
ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಉಪ ವಿಭಾಗೀಯ ಆಸ್ಪತ್ರೆಯ ತುರ್ತು ನಿಗಾ ಘಟಕದ ಶೌಚಾಲಯದ ಚೇ0ಬರ್ ತುಂಬಿ ಆಸ್ಪತ್ರೆ ಆವರಣದಲ್ಲಿ ಮಲೀನಗೊಂಡ ಶೌಚಾಲಯ ನೀರು ಹರಿಯುತ್ತಿದ್ದೂ ಗಬ್ಬೆದ್ದು ಆಸ್ಪತ್ರೆ ಆವರಣ ಸಂಪೂರ್ಣ ಶುಚಿತ್ವ ಕಾಣೆಯಾಗಿದ್ದು ದುರ್ವಾಸನೆಯಿಂದ ಕೂಡಿದ್ದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು,ರೋಗಿಗಳು ಹಾಗೂ ರೋಗಿಗಳ ಜೊತೆ ಆಗಮಿಸುವವರ ಸ್ಥಿತಿ ನರಕಯಾತನೆಯಿಂದ ಬಳಲುತ್ತಿರುವ ಬಗ್ಗೆ ನಮ್ಮ ಸುದ್ದಿ ಬಿತ್ತರವಾಗಿತ್ತು.
ಕೂಡಲೇ ಸ್ಪಂದನೆ ನೀಡಿದ ಅರೋಗ್ಯ ರಕ್ಷಾ ಸಮಿತಿ ಹಾಗೂ ಆಡಳಿತ ವೈಧ್ಯಾಧಿಕಾರಿಗಳು ಸಾಗರ ಉಪ ವಿಭಾಗೀಯ ಆಸ್ಪತ್ರೆಯ ತುರ್ತು ನಿಗಾ ಘಟಕದ ಶೌಚಾಲಯದ ಚೇ0ಬರ್ ಶುಚಿಗೊಳಿಸಿ ಆಸ್ಪತ್ರೆ ಆವರಣವನ್ನೂ ಅರೋಗ್ಯಕರ ವಾತಾವರಣದತ್ತ ಕ್ರಮ ಕೈಗೊಂಡಿದ್ದಾರೆ.
ನಮ್ಮ ವರದಿಗೆ ಕೂಡಲೇ ಸ್ಪಂದನೆ ನೀಡಿದ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಹಾಗೂ ಆಡಳಿತ ವೈಧ್ಯಾಧಿಕಾರಿಗಳಿಗೆ ಸಾಗರೀಕರ ಪರವಾಗಿ ನಮ್ಮ ಸುದ್ದಿವಾಹಿನಿಯೂ ಧನ್ಯವಾದಗಳನ್ನೂ ಸಲ್ಲಿಸುತ್ತದೆ.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್. ಕೆ…9449553305…