ತೀರ್ಥಹಳ್ಳಿ : ತಾಲ್ಲೂಕು ಹಣಗೆರೆ ಸಮೀಪ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಮಾಳುರು ಸಬ್ ಇನ್ ಸ್ಪೆಕ್ಟರ್ ತಂಡ ದಾಳಿ ಮೂವರ ಬಂಧನ …
.87ಸಾವಿರ ರೂಪಾಯಿಗಳು ಮತ್ತು ಕಾರು ವಶ ಮಾಳೂರು ಠಾಣೆ ವ್ಯಾಪ್ತಿಯ ಹಣಗೆರೆ ಸಮೀಪ ಇಸ್ಪಿಟ್ /ಜುಗಾರಿ ಆಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿಯವರು ತಮ್ಮ ಸಿಬ್ಬಂದಿ ವರ್ಗದವರೊಂದಿಗೆ ದಾಳಿ ನಡೆಸಿ ನಿತೀಶ್ ,ತ್ಯಾಗರಾಜ ,ಮತ್ತು ಸಂದೇಶ್ ಎಂಬುವರನ್ನು ವಶಕ್ಕೆ ಪಡೆದು ಇಸ್ಪೀಟ್ ಆಟಕ್ಕೆ ಬಳಸಿದ 87000 /–ರೂಪಾಯಿಗಳು (ಎಂಬತ್ತ ಎಳು ಸಾವಿರ ರೂಪಾಯಿಗಳು )ಹಾಗೂ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ .ಮಾಳೂರು ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಇವರೊಂದಿಗೆ ಎಎಸ್ ಐ ಮಂಜುನಾಥ ನೇಕಾರ ,ಕೃಷ್ಣಮೂರ್ತಿ ,ಮಹೇಶ್ ವಿವೇಕ್ ,ಅಭಿಲಾಷ್ (CPC) ,ಭರತ್ ಮುಂತಾದವರು ಭಾಗವಹಿಸಿದ್ದರು .
ಮಾಹಿತಿ: ಲಿಯಾ ಆರೂಜ….