
ತೀರ್ಥಹಳ್ಳಿ : ತಾಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಪತ್ರಕರ್ತರಾದ ಅನಿಲ್ ವಿಧಾತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅನಿಲ್ ವಿಧಾತ ಅವರು ಅಧಿಕ ಮತಗಳ ಅಂತರದಿಂದ ಗ್ರಾಮಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು.
ಸ್ಥಳೀಯ ಹೊಂದಾಣಿಕೆಯ ಪ್ರಕಾರ ಬೇರೆಯವರು ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿದ್ದರು ಈಗ ಆ ಪಟ್ಟ ಅನಿಲ್ ವಿಧಾತರಿಗೆ ಒದಗಿಬಂದಿದ್ದು. ಹೋರಾಟದ ಮನೋಭಾವವುಳ್ಳ ವ್ಯಕ್ತಿತ್ವದವರಾದ ಅನಿಲ್ ವಿಧಾತ ಅವರು ಯಶಸ್ವಿ ಪತ್ರಕರ್ತರಾಗಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ನೂತನವಾಗಿ ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿರುವ ಇವರ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತಾಲೂಕಿನ ಇತಿಹಾಸದಲ್ಲಿ ಪತ್ರಕರ್ತರು ಇದೇ ಮೊದಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದು ಅನಿಲ್ ವಿಧಾತ್ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ.
ಆತ್ಮೀಯ ಮಿತ್ರರು ಆಗಿರುವ ಅನಿಲ್ ವಿಧಾತ ಅವರಿಗೆ “ನ್ಯೂಸ್ ವಾರಿಯರ್ಸ್ ಪತ್ರಿಕೆ” ಶುಭ ಕೋರುತ್ತದೆ.
ತ್ರಿಯಂಬಕಪುರ ಗ್ರಾಮ ಪಂಚಾಯಿತಿಯನ್ನು ಒಂದು ಮಾದರಿ ಪಂಚಾಯಿತಿಯನ್ನಾಗಿ ಮಾಡಲಿ ಎನ್ನುವುದು ನಮ್ಮ ಹಾರೈಕೆ..
ರಘುರಾಜ್ ಹೆಚ್.ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..