Monday, June 16, 2025
Google search engine
Homeರಾಜ್ಯತೀರ್ಥಹಳ್ಳಿ:: ಅಪಘಾತ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ.!

ತೀರ್ಥಹಳ್ಳಿ:: ಅಪಘಾತ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ.!

ತೀರ್ಥಹಳ್ಳಿ :– ದಿನಾಂಕ 31– 05 –2020ರಂದು 7ಗಂಟೆ ಸಮಯದಲ್ಲಿ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮನೆ ರಾಷ್ಟ್ರೀಯ ಹೆದ್ದಾರಿ ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಅನಿಲ್ ಬಿನ್ ಸುಬ್ಬಣ್ಣ ಗೌಡ ರವರು ತಮ್ಮಬಾಡಿಗೆ ಮಾಡುವ ಜೀತೋ ಗೂಡ್ಸ್ ವಾಹನ KA-18-B-8787 ದಲ್ಲಿ ಬಾಡಿಗೆಗಾಗಿ ತೀರ್ಥಹಳ್ಳಿಯಿಂದ ಸಾಮಾನುಗಳನ್ನು ಹೇರಿಕೊಂಡು ಶೃಂಗೇರಿಗೆ ಹೋಗುತ್ತಿರುವ ಮಾರ್ಗದಲ್ಲಿ ಸಮೀವುಲ್ಲಾ ಬಿನ್ ಇಬ್ರಾಹಿಂ ಸಾಬ್ ಎಂಬುವವರು ತಮ್ಮ KA -14- B -8282ಲಾರಿಯನ್ನು ಕಲ್ಮನೆ ಯಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಲು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಲ್ಮನೆ ರವೀಂದ್ರ ಬಿನ್ ಬಾಳಪ್ಪ ಗೌಡ ರವರ ಕಿರಾಣಿ ಅಂಗಡಿಯ ಎದುರು ಅನಿಲ್ ರವರ ಜಿತೊ ವಾಹನಕ್ಕೆ ಅಪಘಾತ ಮಾಡಿದ್ದಾರೆ .

.ಅನಿಲ್ ರವರ ಎದೆ ,ಹೊಟ್ಟೆ ,ಕಾಲು ಮತ್ತು ಮೈ, ಕೈಗಳಿಗೆ ತೀವ್ರತರವಾದ ಗಾಯಗಳಾಗಿದ್ದು ರಕ್ತಸ್ರಾವ ವಾಗಿತ್ತು .ಅನಿಲ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮೃತ ರಾಗಿರುತ್ತಾರೆ .ಈ ಬಗ್ಗೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಫ್ ಐಆರ್ ಅನ್ನು ನ್ಯಾಯಾಲಯಕ್ಕೆ ದಾಖಲು ಮಾಡಲಾಗಿತ್ತು .

ಪ್ರಕರಣವನ್ನು ತನಿಖಾಧಿಕಾರಿಯಾಗಿ ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರು ತನಿಖೆಯನ್ನು ನಡೆಸಿ ತೀರ್ಥಹಳ್ಳಿ ನ್ಯಾಯಲಯಕ್ಕೆ ಆರೋಪಿ ಸಮೀವುಲ್ಲಾ ಬಿನ್ ಇಬ್ರಾಹಿಂ ಸಾಬ್ ವಿರುದ್ಧ ಐಪಿಸಿ ಕಲಂಗಳಾದ 279.337.304(A) ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು (ಚಾರ್ಜ್ ಶೀಟ್ )ತೀರ್ಥಹಳ್ಳಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು .

ತೀರ್ಥಹಳ್ಳಿ ಹಿರಿಯ ವ್ಯವಹಾರಗಳ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ವಿರುದ್ಧ ಸಾಕ್ಷಿ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ವಾದ ವಿವಾದದ ಆಲಿಸಿದ ಗೌರವಾನ್ವಿತ ಮಾನ್ಯ ನ್ಯಾಯಾಧೀಶರಾದ ಶ್ರೀ ಎಸ್. ಎಸ್ .ಭರತ್ ರವರ ಆರೋಪಿ ಸಮಿವುಲ್ಲ ತಪ್ಪಿತಸ್ಥರೆಂದು ತೀರ್ಪು ನೀಡಿ ಆರೋಪಿಗೆ ಐಪಿಸಿ ಕಲಂ 279 ಗೆ ಸಂಬಂಧಿಸಿದಂತೆ 6ತಿಂಗಳು ಜೈಲು ಶಿಕ್ಷೆ ಮತ್ತು 1ಸಾವಿರ ದಂಡ ,ದಂಡ ಪಾವತಿಸಲು ತಪ್ಪಿದರೆ 3ತಿಂಗಳು ಶಿಕ್ಷೆ ಹಾಗೂ ಐಪಿಸಿ 337 ಬಗ್ಗೆ 6ತಿಂಗಳು ಜೈಲು ಶಿಕ್ಷೆ ಹಾಗೂ 500ರೂಪಾಯಿಗಳ ದಂಡ,ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳು ಶಿಕ್ಷೆ ,ಐಪಿಸಿ 304(ಎ )ರ ಬಗ್ಗೆ ಆರೋಪಿಗಳು 2ವರ್ಷ ಸಾದಾ ಶಿಕ್ಷೆ ಹತ್ತು ಸಾವಿರ ರೂಪಾಯಿಗಳ ದಂಡ .ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ .

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಅಭಿಯೋಜಕ ರಾದ ಶ್ರೀ ಬಿನು ಅವರು ಸಾಕ್ಷಿಗಳ ವಿಚಾರಣೆ ಮಾಡಿ ಸಮಂಜಸವಾಗಿ ವಾದಿಸಿದ್ದರು ಆರೋಪಿಗೆ ಶಿಕ್ಷೆ ಕೊಡಿಸಲು ನ್ಯಾಯಾಲಯದಲ್ಲಿ ವಾದ ಮಾಡಿದರು .

ವರದಿ: ಲಿಯೋ ಅರೋಜ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!