
ಸಾಗರ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ” ದೇಶಿ ಸೇವಾ ಪ್ರತಿಷ್ಠಾನ (ರಿ.) ಸಾಗರ ವತಿಯಿಂದ ” ಯುವ ಜನಾಂಗ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು, ಜಾಗೃತಿ ಮತ್ತು ಸೇವಾ ಮನೋಭಾವದ ಸಂದೇಶ ನೀಡುವ ಪ್ರಭಂದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ” ಸಾಗರದ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನೆರವೇರಿತು.
*ಕಾರ್ಯಕ್ರಮದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ & ನಿವೃತ್ತ ಲೋಕಾಯುಕ್ತ ಸನ್ಮಾನ್ಯ ಸಂತೋಷ ಕುಮಾರ್ ಹೆಗಡೆ, ಸನ್ಮಾನ್ಯ ಕಾಗೋಡು ತಿಮ್ಮಪ್ಪ ಮಾಜಿ ಸಚಿವರು, ಸನ್ಮಾನ್ಯ ನಾ. ಡಿಸೋಜ ಖ್ಯಾತ ಹಿರಿಯ ಸಾಹಿತಿಗಳು, ಸನ್ಮಾನ್ಯ ಗೋಪಾಲ ಕೃಷ್ಣ ಬೇಳೂರು ಮಾಜಿ ಶಾಸಕರು, ದೇಶಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಸನ್ಮಾನ್ಯ ಶ್ರೀಧರ್ ಹಾಗೂ ಇನ್ನಿತರ ಸಮಾಜಮುಖಿಗಳು, ಸಾಹಿತಿಗಳು, ರೈತ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಂಘ ಸಂಘಟನೆಗಳ ಪದಾಧಿಕಾರಿಗಳು, ಮಾಧ್ಯಮ ಮಿತ್ರರು ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ….9449553305….