Sunday, June 15, 2025
Google search engine
Homeರಾಜ್ಯಗೃಹ ಸಚಿವರು ಸಭೆ ಕರೆದು ಅಕ್ರಮ ಮಧ್ಯ ಮಾರಾಟ ನಿಯಂತ್ರಣಕ್ಕೆ ಸೂಚನೆ ನೀಡಿದ್ದರು, ಜಿಲ್ಲೆಯ ಶಾಂತಿ,...

ಗೃಹ ಸಚಿವರು ಸಭೆ ಕರೆದು ಅಕ್ರಮ ಮಧ್ಯ ಮಾರಾಟ ನಿಯಂತ್ರಣಕ್ಕೆ ಸೂಚನೆ ನೀಡಿದ್ದರು, ಜಿಲ್ಲೆಯ ಶಾಂತಿ, ಸುವ್ಯವಸ್ಥೆಗೆ ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದರು, ನಿಲ್ಲದ ಅಕ್ರಮ ಮಧ್ಯ ಮಾರಾಟ..!!!! ತೀರ್ಥಹಳ್ಳಿಯಲ್ಲಿ ನಾಳೆ ಮಧ್ಯ ಮಾರಾಟ ಬಂದ್..!! ಇಂದು ಬಾಕ್ಸ್ ನಲ್ಲಿ ನಂದಿನಿ ಹಾಲಿನ ತರ ಹಳ್ಳಿ ಹಳ್ಳಿಗೆ ಮಾರಾಟ..!!! ತಡೆಯುವವರು ಯಾರು..?! ಹಳ್ಳಿ ಹಳ್ಳಿ ಗಳಿಗೆ ಮಧ್ಯ ಮಾರಾಟ ಮಾಡಲು ಪರವಾನಿಗೆ ನೀಡಿದ್ದಾರ ಅಬಕಾರಿ ಇಲಾಖೆಯವರು..?! ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶಕ್ಕೆ ಗೃಹ ಸಚಿವರ ತವರು ಕ್ಷೇತ್ರದಲ್ಲಿ ಕಿಮ್ಮತ್ತಿಲ್ಲವೇ..?!

ಶಿವಮೊಗ್ಗ : ಮಧ್ಯ ಮಾರಾಟಕ್ಕೆ ಗಣಪತಿ ಹಬ್ಬ ಇರುವುದರಿಂದ ಒಂದೊಂದು ಸ್ಥಳಗಳಿಗೆ ಒಂದೊಂದು ದಿನಾಂಕದಂದು ಮಧ್ಯ ಮಾರಾಟ ಬಂದ್ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಮಧ್ಯ ಮಾರಾಟ ‌‌ನಿಯಂತ್ರಣಕ್ಕೆ ಗೃಹ ಸಚಿವರು ಶಿವಮೊಗ್ಗದಲ್ಲಿ ಸಭೆ ಕರೆದು ಜಿಲ್ಲಾ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ನಂತರ ಇದರ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲಾಅಧಿಕಾರಿಗಳು, ಅಬಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವುದೇ ಕಾರಣಕ್ಕೂ ಗಣಪತಿ ವಿಸರ್ಜನೆ ಸಮಯದಲ್ಲಿ ಮಧ್ಯ ಮಾರಾಟವಾಗಬಾರದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚನೆ ನೀಡಿದ್ದರು.

ಆದರೂ ಇಲ್ಲದ ಅಕ್ರಮ ಮಧ್ಯ ಮಾರಾಟ :

ಗೃಹ ಸಚಿವರ ಸೂಚನೆಯಿದ್ದರೂ ಜಿಲ್ಲಾಧಿಕಾರಿಗಳ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶವಿದ್ದರೂ ನಿಲ್ಲದ ಅಕ್ರಮ ಮಧ್ಯ ಮಾರಾಟ ನಾಳೆ ತೀರ್ಥಹಳ್ಳಿಯಲ್ಲಿ ಮಧ್ಯ ಮಾರಾಟ ಬಂದ್ ಇರುವುದರಿಂದ ಇಂದು ತೀರ್ಥಹಳ್ಳಿಯಲ್ಲಿ ಬಾಕ್ಸ್ ನಲ್ಲಿ ನಂದಿನಿ ಹಾಲಿನ ರೂಪದಲ್ಲಿ ಅಕ್ರಮ ಮಧ್ಯ ಹಳ್ಳಿ ಹಳ್ಳಿಗೆ ಸರಬರಾಜಾಗುತ್ತಿದೆ.

ಇದನ್ನು ತಡೆಯುವವರು ಯಾರು..?!

ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಪೊಲೀಸ್ ಇಲಾಖೆ ಏಕೆ ಗಮನಹರಿಸುತ್ತಿಲ್ಲ..? ಅಬಕಾರಿ ಇಲಾಖೆಗೆ ಸಿಬ್ಬಂದಿಗಳ ಕೊರತೆ ಪೊಲೀಸ್ ಇಲಾಖೆಗೆ ಹೆಚ್ಚಾದ ಕರ್ತವ್ಯದ ಒತ್ತಡ ಹಾಗಾದರೆ ತಡೆಯುವವರು ಯಾರು..?!

ಮಧ್ಯ ಮಾರಾಟಗಾರರಿಗೆ ಹಳ್ಳಿ ಹಳ್ಳಿಗೆ ಮದ್ಯ ನೀಡಲು ಲೈಸೆನ್ಸ್ ನೀಡಿದೆಯಾ ಅಬಕಾರಿ ಇಲಾಖೆ..?!

ಮಧ್ಯ ಮಾರಾಟಗಾರರಿಗೆ ಪರವಾನಿಗಿ (ಲೈಸೆನ್ಸ್) ನೀಡಿರುವುದು ತಮ್ಮ ತಮ್ಮ ಮಧ್ಯದ ಅಂಗಡಿಗಳಲ್ಲಿ ಮಾರಾಟ ಮಾಡಲು ಮಾತ್ರ ಆದರೆ ಕೆಲವು ಮದ್ಯ ಮಾರಾಟಗಾರರು ಹಳ್ಳಿಗಳಿಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಲೈಸೆನ್ಸ್ ನೀಡಿರುವವರು ಯಾರು ..? ಅಬಕಾರಿ ಇಲಾಖೆಯವರಾ…?! ಗಣಪತಿ ವಿಸರ್ಜನೆ ಸಮಯದಲ್ಲಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಈ ತರಹ ಅಕ್ರಮ ಮದ್ಯ ಮಾರಾಟ ಮಾಡುವುದು ಸರಿನಾ..? ಜಿಲ್ಲಾಧಿಕಾರಿಗಳ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶಕ್ಕೆ ಬೆಲೆ ಇಲ್ಲವೇ..?! ಗೃಹ ಸಚಿವರ ತವರಿನಲ್ಲಿಯೇ ಇತರ ಮಧ್ಯ ಮಾರಾಟ ನಡೆದರೆ ಬೇರೆ ಕಡೆ ಕಥೆ ಏನು..?!

ಮಧ್ಯ ಮಾರಾಟ ಮಾಡಿರುವ ಬಾಕ್ಸ್ ಮೇಲೆ ಬ್ಯಾಚ್ ನಂಬರ್ ಇರುತ್ತದೆ ಗಮನಿಸಿದರೆ ಎಲ್ಲವೂ ಗೊತ್ತಾಗುತ್ತದೆ :

ಅಕ್ರಮವಾಗಿ ಮಧ್ಯ ಮಾರಾಟ ಮಾಡಿರುವ ಮಧ್ಯದ ಬಾಕ್ಸ್ ಗಳ ಮೇಲೆ ಬಾಟಲಿಗಳ ಮೇಲೆ ಪೌಚ್ಗಳ ಮೇಲೆ ಬ್ಯಾಚ್ ನಂಬರ್ ನಮೋದಿತವಾಗಿರುತ್ತದೆ ಅದು ಯಾವ ಅಂಗಡಿಗಳಿಗೆ ಪೂರೈಕೆ ಆಗಿರುತ್ತದೆ ಎನ್ನುವುದು ತಿಳಿಯುತ್ತದೆ.ಅಂತ ಮಧ್ಯ ಮಾರಾಟ ಮಾಡಿರುವ ಅಂಗಡಿಗಳ ಮೇಲೆ ಕೇಸ್ ದಾಖಲಿಸಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಇದು ನಿಲ್ಲುತ್ತದೆ ಇಲ್ಲವಾದರೆ ಇದು ಬಗೆಹರಿಯದ ಪ್ರಶ್ನೆಯಾಗುತ್ತದೆ…

ತೀರ್ಥಹಳ್ಳಿಯಲ್ಲಿರುವ ಅಬಕಾರಿ ಇಲಾಖೆ ಬಿಳಿಯಾನೆಯಾಗಿದೆಯಾ..?!

ತೀರ್ಥಹಳ್ಳಿಯಲ್ಲಿರುವ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯೆವಾಗಿದೆಯಾ..?! ಶಿವಮೊಗ್ಗದ ಅಬಕಾರಿ ಇಲಾಖೆ ಬಂದು ತೀರ್ಥಹಳ್ಳಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ ತೀರ್ಥಳ್ಳಿಯಲ್ಲಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಮಧ್ಯ ಮಾರಾಟಗಾರರಿಂದ ಲಂಚ ತೆಗೆದುಕೊಂಡು ಹಳ್ಳಿಗಳಿಗೆ ಮಧ್ಯ ಮಾರಾಟ ಮಾಡಲು ಬಿಡುತ್ತಿದ್ದಾರಾ..? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ..? ನೀವು ಲಂಚ ತೆಗೆದುಕೊಳ್ಳುತ್ತಿಲ್ಲ ಎಂದಾದರೆ ಮೊದಲು ನಿಲ್ಲಿಸಿ ಇಲ್ಲವಾದರೆ ಗೃಹ ಸಚಿವರ ತವರಿನಲ್ಲಿ ಗೃಹ ಸಚಿವರ ಆದೇಶಕ್ಕೆ ಬೆಲೆ ಇರುವುದಿಲ್ಲ.. ಎಂದಾಗುತ್ತದೆ ನೆನಪಿರಲಿ…

ಯಾವ ಮಧ್ಯದ ಅಂಗಡಿಗಳಿಂದ ಹಳ್ಳಿ ಹಳ್ಳಿಗಳಿಗೆ ಅಕ್ರಮ ಮಧ್ಯ ರಪ್ತಾಗುತ್ತದೆ ಎನ್ನುವ ಮಾಹಿತಿ ಪತ್ರಿಕೆಗೆ ಇದೆ… ಅಗತ್ಯ ಬಿದ್ದಾಗ ದಾಖಲೆ ಸಮೇತ ಪತ್ರಿಕೆ ಅದನ್ನು ಪ್ರಕಟಿಸುತ್ತದೆ….

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!