
ಹರಿಹರ : ನಗರದಲ್ಲಿ ಹರಿಹರ ಜನತೆಯ ಸಲಹೆ, ಸಹಕಾರ , ಸಯೋಗದೊಂದಿಗೆ ಪ್ರತಿ ವರ್ಷವೂ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಉತ್ಸವದ ಧಾರ್ಮಿಕ ಸಾಂಸ್ಕೃತಿಕ ಬನ್ನಿ ಮಾಡುವ ಕಾರ್ಯಕ್ರಮದಲ್ಲಿ ಸರ್ವಧರ್ಮಿಯರು ಪಾಲ್ಗೊಂಡು ವಿಶೇಷವಾಗಿ ಮಾತೆಯರು ಪಾಲ್ಗೊಂಡು ಈ ದಸರಾ ಸಂಭ್ರಮಕ್ಕೆ ಕಾರಣರಾಗಿದ್ದಾರೆ.
ಅದೇ ರೀತಿ ಈ ಬಾರಿಯೂ ದಸರಾ ಉತ್ಸವ ದಿನಾಂಕ-26 /9/ 2022 ರಿಂದ ದಿನಾಂಕ 05/10/2022 ರ ವರಗೆ ನೆರವೇರಲಿದೆ. ಈ ಉತ್ಸವದ ಯಶಸ್ಸಿನ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಇದೆ ತಿಂಗಳ ದಿನಾಂಕ 17/ 9/ 2022 ರಂದು ಶನಿವಾರ ಸಂಜೆ 4 ಗಂಟೆಗೆ ನಡುವಲಪೇಟೆಯ” ಶ್ರೀ ನಾಮದೇವ ಸಿಂಪಿ ಕಲ್ಯಾಣ ಮಂಟಪ “ದಲ್ಲಿ ಏರ್ಪಡಿಸಲಾಗಿದ್ದು. ಸಭೆಯ ಅಧ್ಯಕ್ಷತೆಯನ್ನು ಹರಿಹರ ಶಾಸಕರಾದ ರಾಮಪ್ಪ ರವರು ವಹಿಸಲಿದ್ದು. ಎಲ್ಲಾ ಚುನಾಯಿತ ಜನಪ್ರತಿನಿಧಿಗಳು , ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು, ವಿವಿಧ ಕ್ಷೇತ್ರದ ಗಣ್ಯರು, ಮಾತೃ ಮಂಡಳಿಯ ಮಾತೆಯರು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿರಲಿದ್ದು. ತಾವುಗಳು ಈ ಪೂರ್ವಭಾವಿ ಸಭೆಗೆ ಬಂದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ದಸರಾ ಮಹೋತ್ಸವ ಯಶಸ್ವಿಗೊಳಿಸಲು ಕಾರಣಿಭೂತರಾಗಬೇಕೆಂದು ದಸರಾ ಮಹೋತ್ಸವ ಸಮಿತಿಯ ಪರವಾಗಿ ಅಧ್ಯಕ್ಷರಾದ ಶಂಕರ್ ಕಟಾವ್ಕರ್ ಅವರು ಸರ್ವರಿಗೂ ಆತ್ಮೀಯ ಆಮಂತ್ರಣ ನೀಡಿದ್ದಾರೆ….
ರಘುರಾಜ್ ಹೆಚ್.ಕೆ…9449553305….