Thursday, May 1, 2025
Google search engine
Homeಶಿವಮೊಗ್ಗಶಿವಮೊಗ್ಗ ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಕಾಮಗಾರಿ ಅಬ್ಬಾ..!! ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ನೀವೇ ಒಂದು ಸಲ...

ಶಿವಮೊಗ್ಗ ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಕಾಮಗಾರಿ ಅಬ್ಬಾ..!! ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ನೀವೇ ಒಂದು ಸಲ ನೋಡಿಬಿಡಿ ಕಣ್ತುಂಬಿಕೊಳ್ಳಿ..!!

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಶಿವಮೊಗ್ಗ ಮೊದಲನೇ ಸ್ಥಾನದಲ್ಲಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

ಏಕೆಂದರೆ ಸ್ಮಾರ್ಟ್ ಸಿಟಿ ಕಾಮಗಾರಿ ಅಷ್ಟು ಸ್ಮಾರ್ಟಾಗಿ ನಡೆಯುತ್ತಿದೆ. ಈಗಾಗಲೇ ಹಲವಾರು ಅನಾಹುತಗಳನ್ನು ನೋಡಿರುವ ಶಿವಮೊಗ್ಗದ ಜನತೆಗೆ ಈಗ ಒಂದು ಹೊಸ ಸುದ್ದಿ ಕೋಟೆ ರಸ್ತೆಯ ಕೋರ್ಪಲಯ್ಯ ಛತ್ರದ ಬಳಿ ಪುರಾತನ ಕಾಲದಿಂದಿರುವ ಇರುವ ಅರಳಿ ಮರಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಅವರು ಉಸಿರಾಡಲು ಬಿಡದೆ ಸುತ್ತಲೂ ಕಾಂಕ್ರೀಟ್ ಹಾಕಿ ಮುಚ್ಚಿರುವುದು ಇವರ ಸ್ಮಾರ್ಟ್ ಕಾಮಗಾರಿಯನ್ನು ತೋರಿಸುತ್ತದೆ.

ಸಾಮಾನ್ಯವಾಗಿ ಮರಗಳ ಸುತ್ತಲು ಕಾಂಕ್ರೀಟ್ ಹಾಕುವಾಗ ಮರಗಳ ಮಧ್ಯ ಜಾಗಬಿಟ್ಟು ಒಂದಷ್ಟು ಮಣ್ಣನ್ನು ಇಟ್ಟು ಸುತ್ತಲೂ ಕಟ್ಟೆ ಕಟ್ಟುತ್ತಾರೆ.

ಆದರೆ ಪುರಾತನ ಕಾಲದಿಂದಲೂ ಇರುವ ಜನರಿಗೆ ವೈಜ್ಞಾನಿಕವಾಗಿ ಉಸಿರಾಟಕ್ಕೆ ಅನುಕೂಲವಾಗುವ ಅರಳಿಮರಕ್ಕೆ ಸುತ್ತಲೂ ಜಾಗ ಬಿಡದೆ ಕಾಂಕ್ರೀಟ್ ನಿಂದ ನಿರ್ಮಾಣ ವಾಗಿರುವ ಕಟ್ಟಡ ಕಟ್ಟೆಕಟ್ಟಿ ಮರಕ್ಕೆ ಉಸಿರಾಟ ಕ್ರಿಯೆ ತೊಂದರೆ ಯಾಗುವಂತಹ ಮಹಾತ್ಕಾರ್ಯವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡಿರುತ್ತಾರೆ .

ಕೂಡಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಂಭೀರವಾಗಿ ಗಮನಿಸಿ ತೆರವುಗೊಳಿಸಬೇಕು ಮುಂದೆ ಕೂಡ ಇಂತಹ ಕೆಲಸವನ್ನು ಮಾಡುವಾಗ ಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು.

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..!