
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ. ಡಿಕೆಶಿ ಕುಮಾರ್ ಅವರ ಅನುಮೋದನೆ ಮೇರೆಗೆ… ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ನವರನ್ನು… ಉಡುಪಿ ಜಿಲ್ಲೆಗೆ ಸಂಯೋಜಕರಾಗಿನೇಮಕ ಮಾಡಲಾಗಿದೆ….
ಎಐಸಿಸಿ ಕಾರ್ಯದರ್ಶಿಗಳಾದ ಮಯೂರ ಜಯ ಕುಮಾರ್ ವರಿಗೆ ಸಹಾಯಕರಾಗಿ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳಿಗೂ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಆದೇಶಿಸಿದ್ದಾರೆ…
ಕೆ ದೇವೇಂದ್ರಪ್ಪನವರ ಹಿನ್ನೆಲೆ :
ವಿದ್ಯಾರ್ಥಿ ಸಂಘಟನೆಯಿಂದ ಬಂದು ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ, ಹಲವು ಸಮಸ್ಯೆಗಳಿಗೆ ಧ್ವನಿ ಯಾಗುತ್ತಾ, ಸದಾ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ದೇವೇಂದ್ರಪ್ಪ ರಾಜಕೀಯದಲ್ಲೂ ಕೂಡ ಹಂತ ಹಂತವಾಗಿ ತಮ್ಮ ಸ್ಥಾನವನ್ನು ತಮ್ಮ ಪಕ್ಷ ನಿಷ್ಠೆಯಿಂದ ಸಂಘಟನೆಯಿಂದ ಉಳಿಸಿಕೊಂಡು ಬರುತ್ತಿದ್ದಾರೆ. ಪಕ್ಷದ ನಿಲುವುಗಳಿಗೆ ಬದ್ಧರಾಗಿ ಸದಾ ಪಕ್ಷದ ಪರವಾಗಿ ಕಾರ್ಯನಿರ್ವ ಸುತ್ತ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ದೇವೇಂದ್ರಪ್ಪನವರಿಗೆ ಈಗಾಗಲೇ ಬಳ್ಳಾರಿ ದಾವಣಗೆರೆ, ಚಿಕ್ಕಮಂಗಳೂರು, ನೂತನ ವಿಜಯನಗರ ಜಿಲ್ಲೆಯಲ್ಲೂ ಕೂಡ ಪಕ್ಷ ಬಲವರ್ಧನೆ ಹಾಗೂ ಚುನಾವಣೆಯಲ್ಲಿ ಕೆಲಸ ಮಾಡಿದ ಸಾಕಷ್ಟು ಅನುಭವವಿದೆ ಕೇವಲ ಸ್ಥಳೀಯವಾಗಿ ಗುರುತಿಸಿಕೊಳ್ಳದೆ ರಾಜ್ಯಮಟ್ಟದಲ್ಲಿ ಪಕ್ಷದಲ್ಲಿ ಉತ್ತಮ ಹೆಸರು ಉಳಿಸಿಕೊಂಡಿರುವ ದೇವೆಂದ್ರಪ್ಪನವರನ್ನು ಗುರುತಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಈ ಜವಾಬ್ದಾರಿಯನ್ನು ವಹಿಸಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು… ನೂತನ ಜವಾಬ್ದಾರಿ ಬಗ್ಗೆ ಪತ್ರಿಕೆ ಜೊತೆ ತನ್ನ ಅನಿಸಿಕೆಯನ್ನು ಹಂಚಿಕೊಂಡ ದೇವೆಂದ್ರಪ್ಪ ತನಗೆ ವಹಿಸಿರುವ ಈ ನೂತನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ ಈ ನೂತನ ಜವಾಬ್ದಾರಿ ವಹಿಸಿದ ಅಧ್ಯಕ್ಷರಿಗೂ ಕಾರ್ಯಧ್ಯಕ್ಷರಿಗೂ ಪಕ್ಷದ ಎಲ್ಲಾ ಹಿರಿಯರಿಗೂ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು…
ರಘುರಾಜ್ ಹೆಚ್. ಕೆ …9449553305….