Wednesday, June 18, 2025
Google search engine
Homeರಾಜ್ಯTHIRTHALLI:: ಹಿರಿಯ ರಾಷ್ಟ್ರೀಯ ಮಹಿಳಾ ಖೋ ಖೋ ತಂಡಕ್ಕೆ ಹೊಸೂರು_ಗುಡ್ಡೇಕೇರಿ ಶಾಲೆಯ ಸಾನಿಕ ಹೊಸೂರು ಆಯ್ಕೆ..!!!

THIRTHALLI:: ಹಿರಿಯ ರಾಷ್ಟ್ರೀಯ ಮಹಿಳಾ ಖೋ ಖೋ ತಂಡಕ್ಕೆ ಹೊಸೂರು_ಗುಡ್ಡೇಕೇರಿ ಶಾಲೆಯ ಸಾನಿಕ ಹೊಸೂರು ಆಯ್ಕೆ..!!!

ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ‌ಮಟ್ಟದ ಪಂದ್ಯಾವಳಿ,
ಕರ್ನಾಟಕ ಖೊ ಖೋ ತಂಡಕ್ಕೆ ಆಯ್ಕೆ….

ಆಳ್ವಾಸ್ ಶಿಕ್ಷಣ ‌ಸಂಸ್ಥೆಯ ವಿದ್ಯಾರ್ಥಿನಿ, ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಹಿರಿಯ ವಿದ್ಯಾರ್ಥಿನಿ, ಅನೇಕ ಕ್ರೀಡಾಕೂಟಗಳಲ್ಲಿ ಅದ್ಬುತ ಸಾಧನೆ ಮೂಲಕ ಗಮನ ಸೆಳೆದಿದ್ದ ಸಾನಿಕಾ ಹೊಸೂರು ಆಯ್ಕೆ…

ಸಾನಿಕ ಮೂಲತಃ ಗುಡ್ಡೇಕೇರಿ ಸಮೀಪದ ಹೊಸೂರು ಗ್ರಾಮದ ವೆಂಕಟೇಶ್ ಮತ್ತು ಗಾಯಿತ್ರಿ ದಂಪತಿಗಳ ಸುಪುತ್ರಿ,

ಪ್ರಾಥಮಿಕ ಶಿಕ್ಷಣವನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಮತ್ತು ಪ್ರೌಢ ಶಿಕ್ಷಣವನ್ನು, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಇಲ್ಲಿ ಮುಗಿಸಿದ್ದು ಪ್ರೌಢಶಾಲಾ ಹಂತದಲ್ಲಿಯೇ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಅದ್ಬುತ ಪ್ರತಿಭೆ..
ನಂತರ, ಬೀರಪ್ಪ ಇಟಗಿ & ವಿರೇಶ್ ಅವರ ವಿಶೇಷ ಸಹಕಾರದ ಮೇರೆಗೆ, ಕ್ರೀಡಾ ಕೋಟಾದಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಪಡೆದು ಖೋ ಖೋ ಆಟದಲ್ಲಿ ಅನೇಕ ಸಾಧನೆ ಮಾಡಿರುತ್ತಾಳೆ..
ಈ ಮಗುವಿನ ಸಾಧನೆಗೆ ಕಾರಣರಾದ, ಎಲ್ಲಾ ದೈಹಿಕ ಶಿಕ್ಷಣ ‌ಶಿಕ್ಷಕರಿಗೂ, ವಿಷಯ ಶಿಕ್ಷಕರಿಗೂ.. Care works Foundation ಬೆಂಗಳೂರು, ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹೊಸೂರು ಗುಡ್ಡೇಕೇರಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮೇಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲಾ ಬಳಗ ಗುಡ್ಡೇಕೇರಿ ಎಲ್ಲರಿಗೂ ಪ್ರೋತ್ಸಾಹಕ್ಕಾಗಿ ಅಭಿನಂದನೆಗಳನ್ನು ಶಾಲಾ ಬಳಗ ಸಲ್ಲಿಸಿದೆ… ‌

ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ,
” ರವಿ & ಪ್ರದೀಪ್ ,* ಅವರಿಗೂ ಶಾಲಾ‌ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ…

ಗ್ರಾಮೀಣ ಪ್ರತಿಭೆಯ ಈ ಸಾಧನೆಗೆ ಎಲ್ಲಡೆ ಅಭಿನಂದನೆಗಳ ಸುರಿಮಳೆಯೇ ‌‌ ಬರುತ್ತಿದ್ದು ಈಕೆಯ ಕುಟುಂಬ ವರ್ಗದವರು, ಬಂದು ಮಿತ್ರರು ಸ್ನೇಹಿತರು ಹರ್ಷಗೊಂಡಿದ್ದಾರೆ…

ಈಕೆಯ ಸಾಧನೆಗೆ,

ಟೀಂ..‌
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ತೀರ್ಥಹಳ್ಳಿ ತಾ ಶಿವಮೊಗ್ಗ ಜಿ
…. ಅಭಿನಂದನೆಗಳನ್ನು ಸಲ್ಲಿಸಿದೆ….

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!