Sunday, June 15, 2025
Google search engine
Homeಶಿವಮೊಗ್ಗಹರ್ಷ ಕುಟುಂಬದೊಂದಿಗೆ ನಾನಿದ್ದೇನೆ..! ನ್ಯಾಯ ಖಂಡಿತ ಸಿಗುತ್ತದೆ ಭಯಪಡುವ ಅಗತ್ಯತೆ ಇಲ್ಲ..! ರಾಜೀನಾಮೆ ಕೇಳಲು ಸರ್ವರೂ...

ಹರ್ಷ ಕುಟುಂಬದೊಂದಿಗೆ ನಾನಿದ್ದೇನೆ..! ನ್ಯಾಯ ಖಂಡಿತ ಸಿಗುತ್ತದೆ ಭಯಪಡುವ ಅಗತ್ಯತೆ ಇಲ್ಲ..! ರಾಜೀನಾಮೆ ಕೇಳಲು ಸರ್ವರೂ ಸ್ವತಂತ್ರರು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ..!!

ಶಿವಮೊಗ್ಗ : ಹರ್ಷನ ಅಕ್ಕ ಅಶ್ವಿನಿ ತಮ್ಮ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಹರ್ಷನ ಕುಟುಂಬದೊಂದಿಗೆ ನಾನಿದ್ದೇನೆ, ಎಲ್ಲವೂ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ ನನ್ನದೆ ಆದ ಇತಿಮಿತಿಗಳಿವೆ ಎಂದು ಪ್ರತಿಕ್ರಿಸಿದರು.

ಅಮರನಾಥ ಯಾತ್ರಿಗಳನ್ನು ಕರೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ :

ಶಿವಮೊಗ್ಗದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರರವರು ಅಮರನಾಥ ಯಾತ್ರಿಗಳನ್ನು ಕರೆತರಲು ತಂಡ ರಚಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅತಿ ವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು.

ಹರ್ಷ ಅಕ್ಕನ ಬಳಿ ಸಮಾಧಾನದಿಂದ ಮಾತನಾಡಿದ್ದೇನೆ ಗೃಹ ಸಚಿವರ ಸ್ಪಷ್ಟನೆ :

ಹರ್ಷ ಅಕ್ಕ ಅಶ್ವಿನಿ ಬಳಿ ಸಮಾಧಾನದಿಂದ ಮಾತನಾಡಿದ್ದೇನೆ. ಶ್ರೀರಾಮ ಸೇನೆಯ20 ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಂದಿದ್ದರು. ಅವರಿಗೂ ಸಹ ಹರ್ಷನ ಅಕ್ಕನ ವರ್ತನೆಯಿಂದ ಬೇಜಾರಾಗಿದೆ ಎಂದರು.

ಗೃಹ ಸಚಿವರಾಗಿ ನನ್ನದೇ ಆದ ಇತಿಮಿತಿಗಳಿವೆ ಎಲ್ಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ :

ಗೃಹ ಸಚಿವನಾಗಿ ನನಗೆ ನನ್ನದೇ ಆದ ಇತಿಮಿತಿಗಳಿದೆ. ಅವರು ಕೇಳುವ ಪ್ರತಿ ವಿಷಯಕ್ಕೂ ಉತ್ತರಿಸಲಾರೆ . ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಏನೇ ಆದರೂ ಸಹ ಗೃಹಸಚಿವರದ್ದೇ ರಾಜೀನಾಮೆ ಕೇಳೋದು, ಎನೂ ಮಾಡೋಣ ಎಂದು ನಕ್ಕರು.

ನಾನು ಹರ್ಷ ಕುಟುಂಬದ ಜೊತೆಗೆ ಇದ್ದೇನೆ ಭಯಪಡುವ ಅಗತ್ಯತೆ ಇಲ್ಲ ಕಾನೂನಿನ ಪ್ರಕಾರ ಎಲ್ಲರಿಗೂ ಶಿಕ್ಷೆ ಆಗುತ್ತದೆ ಗೃಹ ಸಚಿವರ ಸ್ಪಷ್ಟನೆ :

ನಾನು ಹರ್ಷನ ಕುಟುಂಬದೊಂದಿಗಿದ್ದೇನೆ. ಪರಪ್ಪನ ಅಗ್ರಹಾರದಿಂದ ಹರ್ಷ ಕೊಲೆ ಆರೋಪಿಗಳು ಮೊಬೈಲ್ ಕರೆಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ವಿರುದ್ದ ಎಫ್ಐ ಆರ್ ದಾಖಲಿಸಲಾಗಿದೆ ಯಾರೇ ತಪ್ಪಿತಸ್ಥರಾದರು ಅವರಿಗೆ ಖಂಡಿತ ಶಿಕ್ಷೆ ಆಗಲಿದೆ ಅದರಲ್ಲಿ ಅನುಮಾನವಿಲ್ಲ. ಎಂದು ಸ್ಪಷ್ಟಪಡಿಸಿದರು..

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!