
ಶಿವಮೊಗ್ಗ: ಕ್ಷಯ ಮುಕ್ತ ಭಾರತ ಅಂಗವಾಗಿ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ವಿತರಣ ಕಾರ್ಯಕ್ರಮ ನಗರ ಆರೋಗ್ಯ ಕೇಂದ್ರ ಶ್ರೀರಾಮನಗರದಲ್ಲಿ ಇಂದು ನಡೆಯಿತು.
ಅತಿಥಿಗಳಾದ ಮಹಾನಗರ ಪಾಲಿಕೆ ಸದಸ್ಯರು ಹಾಗೂ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ದಾನಿಗಳಾದ H C ಯೋಗೇಶ್ ರವರು ಸ್ನೇಹಜೀವಿ ಬಳಗದ ಶರತ್ಚಂದ್ರ, ಧನಂಜಯ,ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಚಂದ್ರಶೇಖರ್, ವೈದ್ಯರಾದ ಡಾ. ಶ್ರೀಧರ್ ಸಿಬ್ಬಂದಿಗಳಾದ ವಿಜಯ,ವಿದ್ಯಾಶ್ರೀ,ಸವಿತಾ,ಅನ್ನಪೂರ್ಣ, ನಾಗರಾಜ್, ಹಾಲೇಶ್ ಕುಮಾರ್ ಹಾಜರಿದ್ದರು.
ಯೋಗೇಶ್ ರವರು ಮಾತನಾಡುತ್ತಾ ಕ್ಷಯರೋಗದ ಬಗ್ಗೆ ಭಯಬೇಡ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಸಂಪೂರ್ಣ ಗುಣವಾಗುವುದು. ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಒಟ್ಟಿಗೆ ಸೇವಿಸಿ ರೋಗದಿಂದ ಗುಣಮುಕ್ತರಾಗಲು ತಿಳಿಸಿದರು.
ಡಾ// ಚಂದ್ರಶೇಖರ್ ಅವರು ಮಾತನಾಡುತ್ತ ಕ್ಷಯ ರೋಗವನ್ನು 2025ರ ವೇಳೆಗೆ ದೇಶದಿಂದ ಮುಕ್ತ ಮಾಡಲು ಸರ್ಕಾರ ಕಾರ್ಯಗತವಾಗಿದ್ದು ಅದರಂತೆ ಆರು ತಿಂಗಳು ಸೂಕ್ತ ಚಿಕಿತ್ಸೆ ನೀಡುತ್ತಿದ್ದು ರೋಗಲಕ್ಷಣಗಳಾದ ಜ್ವರ 15 ದಿನಗಳಿಗೂ ಹೆಚ್ಚು ಕೆಮ್ಮು ತೂಕ ಕಡಿಮೆ ಹಸಿವಾಗದೆ ಇರುವುದು ಇದು ಹೆಚ್ಚಿನ ಪೌಷ್ಟಿಕಾಂಶದ ಕೊರತೆ ನೀಗಲು ದಾನಿಗಳಿಂದ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿದ್ದು ಸದುಪಯೋಗ ಪಡೆಯಲು ತಿಳಿಸಿದರು…
ರಘುರಾಜ್ ಹೆಚ್.ಕೆ…9449553305…