Wednesday, April 30, 2025
Google search engine
Homeಶಿವಮೊಗ್ಗಆರೋಗ್ಯಸರ್ಕಾರಿ ಶಾಲಾ ಶಿಕ್ಷಕಿಯ ಎಡವಟ್ಟು ಅವೈಜ್ಞಾನಿಕ ಚರಂಡಿಗೆ ಪೈಪ್ ಅಳವಡಿಕೆ ..!!ಚರಂಡಿಯಿಂದ ಬಚ್ಚಲು ನೀರು ರಸ್ತೆಗೆ...

ಸರ್ಕಾರಿ ಶಾಲಾ ಶಿಕ್ಷಕಿಯ ಎಡವಟ್ಟು ಅವೈಜ್ಞಾನಿಕ ಚರಂಡಿಗೆ ಪೈಪ್ ಅಳವಡಿಕೆ ..!!ಚರಂಡಿಯಿಂದ ಬಚ್ಚಲು ನೀರು ರಸ್ತೆಗೆ -ಪಾದಚಾರಿಗಳಿಗೆ ನಿತ್ಯ ಕಿರಿಕಿರಿ – ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬಿಲ್ ಕಲೆಕ್ಟರ್ ಮನೆ ಎದುರೇ ಈ ಸಮಸ್ಯೆ – ತಾಳಗುಪ್ಪ ಗ್ರಾಮಪಂಚಾಯಿತಿಯ ಕುಂಭಕರ್ಣ ನಿದ್ರೆಗೆ..!!

ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ದುರಾಡಳಿತಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ರಾಷ್ಟ್ರೀಯ ಹೆದ್ದಾರಿ ಅಷ್ಟೇ ಅಲ್ಲದೇ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮನೆ ಎದುರೇ ಈ ಅವ್ಯವಸ್ಥೆ. ಈ ಹಿಂದೇ ಸುಮಾರು 60000/- ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ಅನುದಾನ ವಿನಿಯೋಗಿಸಿ ಚರಂಡಿ ಕಾಮಗಾರಿ ನೆಡೆಸಿದ್ದರೂ ಪಾದಚಾರಿಗಳು ಹಾಗೂ ವಾಹನ ಸವಾರರ ಕಿರಿಕಿರಿ ತಪ್ಪಿಲ್ಲ. ಸರ್ಕಾರಿ ಶಾಲಾ ಶಿಕ್ಷಕಿಯ ಮಾಲೀಕತ್ವದ ಈ ಕಟ್ಟಡ ಮಾಲೀಕರು ಚರಂಡಿಗೆ ಅಡ್ಡಲಾಗಿ ಅವೈಜ್ಞಾನಿಕವಾಗಿ ಪೈಪ್ ಅಳವಡಿಸಿದ ಪರಿಣಾಮ ಸುಮಾರು 50 ಕ್ಕೂ ಹೆಚ್ಚಿನ ಮನೆಗಳಿಂದ ಬಚ್ಚಲು ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದೇ ಹೆದ್ದಾರಿಯಲ್ಲಿ ಹರಿಯುತ್ತಿದ್ದೂ ಪಾದಚಾರಿಗಳುವಾಹನ ಸವಾರರು ಅದರಲ್ಲೂ ಶಾಲಾ ಕಾಲೇಜು ಮಕ್ಕಳಿಗೆ ಹೆದ್ದಾರಿಯಲ್ಲಿ ಹರಿಯುವ ಬಚ್ಚಲು ನೀರು ವೇಗವಾಗಿ ಸಂಚರಿಸುವ ವಾಹನಗಳು ಬಚ್ಚಲು ನೀರಿನ ಮೇಲೆ ಸಂಚರಿಸಿದಾಗ ಪಾದಚರಿಗಳಿಗೆ ಸಿಡಿಯುವುದು ಸರ್ವೇಸಾಮಾನ್ಯವಾಗಿದ್ದೂ ಈ ಬಗ್ಗೆ ಗ್ರಾಮ ಪಂಚಾಯಿತಿ ಕಣ್ಣಿದ್ದೂ ಕುರುಡುತನದತ್ತ ದಿವ್ಯ ನಿರ್ಲಕ್ಷತನ ವಹಿಸಿರುವುದು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕಿಯಾಗಿ ತಮ್ಮಿಂದ – ತಮ್ಮ ತಪ್ಪಿನಿಂದ ಈ ರೀತಿ ಅವ್ಯವಸ್ಥೆ ಕಣ್ಣಾರೆ ಕಂಡು ಸುಮ್ಮನೆಯಿರುವುದು ನೋಡಿದರೆ ಇನ್ನೂ ಸ್ವಚ್ಛತೆ ಬಗ್ಗೆ ಶಾಲಾ ಮಕ್ಕಳಿಗೆ ಯಾವ ರೀತಿ ಭೋಧಿಸುತ್ತಾರೆ ಎಂಬುದೇ ಯಕ್ಷ ಪ್ರೆಶ್ನೆಯಾಗಿದೆ

ಇನ್ನೂ ಮುಂದಾದರೂ ಚರಂಡಿಗೆ ಅಳವಡಿಸಿದ ಅವೈಜ್ಞಾನಿಕ ಪೈಪ್ ತೆರವು ಸರಾಗವಾಗಿ ಚರಂಡಿಯಲ್ಲೇ ಬಚ್ಚಲು ನೀರು ಹರಿಯುವಂತೆ ಸೂಕ್ತ ಕ್ರಮಕ್ಕೆ ಮುಂದಾಗಲಿ ಸಾಂಕ್ರಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಲಿ ..

ಓಂಕಾರ ಎಸ್. ವಿ. ತಾಳಗುಪ್ಪ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...