Tuesday, June 17, 2025
Google search engine
Homeರಾಜ್ಯTHIRTHALLI BREAKING: ಮಾಧ್ಯಮಗಳ ನಿರಂತರ ವರದಿ:: ಮೇಲಿನ ಕುರುವಳ್ಳಿ ಬಂಡೆಗೆ ಗಣಿ ಮತ್ತು ಭೂವಿಜ್ಞಾನ...

THIRTHALLI BREAKING: ಮಾಧ್ಯಮಗಳ ನಿರಂತರ ವರದಿ:: ಮೇಲಿನ ಕುರುವಳ್ಳಿ ಬಂಡೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ದಿಢೀರ್ ದಾಳಿ..!!!

ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಬಂಡೆಯ‌ ಸರ್ವೇ ನಂಬರ್ 38, 75 ,64 ,ರಲ್ಲಿ ನಿರಂತರವಾಗಿ ಸ್ಪೋಟಕ ಬಳಸಿ ಅಕ್ರಮ ಕಲ್ಲುಗಾಣಿಗಾರಿಕೆ ನಡೆಯುತ್ತಿದ್ದು. ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದವು. ಹಾಗೆ ಇದನ್ನು ಉನ್ನತ ಅಧಿಕಾರಿಗಳ ಸಚಿವರುಗಳ ಗಮನಕ್ಕೆ ತರಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೂ ತರಲಾಗಿತ್ತು.ಇಂದು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿಂದ್ಯಾ ಹಾಗೂ ಭೂ ವಿಜ್ಞಾನಿ ಅವಿನಾಶ್ , ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಅಧಿಕಾರಿಗಳ ಅವರುಗಳನ್ನೊಳಗೊಂಡ ತಂಡ ಬಂಡೆಗೆ ದೀಡೀರ ದಾಳಿ ನೀಡಿದ್ದು.ಪರಿಶೀಲನೆ ನಡೆಸುತ್ತಿದ್ದಾರೆ.

ಇಲ್ಲಿ ಕೋಟ್ಯಾಂತರ ಹಣ ಸರ್ಕಾರದ ಬೊಕ್ಕಸಕ್ಕೆ ಲೂಟಿ ಯಾಗುತ್ತಿರುವುದನ್ನು ತಪ್ಪಿಸಬೇಕು. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದಲೇ ಗುತ್ತಿಗೆ ತೆಗೆದುಕೊಂಡು ಆಕ್ರಮ ನಡೆಸುತ್ತಿರುವ ಒಂದು ಕಡೆಯಾದರೆ, ಇನ್ನು ಉಳಿದವರು ಗುತ್ತಿಗೆ ಇಲ್ಲದಿದ್ದರೂ ಕೂಡ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ಒಂದು ಕಡೆ ಒಟ್ಟಾರೆಯಾಗಿ ಬಂಡೆಯಲ್ಲಿ ಲೂಟಿ ನಡೆಯುತ್ತಿದೆ.ಸರ್ವೇ ನಂಬರ್ 75 ರಲ್ಲಿ ನಿರಂತರವಾಗಿ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇಂಥವರ ವಿರುದ್ಧ ಯಾವುದೇ ನಿರ್ದಾಕ್ಷಣವಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.. ಈ ಅಕ್ರಮ ಕಲ್ಲು ಗಣಿಗಾರಿಕೆ ಐದಾರು ಜನ ಬಲಾಡ್ಯರ ಕಪಿಮುಷ್ಠಿಯಲ್ಲಿದ್ದು. ಇದನ್ನು ತಡೆಯಲು ಹೋದಾಗ ಬಡ ಕಾರ್ಮಿಕರನ್ನು ತೋರಿಸಿ ಬಚಾವಾಗುತ್ತಿದ್ದರು. ಆದರೆ ಕಾಲ ಬದಲಾಗಿದೆ. ಇವರು ಹೊಡೆದಿರುವ ಕೋಟ್ಯಾಂತರರು ಲೂಟಿ ಕಣ್ಣೆದುರಿಗೆ ಕಾಣಿಸುತ್ತಿದೆ. ಅದೆಲ್ಲವೂ ಈಗ ಬಯಲಿಗೆ ಬರುತ್ತದೆ…

ದಿಢೀರ್ ದಾಳಿ ಪರಿಶೀಲನೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಸ್ವಾಗತರವಾಗಿದ್ದು ಯಾವುದೇ ಪ್ರಭಾವಿ ರಾಜಕಾರಣಿಗಳು ಪ್ರಭಾವಿ ವ್ಯಕ್ತಿಗಳು ಇಂತಹ ಅಧಿಕಾರಿಗಳಿಗೆ ಬೆಂಬಲವಾಗಿ ನಿಲ್ಲಬೇಕು ಅವರಿಗೆ ಯಾವುದೇ ರೀತಿಯ ಒತ್ತಡ ತರಬಾರದು…

ಇಲ್ಲಿ ಗುತ್ತಿಗೆ ಹಿಡಿದಿರುವ ಬಂಡೆ ಎಷ್ಟು..?! ಯಾರು ಗುತ್ತಿಗೆ ಹಿಡಿದಿರುವುದು..?! ರಿನಿವಲ್ ಆಗದ ಗುತ್ತಿಗೆಗಳು ಎಷ್ಟು..?! ಅಕ್ರಮವಾಗಿ ನಡೆಯುತ್ತಿರುವ ಬಂಡೆಗಳು ಯಾವು ಅದರ ಮಾಲೀಕರು ಯಾರು..?! ಇಲ್ಲಿಗೆ ಸಪ್ಲೈ ಆಗುತ್ತಿರುವ ಜಿಲೆಟಿನ್ ಕಡ್ಡಿಗಳು ಎಲ್ಲಿಂದ ಬರುತ್ತದೆ..?! ಬಂಡೆ ಬ್ಲಾಸ್ಟ್ ಮಾಡಿ ಕಲ್ಲು ತೆಗೆಯಲು ಇವರಿಗೆ ಅಧಿಕಾರ ಕೊಟ್ಟವರು ಯಾರು..?! ಇವೆಲ್ಲವನ್ನೂ ಪತ್ರಿಕೆ ಇಂಚಿಂಚಾಗಿ ಬಯಲಿಗೆ ತರುತ್ತದೆ… ಎಚ್ಚರ..

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!