
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ ಮಡಿಲಿಗೆ ಚುಂಚಾದ್ರಿ ಕಪ್ 2022 ..
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಗೆದ್ದ ಹಳ್ಳಿಯ ಸರ್ಕಾರಿ ಶಾಲೆ ಹುಡುಗಿಯರು.
ಆದಿಚುಂಚನಗಿರಿ ಟ್ರಸ್ಟ್ ಶಿವಮೊಗ್ಗ ಇವರ ಆಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಶಿವಮೊಗ್ಗ ಜಿಲ್ಲಾಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಬಾಲಕಿಯರ ವಿಭಾಗದ ಚಾಂಪಿಯನ್ಸ್ ಆಗಿ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಬಾಲಕಿಯ ತಂಡ, ಬಿ ಜಿ ಎಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಸೋಲಿಸುವುದರ ಮೂಲಕ ಚಾಂಪಿಯನ್ಸ್ ಪಟ್ಟ ಪಡೆದುಕೊಂಡಿತು,
ಅತ್ಯಂತ ಮಳೆ ಬೀಳುವ ಆಗುಂಬೆ ಭಾಗದ ಗುಡ್ಡೆ ಕೇರಿಯ ಹಳ್ಳಿಯಿಂದ ಬಂದು ಶಿವಮೊಗ್ಗ ನಗರದ ಪ್ರಬಲ ತಂಡಗಳಿಗೆ ಪೈಪೋಟಿ ನೀಡಿ ಎದೆಗುಂದದೆ ಛಲದಿಂದ ಆಟವಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಳ್ಳಿಯ ಮಕ್ಕಳ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯರ್ಥವಾಗುತ್ತಿದೆ..
ಈ ಸಮಯದಲ್ಲಿ ತಂಡದ ಕೋಚ್ ಗಳಾದ, ಬೀರಪ್ಪ ಇಟಗಿ, ಶೌಕತ್ ಆಲಿ, ಮಹಾಂತೇಶ್, ಜೊತೆಗೆ ಸಹಕಾರ ನೀಡಿದ ಶಿಕ್ಷಕರಾದ ಆನಂದನ್ ಸುಬ್ರಹ್ಮಣ್ಯ ವೀರೇಶ್, ರೇವತಿ, ಪ್ರದೀಪ್ ಇವರ ಸಹಕಾರದ ಚಾಂಪಿಯನ್ ಶಿಪ್ ಗೆದ್ದುಕೊಂಡ ಬಾಲಕಿಯರ ತಂಡಕ್ಕೆ ಪೋಷಕರು ಸಾರ್ವಜನಿಕರು ಎಸ್ ಡಿ ಎಂ ಸಿ ಯ ಪರವಾಗಿ ದಾನಿಗಳ ಪರವಾಗಿ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಓಣಿಮನೆ ಅವರು ಅಭಿನಂದನೆ ಸಲ್ಲಿಸಿರುತ್ತಾರೆ…
ರಘುರಾಜ್ ಹೆಚ್.ಕೆ…9449553305…