Saturday, May 3, 2025
Google search engine
Homeಶಿವಮೊಗ್ಗಸಾಗರದ ಎಂಪಿಎಂ ಹಗರಣದ ಬಯಲು ಬೆನ್ನಲ್ಲೇ ಹೊಸನಗರದಲ್ಲಿ ಮರಗಳ ಅಕ್ರಮ ಕಡಿತಲೆ...

ಸಾಗರದ ಎಂಪಿಎಂ ಹಗರಣದ ಬಯಲು ಬೆನ್ನಲ್ಲೇ ಹೊಸನಗರದಲ್ಲಿ ಮರಗಳ ಅಕ್ರಮ ಕಡಿತಲೆ – ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ಶಾಮೀಲಾಗಿದ್ದಾರಾ? ಜಿಲ್ಲಾಧಿಕಾರಿಗಳೇ ಅಕ್ರಮಗಳಿಗೆ ಬ್ರೇಕ್ ಹಾಕಿ ಎಂಪಿಎಂ ನೆಡುತೋಪು ಉಳಿಸಿ..!!

ಹೊಸನಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ ಎರಡು ಲಾರಿ ಅಕ್ರಮ ಮರಗಳ ಕಳ್ಳ ಸಾಗಾಣಿಕೆ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿತ್ತು.

ವರದಿ ಬೆನ್ನಲ್ಲೇ ಶಿವಮೊಗ್ಗದ ಎಸ್ಬಿಯ ಆದೇಶದ ಮೇರೆಗೆ ಸಾಗರದ ದಕ್ಷ ಡಿವೈಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.

ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ತಂಡ ಅರ್ಧಕೋಟಿಗೂ ಅಧಿಕ ಬೆಲೆಬಾಳುವ ಮರಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು.

ಕಾವಲುಗಾರನೇ ಕಳ್ಳ ನಾಗಿದ್ದ:

ಸಾಗರದಲ್ಲಿ ಅಕ್ರಮ ಮರಗಳ ಸಾಗಾಣಿಕೆಯಲ್ಲಿ ನೆಡುತೋಪನ್ನು ಕಾಯುತ್ತಿದ್ದ ಕಾವಲುಗಾರ ಮಂಜುನಾಥನ ಕಳ್ಳ ನಾಗಿದ್ದ ಆತನ ಮೇಲೆಯೇ ಆರ್ ಎಪ್ ಒ ದೂರು ದಾಖಲಿಸಿದ್ದರು.

ಮೇಲ್ನೋಟಕ್ಕೆ ಕಾವಲುಗಾರ ಕಳ್ಳನಾಗಿದ್ದು ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಆದರೆ ಇಷ್ಟು ದೊಡ್ಡ ಹಗರಣದಲ್ಲಿ ಆತನೊಬ್ಬನೇ ಇರಲು ಸಾಧ್ಯವಿಲ್ಲ ಇದರ ಹಿಂದೆ ದೊಡ್ಡ ವ್ಯವಸ್ಥೆಯಿದೆ ಅದು ಬಹಿರಂಗವಾಗಬೇಕು.

ಸಾಗರದ ಅಕ್ರಮದ ಬೆನ್ನಲ್ಲೇ ಹೊಸನಗರದಲ್ಲಿ ಅಕ್ರಮ ಕಟಾವು ಶುರು:

ಹೊಸನಗರ ತಾಲ್ಲೂಕು ಜಯನಗರದಿಂದ ಸುತ್ತಾ ಗ್ರಾಮಕ್ಕೆ ಹೋಗುವ ದಾರಿ ನಂದಿಕೊಪ್ಪ ಬಳಿ 07 ಹೇಕ್ಟರ್ ಎಂಪಿಎಂ ನಡುತೋಪಿನಲ್ಲಿ ಅಕ್ರಮವಾಗಿ ಮರಗಳನ್ನೂ ಕಡಿತಲೆ ಮಾಡುತ್ತಿರುವ ಮಾಹಿತಿ ಬಂದಿದ್ದು.

ಎಂಪಿಎಂ ಗುತ್ತಿಗೆದಾರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಅಬ್ದುಲ್ಲ ಎಂಬುವವನರಿಗೆ ಟೆಂಡರ್ ಪ್ರಕ್ರಿಯೆ ಆಗಿದ್ದು , ಆದರೇ ಜಿಲ್ಲಾಧಿಕಾರಿಗಳು ಹಾಗೂ ಎಂಪಿಎಂ M. D. ರವರಾದ ಸೆಲ್ವಮಣಿ ರವರಿಂದ ಇನ್ನೂ ಅನುಮತಿ ದೊರೆಯದೇ OMR ಸಿಕ್ಕಿಲ್ಲ ಅಗ್ರಿಮೆಂಟ್ ಕೂಡ ಆಗದೇ ಹೋದರೂ ಈಗಾಗಲೇ ಎಂಪಿಎಂ ಗುತ್ತಿಗೆದಾರ ಅಕ್ರಮವಾಗಿ ಎಂಪಿಎಂ ನಡುತೋಪಿನಲ್ಲಿ ಮರಗಳ ಕಡಿತಲೆ ಮಾಡಿ ಸುಮಾರು 30 ಲಾರಿಗೂ ಹೆಚ್ಚಿನ ಲಾರಿಗಳಲ್ಲಿ ಅಕ್ರಮವಾಗಿ ಮರದ ದಿಮ್ಮೆಗಳನ್ನೂ ಸಾಗಾಟ ಮಾಡಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.

ಎಂಪಿಎಂ M. D. ರವರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ರವರು ಕೂಡಲೇ ತನಿಖೆ ನೆಡೆಸಿ ಅಕ್ರಮವಾಗಿ ಎಂಪಿಎಂ ನಡುತೋಪಿನಲ್ಲಿ ಮರಗಳನ್ನೂ ಕಡಿತಲೆ ಮಾಡಿರುವ ಎಂಪಿಎಂ ಗುತ್ತಿಗೆದಾರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಎಂಪಿಎಂ ಲೈಸನ್ಸ್ ವಜಾ ಮಾಡಿ ಸೂಕ್ತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸ ಎಂಪಿಎಂ ನೆಡುತೋಪು ಉಳಿಸಿ…

ಓಂಕಾರ ಎಸ್. ವಿ. ತಾಳಗುಪ್ಪ….

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...