
ಶಿವಮೊಗ್ಗ : ನಗರದ ಗೋಪಾಲ್ ಗೌಡ ಬಡಾವಣೆಯ ಮುಖ್ಯರಸ್ತೆಯಲ್ಲಿ ಕೆಲವು ವಾಣಿಜ್ಯ ಕಟ್ಟಡಗಳು ಸ್ಮಾರ್ಟ್ ಸಿಟಿ ಅವರು ನಿರ್ಮಿಸಿರುವ ಪುಟ್ಪಾತ್ ಅನ್ನು ತೆರವುಗೊಳಿಸಿ ತಮಗೆ ಇಷ್ಟ ಬಂದಂತೆ ಮಾರ್ಪಾಡು ಮಾಡಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.
ಪಾದಚಾರಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಸ್ಮಾರ್ಟ್ ಸಿಟಿ ಅವರು ನಿರ್ಮಿಸಿರುವ ಫುಟ್ಪಾತ್ ಅನ್ನು ಇತರ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಇಲ್ಲಿ ಓಡಾಡುವ ಪಾದಚಾರಿಗಳಿಗೆ ಅನಾನುಕೂಲವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಒತ್ತುವರಿ ಮಾಡಿ ನಷ್ಟ ಉಂಟು ಮಾಡಿರುವ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಅವರ ಹಣದಿಂದಲೇ ಅದನ್ನು ನಿರ್ಮಿಸಿ ಕೊಡಬೇಕು… ಎನ್ನುವುದು ಸ್ಥಳೀಯರ ಹಾಗೂ ಸಾರ್ವಜನಿಕರ ಆಗ್ರಹ…
ರಘುರಾಜ್ ಹೆಚ್.ಕೆ…9449553305…