಮೇಶ್‌ ಅವರು ಈ ಬಾರಿ ಕಣದಿಂದದೂರ ಉಳಿದಿದ್ದಾರೆ.

ಒಂಬತ್ತು ಮಂದಿ ಕಣದಲ್ಲಿದ್ದಾರೆ:

ಕಣದಲ್ಲಿ 9 ಮಂದಿ ಅಭ್ಯರ್ಥಿಗಳಿದ್ದು 9 ಮಂದಿಯಲ್ಲಿ ರಜನಿಕಾಂತ, ಕೆ.ಎಸ್‌.ರವಿಕುಮಾರ್‌ ಶಿವಮೊಗ್ಗದವರಾಗಿದ್ದರೆ ಶಶಿಧರಎಚ್‌.ಡಿ., ಎಸ್‌.ಕೆ.ಧರ್ಮೇಶ್‌, ಚೇತನ ಹೆಗ್ಡೆ,ಲೋಕೇಶ್‌ ಎಸ್‌.ವಿ., ಕುಮಾರ್‌ ತೀರ್ಥಹಳ್ಳಿತಾಲೂಕಿನವರು. ಭದ್ರಾವತಿ ತಾಲೂಕಿನಿಂದ ಎಸ್‌.ಕುಮಾರ್‌, ನಾಗರಾಜ ಟಿ.ಎನ್‌. ಕಣದಲ್ಲಿದ್ದಾರೆ.

ಮೂರು ಜನ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ:

ಭದ್ರಾವತಿ: ತಾಲೂಕಿನಿಂದ ಈಬಾರಿ ಒಮ್ಮತದ ಅಭ್ಯರ್ಥಿಯಾಗಿ ಜಿಪಂ ಮಾಜಿಸದಸ್ಯ ಎಸ್‌. ಕುಮಾರ್‌ ಅವರು ಕಣಕ್ಕಿಳಿದಿದ್ದು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಮಾಜಿ ಶಾಸಕದಿ.ಎಂ.ಜೆ. ಅಪ್ಪಾಜಿ ಒಡನಾಡಿಯಾಗಿರುವ ಇವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದು ಪ್ರಬಲ ಪೈಪೋಟಿ ಒಡ್ಡಿದ್ದಾರೆ.

ತೀರ್ಥಹಳ್ಳಿ : ಭದ್ರಾವತಿಯ ಎಸ್ ಕುಮಾರ್ ಗೆ ಪ್ರಬಲ ಪೈಪೋಟಿ ಒಡ್ಡಿರುವುದು ತೀರ್ಥಹಳ್ಳಿಯ ಎಸ್‌.ಕೆ.ಧರ್ಮೇಶ್‌. ಅವರು ವೃತ್ತಿಯಿಂದ ಗುತ್ತಿಗೆದಾರರಾಗಿದ್ದು ಕ್ಷೇತ್ರದಲ್ಲಿ ಪರಿಚಯ ಹೊಂದಿದ್ದು. ಕಳೆದ ಒಂದು ವರ್ಷದಿಂದ ಚುನಾವಣೆ ತಯಾರಿಯಲ್ಲಿದ್ದಾರೆ. 20 ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದೇನೆ ಹಾಗಾಗಿ ಗೆಲ್ಲುವ ವಿಶ್ವಾಸವಿದೆ ಎನ್ನುವ ನಿರೀಕ್ಷೆ ಇವರದು.

ಸೈಲೆಂಟ್ ಆಗಿದ್ದು ಪೈಪೋಟಿ ನೀಡುತ್ತಿರುವ ವಕೀಲರು:

ಕಳೆದ ಬಾರಿ ಚುನಾವಣೆಗೆ ನಿಂತು ಸೋತಿರುವ ಸರಳ ಲೋಕೇಶ್ ಅವರು ಇವರಿಬ್ಬರ ನಡುವೆ ಪೈಪೋಟಿ ನೀಡುತ್ತಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ಎಸ್‌.ವಿ. ಲೋಕೇಶ್‌ ಅವರು ಹೆಸರು ಸ್ಪರ್ಧಾಕಣದಲ್ಲಿ ಬಲವಾಗಿ ಕೇಳಿಬರುತ್ತಿದೆ. ಮಲೆನಾಡು ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವ ಇವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಶಿವಮೊಗ್ಗದ ಕೆ.ಎಸ್‌. ರವಿಕುಮಾರ್‌ ಭ್ರಷ್ಟಾಚಾರರಹಿತ ಆಡಳಿತ ನೀಡುವ ಭರವಸೆ ಮೇಲೆ ಮತಕೇಳುತ್ತಿದ್ದಾರೆ.

ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹಣಬಲ ಇತ್ತೀಚಿಗೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಅದು ಈ ಚುನಾವಣೆಯಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಕಾದುನೋಡಬೇಕು.

ಒಟ್ಟಾರೆಯಾಗಿ ಸಮಾಜಕ್ಕೆ ಒಂದಷ್ಟು ಒಳ್ಳೆಯ ಕಾರ್ಯವನ್ನು ಮಾಡುವ ವ್ಯಕ್ತಿ ಆಯ್ಕೆಯಾಗಿ ಬಂದರೆ ಎಲ್ಲರಿಗೂ ಒಳಿತು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...