Sunday, June 15, 2025
Google search engine
Homeರಾಜ್ಯ"ಶ್ರೀಗಂಧ” ಚಿತ್ರದ ಚಿತ್ರೀಕರಣ ಆರಂಭ..!

“ಶ್ರೀಗಂಧ” ಚಿತ್ರದ ಚಿತ್ರೀಕರಣ ಆರಂಭ..!


  • ಧಾರವಾಡ : ಶ್ರೀ ಸಿದ್ಧಿವಿನಾಯಕ ಪ್ರೊಡಕ್ಷನ್ ಅವರ ಶ್ರೀಮತಿ ಅಶ್ವಿನಿ ಆನಂದ ಜೋಶಿ ಅರ್ಪಿಸುವ ‘ಶ್ರೀ ಗಂಧ ’(ನಿನಗೆಷ್ಟು ಬಂಧನ) ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡದ ವಿನಾಯಕ ನಗರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

  • ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿ ಅಧ್ಯಕ್ಷರು, ಸಾಹಿತಿಗಳಾದ ಕವಿರತ್ನ ಡಾ.ವಿ.ನಾಗೇಂದ್ರಪ್ರಸಾದ ಕ್ಯಾಮರಾಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಹ್ಯಾಟ್ರಿಕ್ ಡೈರಕ್ಟರ್ ನಾಗೇಂದ್ರ ಮಾಗಡಿ ಕ್ಲ್ಯಾಪ್ ತೋರಿಸುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟರು .
    ನಂತರ ಮಾತನಾಡಿದ ಕವಿರತ್ನ ಡಾ.ವಿ.ನಾಗೇಂದ್ರಪ್ರಸಾದ ಅವರು ಉತ್ತರ ಕರ್ನಾಟಕದಲ್ಲಿ ಇನ್ನೂ ಹೆಚ್ಚೆಚ್ಚು ಚಲನಚಿತ್ರಗಳು ನಿರ್ಮಾಣವಾಗಲಿ, ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಸಿಕ್ಕಲಿ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು.
  • ಹ್ಯಾಟ್ರಿಕ್ ಡೈರಕ್ಟರ್ ನಾಗೇಂದ್ರ ಮಾಗಡಿ ಮಾತನಾಡಿ ಚಿತ್ರರಂಗದಲ್ಲಿ ಈ ಭಾಗದ ಹಲವು ಪ್ರತಿಭೆಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
  • ಇಲ್ಲಿ ಶ್ರಮಪಟ್ಟು ದುಡಿದರೆ ಅವಕಾಶಗಳು ತಾನಾಗೇ ಬರುತ್ತವೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದರು. ಈ ಸಂದರ್ಭದಲ್ಲಿ ನಿದೇಶಕರಾದ ಟಿ.ಎನ್.ನಾಗೇಶ್, ಕೋಟಿ ರಮೇಶ್, ಕವಿವಿ ಸಿಂಡಿಕೇಟ್ ಸದಸ್ಯರು, ಚಿತ್ರನಟರಾದ ಡಾ.ಕಲ್ಮೇಶ್ ಹಾವೇರಿಪೇಟ , ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ ಹಂಡಗಿ .ನಿರ್ದೇಶಕ ಅರವಿಂದ ಮುಳಗುಂದ, ಬಿ.ಎಸ್.ಗುಜಗೊಂಡ, ಎಸ್.ಡಿ.ಸಾವಟಗಿ, ಎಮ್.ಎಸ್.ಸೂರ್ಯವಂಶಿ, ಎಸ್.ಡಿ.ಗುಡದಪ್ಪನವರ, ರಾಹುಲ್ ದತ್ತ ಪ್ರಸಾದ , ಬಸವರಾಜ ಹೂಗಾರ, ಲಕ್ಷ್ಮೀ ಬಡಿಗೇರ,ಆನಂದ ಜೋಶಿ, ಮಧು ಜೋಶಿ, ಮಹಾಂತೇಶ್ ಹಳ್ಳೂರ, ನಿರ್ಮಾಪಕ,ನಟ ರೇಣುಕುಮಾರ ಸಂಸ್ಥಾನಮಠ, ರಾಜೀವಸಿಂಗ್ ಮೊದಲಾದವರು ಉಪಸ್ಥಿತರಿದ್ದರು.

  • ತಾರಾಗಣದಲ್ಲಿ ಆರುಂಧತಿ, ಶ್ರೀಯಾ ಪಾವನಾ, ಅರವಿಂದ ಮುಳಗುಂದ, ಆನಂದ ಜೋಶಿ, ರೇಣುಕುಮಾರ ಸಂಸ್ಥಾನಮಠ, ಮಹಾಂತೇಶ ಹಳ್ಳೂರ, ಎಂ.ಆರ್.ಪಾಲ್ತಿ, ಅವಿನಾಶ ಗಂಜಿಹಾಳ, ರಘು ತುಮಕೂರ, ರಾಕೇಶ , ಲಕ್ಷ್ಮೀ ಬಡಿಗೇರ, ಸುಮಾ ದೇಸಾಯಿ, ಪೂರ್ಣಿಮಾ ಪದಕಿ, ಮೇಘನಾ ಟಕ್ಕಳಕಿ, ಅಮೃತಾ,ಸಿದ್ದುಕೃಷ್ಣ ಡೇಕಣೆ,ವ್ಯಾಸರು ಜೋಶಿ, ಶಿವು ನಾಗೂರ, ಪಂಚಾಕ್ಷರಿ,ಮಂಜು ಸಂಶಿ ಅತಿಥಿ ಪಾತ್ರದಲ್ಲಿ ಚಿತ್ರನಿಮಾಪಕ, ನಟ ಡಾ.ಕಲ್ಮೇಶ ಹಾವೇರಿಪೇಟ್ ಮೊದಲಾದವರಿದ್ದಾರೆ. ಛಾಯಾಗ್ರಹಣ,ಸಂಕಲನ, ರಾಹುಲ್ ದತ್ತಪ್ರಸಾದ , ಕಥೆ-ಸಂಭಾಷಣೆ ಮಧು ಜೋಶಿ, ಸಾಹಿತ್ಯ ಪ್ರಮೋದ ಜೋಶಿ, ಸಂಗೀತ ಮೊಸೆಸ್ ಗಿಲ್, ಪ್ರಸಾಧನ ಶ್ರೀಕಾಂತ ಕುಲಕರ್ಣಿ, ವಸ್ತ್ರಾಲಂಕಾರ ಕೀರ್ತಿ ಅರವಿಂದ್,ಸಹಾಯಕ ನಿರ್ದೇಶನ ಶ್ರೇಯಸ್ ಸಿಂಧೆ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ , ಅವಿನಾಶ ಗಂಜಿಹಾಳ, ಸಹಕಾರ ಶ್ರೀಹರಿ ಜೋಶಿ, ನಾರಾಯಣ,ರಾಘವೇಂದ್ರ ಬಿಜಾಪೂರ,ಮುರಳಿ ಮುಳಗುಂದ ಚಿತ್ರಕಥೆ-ನಿರ್ದೇಶನ ಮೂರು ಕನ್ನಡ ಚಲನಚಿತ್ರಗಳನ್ನು ಮತ್ತು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಯುವ ಪ್ರತಿಭಾವಂತ ನಿರ್ದೇಶಕ ಅರವಿಂದ ಮುಳಗುಂದ ಮಾಡಿದ್ದು ಈ ಚಿತ್ರವನ್ನು ಅಕ್ಷಯ ಆನಂದ ಜೋಶಿ ನಿರ್ಮಿಸುತ್ತಿದ್ದಾರೆ.

  • ವರದಿ: ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!