
ದಿನಾಂಕ:-13/11/2022 ರಂದು ಸಂಜೆ ಭದ್ರಾವತಿಯ ಜ್ಯೂನಿಯರ್ ಕಾಲೇಜ್ ನ ಹತ್ತಿರ ಜಹೀರ್, ಅಸ್ಲಂ ಹಾಗೂ ಹರೀಶ್, ಗೌತಮ್ @ ಅಪ್ಪು ರವರುಗಳ ಮದ್ಯೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಜಹೀರ್ ನೀಡಿದ ದೂರಿನ ಮೇರೆಗೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 138/2022 ಮತ್ತು ಹರೀಶ್ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 139/2022 ಹಾಗೂ ಆಸ್ಪತ್ರೆಗೆ ದಾಖಲಾಗಿದ್ದ ಜಹೀರ್ ನನ್ನು ನೋಡಲು ಹೋದಾಗ ಚಾಕುವಿನಿಂದ ಚುಚ್ಚಿ ರಕ್ತಗಾಯ ಪಡಿಸಿರುತ್ತಾರೆಂದು ರಿಜ್ವಾನ್ ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 141/2022 ಸೇರಿ ಒಟ್ಟು 03 ಪ್ರಕರಣಗಳು ದಾಖಲಾಗಿರುತ್ತದೆ.
ದಿನಾಂಕಃ- 15-11-2022 ರಂದು ಗುನ್ನೆ ಸಂಖ್ಯೆ 138/2022ರ ಆರೋಪಿತರಾದ 1) ಹರೀಶ್, 22 ವರ್ಷ ನೆಹರೂ ನಗರ ಭದ್ರಾವತಿ ಮತ್ತು 2) ಗೌತಮ್ @ ಅಪ್ಪು, 22 ವರ್ಷ, ನೆಹರೂ ನಗರ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಗುನ್ನೆ ಸಂಖ್ಯೆ 139/2022ರ ಆರೋಪಿತರಾದ 1) ಜಹೀರ್, 27 ವರ್ಷ, ಸಿದ್ದಾಪುರ ಹೊಸೂರು ಗ್ರಾಮ ಭದ್ರಾವತಿ ಮತ್ತು 2) ಅಸ್ಲಾಂ @ ಅಸ್ಲಿ, 29 ವರ್ಷ, ಎಕಿನ್ಸಾ ಕಾಲೋನಿ, ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಗುನ್ನೆ ಸಂಖ್ಯೆ 141/2022ರ ಆರೋಪಿತರಾದ 1)ಮಂಜುನಾಥ್, 24 ವರ್ಷ, ಹೊಸಮನೆ ಭದ್ರಾವತಿ ಮತ್ತು 2) ಅಶೋಕ್, 22 ವರ್ಷ, ಹೊಸಮನೆ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಸದರಿ ಮೂರು ಪ್ರಕರಣಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹಾಜರಪಡಿಸಲಾಗಿರುತ್ತದೆ ಎಂದು ಪೊಲೀಸ ಇಲಾಖೆ ತಿಳಿಸಿದೆ….
ರಘುರಾಜ್ ಹೆಚ್.ಕೆ… 9449553305…