Monday, June 16, 2025
Google search engine
Homeರಾಜ್ಯಭಟ್ಕಳದಲ್ಲಿ "ಟಿಪ್ಪು ಸುಲ್ತಾನ" ಹೆಸರಿನಲ್ಲಿ ಸ್ವಾಗತ ಗೋಪುರ..!! ಶಾಂತಿ ಕದಡುವ ಪ್ರಯತ್ನನಾ..?! ಅಷ್ಟಕ್ಕೂ ಟಿಪ್ಪು ಸುಲ್ತಾನ್...

ಭಟ್ಕಳದಲ್ಲಿ “ಟಿಪ್ಪು ಸುಲ್ತಾನ” ಹೆಸರಿನಲ್ಲಿ ಸ್ವಾಗತ ಗೋಪುರ..!! ಶಾಂತಿ ಕದಡುವ ಪ್ರಯತ್ನನಾ..?! ಅಷ್ಟಕ್ಕೂ ಟಿಪ್ಪು ಸುಲ್ತಾನ್ ಸ್ವಾಗತ ಗೋಪುರ ನಿರ್ಮಾಣ ಮಾಡಲು ಕಾರಣವೇನು..?! ಪೊಲೀಸರಿಂದ ತಪ್ಪಿತಾ ದೊಡ್ಡ ಅನಾಹುತ..?!


ಭಟ್ಕಳ : ಸುಲ್ತಾನ ಸ್ಟ್ರೀಟ್‌ನ ಮೂಖಾಂತರ ಆಸರಕೇರಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಸ್ವಾಗತ ಗೇಟ್‌ ( ಸ್ವಾಗತ ಗೋಪುರ) ವನ್ನು ನಿರ್ಮಾಣ ಮಾಡಲು ತಯಾರಿ ನಡೆಸಿ ಈ ಬಗ್ಗೆ ನಿನ್ನೆ ಆ ಪ್ರದೇಶದಲ್ಲಿ ಟಿಪ್ಪು ಸುಲ್ತಾನ ಫೋಟೋ ಇರುವ ಒಂದು ಕಟೌಟ್‌ನ್ನು ಹಾಕಲಾಗಿತ್ತು.

ಪೊಲೀಸ್ ಇಲಾಖೆಯಿಂದ ತಪ್ಪಿತು ದೊಡ್ಡ ಅನಾಹುತ..?!

ಆದರೆ ಇಂದು ಬೆಳಿಗ್ಗೆ ಅದೇ ಪ್ರದೇಶದಲ್ಲಿ ಹೊಂಡ ತೆಗೆಯುತ್ತಿರುವದನ್ನು ಗಮನಿದ ವ್ಯಕ್ತಿಯೊರ್ವರು ಈ ಬಗ್ಗೆ ಪೋಲಿಸ್‌ ಇಲಾಖೆಗೆ ಮಾಹಿತಿ ನೀಡಿದರು ಪೊಲೀಸರು ಕೆಲಸವನ್ನು ಅಲ್ಲಿಗೆ ನಿಲ್ಲಿಸಿದ್ದಾರೆ. ಪೊಲಿಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿ ಆಗಬೇಕಾಗಿದ್ದ ಅನಾಹುತಗಳನ್ನು ಪೊಲೀಸ್ ಇಲಾಖೆ ತಡೆದಿರುವುದು ಸ್ವಾಗತಾರ್ಹ…

ಆನ್ಯಕೋಮಿನ ಯುವಕರಿಂದ ಶಾಂತಿ ಕದಡುವ ಪ್ರಯತ್ನ :


ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆಹೋಗುವ ದಾರಿಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ತನ್ನ ಸ್ವಂತ ಖರ್ಚಿನಿಂದ ಒಂದು ಸ್ವಾಗತ ಗೋಪುರ ನಿರ್ಮಿಸಲು ತಯಾರಿ ನಡೆಸಿದ್ದು, ಈ ಸ್ವಾಗತ ಕಮಾನಿನ ಕಾರ್ಯಗಳು ಆರಂಭಗೋಡಿರುವ ಬಗ್ಗೆ ಸಹಿಸಲಾರದ ಅನ್ಯ ಕೋಮಿನ ಕೆಲವು ಜನರು, ಪಿಪಲ್‌ ಆಫ್‌ ಭಟ್ಕಳ ಎಂಬ ಹೆಸರಿನಲ್ಲಿನ ಟಿಪ್ಪು ಸುಲ್ತಾನ ಫೋಟೋ ಇರುವ ಬ್ಯಾನರ್ ಹಾಕಿದ್ದು, ಭಟ್ಕಳದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಟಿಪ್ಪು ಸುಲ್ತಾನ ಹೆಸರಿನಲ್ಲಿ ಗೇಟ್‌ ನಿರ್ಮಿಸುವ ವಿವಾದದ ನಿರ್ಮಿಸಿ ಜನರಲ್ಲಿ ಭಯವನ್ನು ಉಂಟುಮಾಡಲು ಪ್ರಯತ್ನಪಟ್ಟಿರುವುದನ್ನು ಪೊಲೀಸ್ ಇಲಾಖೆ ತಡೆದಿದೆ…

ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳು, ತಹಸೀಲ್ದಾರರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸ್ಥಳೀಯರ ಆಗ್ರಹ :

ಅಸರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಾಗತ ಗೋಪುರ ನಿರ್ಮಾಣ ಕಾರ್ಯಗಳಿಗೋಸ್ಕರ ಇರಿಸಲಾದ ಸಾಧನ ಮತ್ತು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಳ್ಳುಲು ಸ್ಥಳಕ್ಕೆ ಬಂದಾಗ ದೇವಸ್ಥಾನ ಅಧ್ಯಕ್ಷರಾದ ಕೃಷ್ಣ ನಾಯ್ಕ ಆಸರಕೇರಿ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ ಅವರು ಕೆಲವು ಹೊತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಭಟ್ಕಳದಲ್ಲಿರುವ ಹಲವು ಅಕ್ರಮ ಕಟ್ಟಡಗಳನ್ನು ಮೊದಲು ತೆರವು ಗೊಳಿಸುವಂತೆ ತಿಳಿಸಿದರು.

ಪೊಲೀಸ್ ಬಿಗಿಬದ್ರತೆಯಲ್ಲಿ ಭಟ್ಕಳ :

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಮದ್ಯೆ ಪ್ರವೇಶಿಸಿ ತಾತ್ಕಾಲಿಕವಾಗಿ ಸಮಸ್ಯೆ ತಿಳಿಗೊಳಿಸಿ ಪುರಸಬೆ ವಾಹನದಲ್ಲಿ ಹಾಕಲಾದ ವಸ್ತುಗಳನ್ನು ಹಿಂತಿರುಗಿಸಿ. ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳ ಬಳಿ ಡು ನೋಟ್‌ ವರ್ಕಪ್ರೊಗ್ರೆಸ್‌ ಮುದ್ರಿತ ರಿಬ್ಬನ್‌ಗಳನ್ನು ಎರಡು ಕಂಬಗಳ ಬಳಿ ಅಳವಡಿಸಿದರು. ನಂತರ ಸುಲ್ತಾನ ಸ್ಟ್ರೀಟ್‌ ಬಳಿ ಆಗಮಿಸಿ ಅಲ್ಲಿ ಹಾಕಾಗಿದ್ದ ಬೋರ್ಡನ್ನು ಪುರಸಭೆಯ ಕೆಲಸಗಾರರ ಸಹಾಯದಿಂದ ತೆರವು ಗೋಳಿಸಿ ಅಲ್ಲಿಯು ಸಹ ರಿಬ್ಬನ್‌ ಅನ್ನು ಅಳವಡಿಸಿ ಪೋಲಿಸ್‌ ವಾಹನ ನಿಯೋಜಸಿ ಬಿಗಿ ಭದ್ರತೆ ಒದಗಿಸಿದ್ದಾರೆ. ಜಿಲ್ಲೆಯ ಹಲವು ಭಾಗಗಳಿಂದ ಪೋಲಿಸರು ಮತ್ತು ಪೊಲೀಸ್ ಅಧಿಕಾರಿಗಳು ಭಟ್ಕಳಕ್ಕೆ ಭದ್ರತೆಗೆ ಆಗಮಿಸಿದ್ದು ಎರಡು ಪ್ರದೇಶಗಳಲ್ಲಿ ಪೋಲಿಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಮಾಹಿತಿ ಕೃಪೆ : ಭಟ್ಕಳದ ಸ್ನೇಹಿತರು …

ರಘುರಾಜ್ ಹೆಚ್‌. ಕೆ…9449553305…

ರಘಕಪೆರಾರಜ್ ಹೆಚ್‌. ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!