
ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಸಾಗರ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಾದ ಶಿವಪ್ಪನಾಯಕ ವೃತ್ತದ ಅನತಿ ದೂರದಿಂದ ಪ್ರಜ್ವಲ್ ಮೋಟಾರ್ಸ್ ವರೆಗಿನ ಇಕ್ಕೆಲಗಳಲ್ಲಿ ಕ್ರೇನ್ ನಿಲುಗಡೆಯಿಂದ ದಿನನಿತ್ಯ ಪಾದಚಾರಿಗಳಿಗೆ, ವಾಹನ ಸವರರಿಗೆ, ಅದರಲ್ಲೂ ಅಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಇದ್ದೂ ವಿದ್ಯಾರ್ಥಿಗಳಿಗೆ ಈ ಕ್ರೇನ್ ನಿಲುಗಡೆಯಿಂದ ಕೆಸರುಗದ್ದೆ ಯಾಗಿರುವುದು ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿರುವುದು ಅಲ್ಲದೇ ಜನತಾ ಹೈ ಸ್ಕೂಲ್ ಕೂಡ ಇದ್ದೂ ವಿದ್ಯಾರ್ಥಿಗಳು ಜೀವ ಭಯದಿಂದ ರಸ್ತೆ ದಾಟುವುದು ದಿನನಿತ್ಯ ನರಕ ಯಾತನೆ ಅನುಭವಿಸುತ್ತಿದ್ದೂ, ಸಾಗರ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಾಗಿರುವ ಬಗ್ಗೆ ಸಾರ್ವಜನಿಕರೂ ಹಿಡಿಶಾಪ ಹಾಕುತ್ತಿರುವುದು ಸರ್ವೇಸಾಮಾನ್ಯವಾಗಿದೆ.
ಕೆಲವೇ ತಿಂಗಳ ಹಿಂದೇ ನಿಂತ ಕ್ರೇನ್ ಗೆ ಕಾರು ಅಪಘಾತ ಸಂಭವಿಸಿ ಸ್ಥಳದಲ್ಲೇ ಚೇತನ್ ಉದ್ಯೋಗ್ TVS ಕಂಪನಿಯ ನೌಕರ ಸ್ಥಳದಲ್ಲೇ ಅಸುನಿಗಿದ್ದೂ ಇತಿಹಾಸ
ದಿನನಿತ್ಯ ಸಣ್ಣ ಪುಟ್ಟ ಅಪಘಾತಗಳು ಕ್ರೇನ್ ನಿಲ್ಲಿಸಿರುವುದರಿಂದ ಅವಘಡಗಳು ಸಂಭವಿಸುತ್ತಿದ್ದೂ, ಕೂಡಲೇ ಸಾಗರ ನಗರಸಭೆ ಆಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲ್ಲಗಳಲ್ಲಿ ನಿಲ್ಲಿಸುತ್ತಿರುವ ಕ್ರೇನ್ ತೆರವು ಕಾರ್ಯಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ…
ವರದಿ: ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ..9449553305…