
ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಮತ್ತು ಅಬಕಾರಿ ಉಪ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ನೇತೃತ್ವದಲ್ಲಿ ಸೊರಬ ತಾಲೂಕ ಚಿಟ್ಟುರು ಗ್ರಾಮದ ವಾಸಿಯಾದ ನಿಂಗರಾಜ್ ಬಿನ್ ಶಿವಪ್ಪ ರವರ ವಾಸದ ಮನೆಯನ್ನು ಶೋಧಿಸಲಾಗಿ 300 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡು ಮತ್ತು ಸದರಿಯವರ ಶುಂಠಿ ಹೊಲವನ್ನು ಶೋಧಿಸಲಾಗಿ ಸುಮಾರು 8 – 10 ಅಡಿ ಎತ್ತರದ 10 ಗಾಂಜಾ ಗಿಡಗಳು ಮತ್ತು 5-6 ಅಡಿ ಎತ್ತರದ 10 ಗಾಂಜಾ ಗಿಡಗಳು ಒಟ್ಟು 20 ಹಸಿ ಗಾಂಜಾ ಗಿಡಗಳನ್ನು (ಸುಮಾರು 25 kgs) ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯನ್ನು ಆರ್ ಶ್ರೀನಾಥ್ ಅಬಕಾರಿ ನಿರೀಕ್ಷಕರು ಸೊರಬ ವಲಯ ರವರೊಂದಿಗೆ, ಹಾಲಾನಾಯಕ್ ಅಬಕಾರಿ ನಿರೀಕ್ಷಕರು, ಭಾಗ್ಯಲಕ್ಷ್ಮಿ ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ರಂಜನ್, ರಾಮಪ್ಪ, ಬಾಲಚಂದ್ರ ಗಣಪತಿ, ಮಹಾಂತೇಶ,ದೇವರಾಜ ಮಹಾಬಲೇಶ ,ಕಾಂತರಾಜ ಸಚಿನ್ ಅರ್ಜುನ್ ರವರು ಪಾಲ್ಗೊಂಡಿದ್ದು. ಕಂದಾಯ ನಿರೀಕ್ಷಕರಾದ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವೀರೇಂದ್ರ ಆರ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಪರಶುರಾಮ ರವರುಗಳು ದಾಳಿಯಲ್ಲಿ ಸಹಕರಿಸಿರುತ್ತಾರೆ…
ರಘುರಾಜ್ ಹೆಚ್.ಕೆ…9449553305…