Wednesday, April 30, 2025
Google search engine
Homeಶಿವಮೊಗ್ಗ"ಹಣದ ಹಿಂದೆ ಹೋಗದೆ ಜನರ ಜೊತೆ ಹೋದವರನ್ನು ಸಮಾಜ ಎಂದಿಗೂ ಮರೆಯದು"

“ಹಣದ ಹಿಂದೆ ಹೋಗದೆ ಜನರ ಜೊತೆ ಹೋದವರನ್ನು ಸಮಾಜ ಎಂದಿಗೂ ಮರೆಯದು”

# ಟಿ ವಿ ಸತೀಶ #

ಹಣದ ಹಿಂದೆ ಹೋಗದೆ ಜನರ ಜೊತೆ ಹೋದವರನ್ನು, ಜನಪರ ಕಾಳಜಿಗಳಿಂದ ಶ್ರಮಿಸಿದವರನ್ನು ಸಮಾಜ ಎಂದಿಗೂ ಮರೆಯದು ಮಾತ್ರವಲ್ಲ ಅಂತವರನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತದೆ ಮತ್ತು ಅಂತವರ ಖುಷಿಯನ್ನು ಸಂಭ್ರಮಿಸುತ್ತದೆ ಎಂಬುದಕ್ಕೆ ಡಾ.ಉಪಾಧ್ಯಾಯರವರ ಬದುಕೇ ಸಾಕ್ಷಿ.
ವೃತ್ತಿ ಬದುಕಿನಿಂದ ನಿವೃತ್ತರಾಗಿ ಸುಮಾರು ಎರಡು ದಶಕಗಳಷ್ಟಾಗಿದ್ದರೂ ಸಹೋದ್ಯೋಗಿಗಳು ಮತ್ತು ಜನಮಾನಸದಲ್ಲಿ ಇಂದಿಗೂ ಇವರು ಸ್ಥಾನ ಪಡೆದಿರುವುದು ಇವರ ಜನಪರ ಕಾಳಜಿ, ಬದ್ದತೆಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ. ಬದುಕಿಗೆ ಹಣ ಬೇಕು ನಿಜ ,ಆದರೆ ಹಣವೇ ಬದುಕಾಗಬಾರದು.ಹಣದ ಹಿಂದೆ ಹೋದವರು ಎಷ್ಟೇ ಗುಡ್ಡೆ ಹಾಕಿಟ್ಟರೂ ಅತೃಪ್ತಿಯಲ್ಲೇ ಬದುಕು ಮುಗಿಸಿ ಹೊರಡಬೇಕಾದೀತೇ ಹೊರತು ಬದುಕಿನ ನೈಜ ತೃಪ್ತಿಯನ್ನೆಂದೂ ಪಡೆಯಲಾರರು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.ಅವರು ತೀರ್ಥಹಳ್ಳಿಯ ಜನಪ್ರಿಯ ವೈದ್ಯ ಡಾ.ಪಿ ಎಸ್ ಉಪಾಧ್ಯಾಯರ ಜನ್ಮದಿನದಂದು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಗೌರವಿಸಿ, ಶುಭಹಾರೈಸಿ ಮಾತನಾಡಿದರು.
ಮುಂದುವರೆದು, ಡಾ.ಉಪಾಧ್ಯಾಯರವರ ಬದುಕು ನಮಗೆ ಮಾದರಿ.ನಮ್ಮ‌ ಯುವ ಜನತೆ ಇಂತವರಿಂದ ಪ್ರೇರಣೆ ಪಡೆಯುವಂತಾಗಲಿ,ಅದರಿಂದ ಸಮಾಜಕ್ಕೆ ಹೆಚ್ಚಿನ ಸೇವೆ ದೊರಕುವಂತಾಗಲಿ ಎಂದು ಆಶಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಹೆಚ್ ಸಿ, ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಸುಭಾಷ್, ಉಪಾಧ್ಯಕ್ಷೆ ತಿಲಕಮ್ಮ, ಪದಾಧಿಕಾರಿಗಳಾದ ಶಿವಶಂಕರ್, ಶ್ರೀಲತಾ, ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಅರವಿಂದ್, ಜೆ ಸಿ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ, ಮೇಟ್ರನ್ ಪಾರ್ವತಿ ಭಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಖಜಾಂಚಿ ಉಷಾ, ಸಮಾಜ ಸೇವಕರಾದ ಟಿ ಜಿ ಸೋಮಶೇಖರ್, ಅವಿನಾಶ್, ಕಾಡಪ್ಪ ಗೌಡ ಮತ್ತಿತರತಿದ್ದರು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...