Wednesday, April 30, 2025
Google search engine
Homeಶಿವಮೊಗ್ಗFarewell to brave soldier Sandeep with full government honours: ಮಣಿಪುರದಲ್ಲಿ ನಿಧನರಾದ ವೀರ...

Farewell to brave soldier Sandeep with full government honours: ಮಣಿಪುರದಲ್ಲಿ ನಿಧನರಾದ ವೀರ ಯೋಧ ಸಂದೀಪ್ ರಿಪ್ಪಿನ್ ಪೇಟೆಯ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ವಿಲೀನ ..!! ಸಹಕರಿಸಿದ ಎಲ್ಲರಿಗೂ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ವಂದನೆಗಳು ಸಲ್ಲಿಸಿದ ಸಂಘದ ಅಧ್ಯಕ್ಷ ಅಣ್ಣಪ್ಪ ಡಿಕೆ..!!

ಮಣಿಪುರದಲ್ಲಿ ನಿಧನರಾದ ರಿಪ್ಪನಪೇಟೆಯ ಯೋಧ ಸಂದೀಪ ಇವರ ಪಾರ್ಥಿವ ಶರೀರವನ್ನು ಸ್ವ ಗ್ರಾಮದಲ್ಲಿ ಎಲ್ಲಾ ಗೌರವದೊಂದಿಗೆ ಪಂಚಭೂತ ದಲ್ಲಿ ವಿಲೀನವಾಯಿತು. ಮೃತರ ಆಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಯೋಧರು, ಮಾಜಿಯೋಧರು ಮತ್ತು ಎಲ್ಲಾ ಗಣ್ಯರಿಗೆ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಧನ್ಯವಾದಗಳನ್ನು. ಸಂಘದ ಅದ್ಯಕ್ಷರಾದ ಅಣ್ಣಪ್ಪ DK, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ಚಂದ್ರ ತೇಜಸ್ವಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಶಿವಮೊಗ್ಗ ಘಟಕದ ಕಾರ್ಯದರ್ಶಿಯಾದ ದಿನೇಶ್ , ಮಾಜಿ ಸೈನಿಕರಾದ ಕಿಶೋರ್, ಭಾಸ್ಕರ್, ಸೋಮನ್, ಹರೀಶ್, ಚಂದಪ್ಪ, ಧರ್ಮಪ್ಪ, ಗಂಗಾಧರಪ್ಪ ರಂಗರಾಜು ಮತ್ತು ಹಾಲಿ ಸೇವೆಯಲ್ಲಿರುವ ರಮಾಕಾಂತ್ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಕ್ರಿಯೆ ಯಶಸ್ವಿಗೆ ಕಾರಣರಾಗಿದ್ದಾರೆ. ಮತ್ತು ಪೊಲೀಸ್ ಅಧಿಕಾರಿಗಳು, ಊರಿನ ಗಣ್ಯರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನಂತರ ಮಾತನಾಡಿದ ಅವರು ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ ಕಲಿಸುತ್ತದೆ ಎನ್ನೋದು ನಾವೆಲ್ಲಾ ಮರೆಯಬಾರದು. KPC ಜೋಗ ದಲ್ಲಿ ನಡೆದ ಘಟನೆ, ಇಂದು ಯೋಧನ ಪಾರ್ಥಿವ ಶರೀರವನ್ನು ಅವರ ಮನೆಗೆ ಸೇರಿದ ರೀತಿ ಮತ್ತು ಇನ್ನಿತರೆ ಕಾರ್ಯಗಳು ನಮ್ಮ ಸಂಘದ ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ನಾವೆಲ್ಲಾ ಒಗಟ್ಟಾಗಿದ್ದೇವೆ ಅನ್ನೋದು ಸೂಚಿಸುತ್ತದೆ. ಯಾರು ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರ ತಾಲ್ಲೂಕು ಸೇರಿಲ್ಲವೋ ಇವರು ನನಗೆ ಕರೆ ಮಾಡಿ. ಸಂಘಕ್ಕೆ ಸೇರಿಕೊಳ್ಳಿ
ಯೋಧ ಸಂದೀಪ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ನಮ್ಮ ಟ್ರಸ್ಟ್ ಗೌರವಾಧ್ಯಕ್ಷರಾದ ಸೋಮನ್ , ರಾಜ್ಯ ಉಪಾಧಕ್ಷರಾದ ಶುಭಾಶ್ಚಂದ್ರ ತೇಜಸ್ವಿ, ಕಾರ್ಯದರ್ಶಿಗಳಾದ ಭಾಸ್ಕರ್, ನಿರ್ದೇಶಕರುಗಳಾದ ಗಂಗಾಧರಪ್ಪ, ರಂಗರಾಜು ಬಾಳೆಗುಂಡಿ, ಧರ್ಮಪ್ಪ, ಕಿಶೋರ್ ಬೈರಾಪುರ, ಚಂದ್ರಪ್ಪ, ಹರೀಶ್ ಬಿ, ಹಾಗೂ ಶಿವಮೊಗ್ಗ ಜಿಲ್ಲಾ ಸಂಘದ ಕಾರ್ಯದರ್ಶಿಗಳಾದ ದಿನೇಶ್ ಹಾಗೂ ಅವರ ತಂಡ, ಹಾಜರಿದ್ದ ಹಾಲಿ ಯೋಧರು ಎಲ್ಲರಿಗೂ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರದ ಪರವಾಗಿ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಕಳೆದ ಮೂರು ದಿನಗಳಿಂದ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವಲ್ಲಿ ವಿವಿಧ ರೂಪದಲ್ಲಿ ನಿರಂತರವಾಗಿ ನಮ್ಮೊಂದಿಗೆ ಸಹಕರಿಸಿದ ಹಾಲಿ ಸೇವಯಲ್ಲಿರುವ ರಾಮಕಾಂತ್ ಕೆಳದಿ, ಶುಭಾಶ್ಚಂದ್ರ ತೇಜಸ್ವಿ, ಭಾಸ್ಕರ್ ಟಿ.ಪಿ, ಕಿಶೋರ್ ಬೈರಾಪುರ, ಇವರುಗಳಿಗೆ ವಿಶೇಷವಾದ ವಂದನೆ ಅಭಿನಂದನೆಗಳು. ಹಾಗೂ ಈ ಕಾರ್ಯದಲ್ಲಿ ನಮ್ಮ ಕರೆಗಳಿಗೆ ಸ್ಪಂದಿಸಿ ಸಹಕರಿಸಿದ ಶಿವಮೊಗ್ಗ ಜಿಲ್ಲಾಡಳಿತ, ರಿಪ್ಪಿನಪೇಟೆ ಹಾಗೂ ಹೊಸನಗರ ಪೊಲೀಸ್ ಇಲಾಖೆ, ನಮ್ಮ ಸಾಗರದ ಶಾಸಕರಾದ ಹರತಾಳು ಹಾಲಪ್ಪ ಇವರುಗಳಿಗೆ ವಂದನೆಗಳು ಅರ್ಪಿಸುತ್ತೇನೆ ಎಂದರು…

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...