Wednesday, April 30, 2025
Google search engine
Homeರಾಜ್ಯಜಮೀರ್ ಜೈಲಿಗೆ? ಬೇಗ್ ಗೆ ಬಂಧನದ ಭೀತಿ, 1 ವಾರದ ಹಿಂದೆ ನಡೆದಿತ್ತು ಇ,ಡಿ, ಯು...

ಜಮೀರ್ ಜೈಲಿಗೆ? ಬೇಗ್ ಗೆ ಬಂಧನದ ಭೀತಿ, 1 ವಾರದ ಹಿಂದೆ ನಡೆದಿತ್ತು ಇ,ಡಿ, ಯು ರಹಸ್ಯ ಕಾರ್ಯಾಚರಣೆ!!

ಬೆಂಗಳೂರು> ಆಗಸ್ಟ್<>5->ಅಕ್ರಮ ಹಣ ವರ್ಗಾವಣೆ, ಐಎಂಎ ಹಗರಣ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಜಾರಿನಿರ್ದೇಶನಾಲಯ(ಇಡಿ) ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹಮ್ಮದ್‍ಖಾನ್, ಮಾಜಿ ಶಾಸಕ ರೋಷನ್ ಬೇಗ್ ಅವರುಗಳ ಮನೆ ಸೇರಿದಂತೆ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್‍ನ ಹಾಲಿ ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರ ಕಂಟೋನ್ಮೆಂಟ್ ಬಳಿ ಬಂಬೂಬಜಾರ್ ನಲ್ಲಿರುವ ಮನೆ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯ ಪ್ಲಾಟ್, ವಸಂತನಗರದಲ್ಲಿರುವ ಹಳೆಯ ಮನೆ, ಸದಾಶಿವನಗರದಲ್ಲಿರುವ ಆಪ್ತ ಸಹಾಯಕನ ನಿವಾಸ, ಶಿವಾಜಿನಗರದಲ್ಲಿರುವ ಮಾಜಿ ಶಾಸಕ ರೋಷನ್ ಬೇಗ್ ಅವರ ಮನೆ ಸೇರಿದಂತೆ ಒಟ್ಟು ಆರು ಕಡೆ ಆದಾಯ ತೆರಿಗೆಯ ಇಬ್ಬರು ಮತ್ತು ಜಾರಿ ನಿರ್ದೇಶನಾಲಯದ 45ಕ್ಕೂ ಹೆಚ್ಚು ಅಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.


ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮನ್ಸೂರ್ ಆಲಿಖಾನ್‍ಗೆ ಜಮೀರ್ ಅಹಮ್ಮದ್‍ಖಾನ್ ರಿಚ್ಮಡ್ ಟೌನ್‍ನಲ್ಲಿರುವ 90 ಕೋಟಿಗಳಿಗೂ ಹೆಚ್ಚು ಬೆಲೆ ಬಾಳುವ ಬಂಗಲೆಯನ್ನು ಮಾರಾಟ ಮಾಡಿದ್ದರು. ಆದರೆ, ಸರ್ಕಾರಿ ದಸ್ತಾವೇಜ್‍ಗಳಲ್ಲಿ ಮಾರಾಟದ ವಹಿವಾಟಿನ ಮೌಲ್ಯವನ್ನು 9.38 ಕೋಟಿ ಎಂದು ತೋರಿಸಿ ತೆರಿಗೆ ವಂಚಿಸಲಾಗಿತ್ತು ಎಂಬ ಆರೋಪಗಳಿವೆ. ಇತ್ತೀಚಿಗೆ ಜಮೀರ್ ಅಹ್ಮದ್ ಕೋಟಿಗಟ್ಟಲೆ ಹಣ ಖರ್ಚು ಮಾಡಿ ತಮ್ಮ್ಮ ಪುತ್ರಿಯ ವಿವಾಹ ಅದ್ದೂರಿಯಾಗಿ ಮಾಡಿದ್ದರು.

ಐ ಎಂ ಎ ಜುವೆಲರ್ಸ್ ಪ್ರಕರಣ ಜಮೀರ್ ಗೆ ಮುಳುವಾಗುತಾ, ಎರಡು ವರ್ಷಗಳಿಂದ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಜಮೀರ್ ಶ್ರೀಲಂಕಾದಲ್ಲಿ ಮುಜಬಿಲ್ ಎಂಬ ವ್ಯಕ್ತಿಯ ಮೂಲಕ ಕ್ಯಾಸಿನೊ ಗೆ ಹಣ ಹೂಡಿಕೆ ಮಾಡಿರುವ ಆರೋಪವಿದೆ.

ಇದಕ್ಕೆ ಸಂಬಂಧಪಟ್ಟಂತೆ ಜಾರಿನಿರ್ದೇಶನಾಲಯ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಆದರೆ, ಆ ಸಂದರ್ಭದಲ್ಲಿ ಅಕಾರಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ನಿಗದಿತ ಕಾಲಮಿತಿಯಲ್ಲಿ ಉತ್ತರ ನೀಡಿರಲಿಲ್ಲ ಎಂದು ಹೇಳಲಾಗಿದೆ.

ಐಷಾರಾಮಿ ಬಂಗಲೆಗಳು, ಯಾವ ಅರಮನೆಗೂ ಕಮ್ಮಿ ಇಲ್ಲದ ಮನೆಗಳು, ವಿವಿಧ ಕಡೆ ಹಣಹೂಡಿಕೆ, ಸಿಕ್ಕ ಸಿಕ್ಕವರಿಗೆ ಬಹಿರಂಗವಾಗಿ ಹಣ ಹಂಚುವುದು, ವಿದೇಶದಲ್ಲಿ ಹಣ ಹೂಡಿಕೆ, ಸರಿಯಾಗಿ ತೆರಿಗೆ ಪಾವತಿಸದೆ ಇರುವುದು, ಘಟಾನುಘಟಿ ನಾಯಕರು ಗಳ ವಿರುದ್ಧ ಹೇಳಿಕೆಗಳು , ತಮ್ಮ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ, ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಹೇಳಿಕೆ,

ಇವೆಲ್ಲ ಸೇರಿ ಜಮೀರ್ ಅಹ್ಮದ್ ಖಾನ್ ಇಡಿ, ಐಟಿ, ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸುಮಾರು ಒಂದು ವಾರಗಳ ಹಿಂದೆಯೇ ಖಾಸಗಿ ಹೋಟೆಲ್ ನಲ್ಲಿ ದುಕೊಂಡು ರಹಸ್ಯ ಕಾರ್ಯಾಚರಣೆ ನಡೆಸಿದ ಸುಮಾರು 45 ಜನ ಅಧಿಕಾರಿಗಳ ತಂಡ ಏಕಕಾಲದಲ್ಲಿ ಎಲ್ಲಾ ಕಡೆ ದಾಳಿ ನಡೆಸಿದೆ.

ಮಾಹಿತಿ ಪ್ರಕಾರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ನಿರಂತರವಾಗಿ ದಾಳಿ ಮುಂದುವರೆಸಿದ್ದಾರೆ. ಒಂದು ವೇಳೆ ಸಮಗ್ರ ಸಾಕ್ಷಿ ಸಿಕ್ಕಿದ್ದೇ ಆದಲ್ಲಿ ಜಮೀರ್ ಜೈಲಿಗೆ ಹೋಗುವುದರಲ್ಲಿ ಸಂಶಯವಿಲ್ಲ…..

ವರದಿ …ರಘುರಾಜ್ ಹೆಚ್. ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...