Wednesday, April 30, 2025
Google search engine
Homeರಾಜ್ಯಮದುವೆ ಗಂಡು ಗಣಿ ಅಧಿಕಾರಿಯ ಮೈತುಂಬ ಮರಳು ಮತ್ತು ಕಲ್ಲು ಮಾಫಿಯಾದ ಬಂಗಾರ..! ಋಣ ತೀರಿಸಲು...

ಮದುವೆ ಗಂಡು ಗಣಿ ಅಧಿಕಾರಿಯ ಮೈತುಂಬ ಮರಳು ಮತ್ತು ಕಲ್ಲು ಮಾಫಿಯಾದ ಬಂಗಾರ..! ಋಣ ತೀರಿಸಲು ಅವಸರದಲ್ಲಿ ರೆಡಿಯಾದ ಭ್ರಷ್ಟ ಅಧಿಕಾರಿ..!!

ತೀರ್ಥಹಳ್ಳಿ : ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಮತ್ತು ಕಲ್ಲು ಮಾಫಿಯಾ ಹಾಗೂ ಮಣ್ಣು ಮಾಫಿಯಾ ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಕೆಲವು ಭ್ರಷ್ಟ ನೀಚ ಅಧಿಕಾರಿಗಳು ಎಂಜಲು ಕಾಸಿಗೆ ಕೈ ಒಡ್ಡಿ ನಿಂತಿರುವುದು ನಾಚಿಕೆಗೇಡಿತನ ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಶಿವಮೊಗ್ಗದ ಗಣಿ ಇಲಾಖೆಯ ತೀರ್ಥಹಳ್ಳಿ ವಿಭಾಗದ ಉಸ್ತುವಾರಿ ಅಧಿಕಾರಿಯ ಮದುವೆ ನಡೆಯಿತು. ಸದರಿ ಮದುವೆ ಮತ್ತು ರಿಸೆಪ್ಷನ್ನಲ್ಲಿ ಮದುವೆಯ ಗಂಡಿನ ನೆಂಟರಿಷ್ಟರಿಗಿಂತ ಬಂಧು ಬಳಗಕ್ಕಿಂತ ತೀರ್ಥಹಳ್ಳಿಯ ಮಣ್ಣು ಮರಳು ಕಲ್ಲು ಮಾಫಿಯಾದವರೇ ಕಾಣಿಸಿಕೊಂಡಿದ್ದರು. ಗಬ್ಬಡಿಯ ಗಣೇಶನ ಇನ್ನೊಂದು ಹೆಸರಿನ ವ್ಯಕ್ತಿ ಒಬ್ಬ ಮದುವೆಯ ಮತ್ತು ರಿಸೆಪ್ಶನ್ ಎಲ್ಲ ಉಸ್ತುವಾರಿ ಹೊತ್ತಂತೆ ತಿರುಗಾಡುತ್ತಿದ್ದ .ಮದುವೆ ದಿನ ಗಣಿ ಅಧಿಕಾರಿಯ ಮೈ ಮೇಲೆ ತೀರ್ಥಹಳ್ಳಿಯ ಮಣ್ಣು ,ಮರಳು ,ಕಲ್ಲು ಮಾಫಿಯಾದವರು ಕನಿಷ್ಠ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಬ್ರಾಸ್ ಲೈಟ್, ಉಂಗುರ ,ಸರವನ್ನು ಹಾಕಿದ್ದರು… ಎಂದು ಮದುವೆಗೆ ಬಂದವರೆಲ್ಲ ಪತ್ರಿಕೆಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ .

ನಾನೊಬ್ಬ ಸಾಚ ಎಂದು ಪೋಸ್ ಕೊಡುತ್ತಿದ್ದ ಈ ಭ್ರಷ್ಟ ಅಧಿಕಾರಿಗೆ ಇನ್ನು ಮೇಲೆ ಏನಿದ್ದರೂ ಇವರ ಋಣ ತೀರಿಸುವ ಹೊರೆ ಇಂಥವರಿಗೆಲ್ಲಾ ಕೆಲಸ ಏಕೆ ಬೇಕು ..?! ಅಕ್ರಮದ ಹಣದಲ್ಲಿ ಮದುವೆಯಾಗುವ ಇವರದು ಒಂದು ಜೀವನವೇ..?! ಇದರಲ್ಲಿ ಮಾಫಿಯಾ ದವರ ತಪ್ಪಿಲ್ಲ ಅವರು ಇವನ ಮೇಲೆ ಇನ್ವೆಸ್ಟ್ ಮಾಡಿದ್ದಾರೆ ಅಷ್ಟೇ .. ಅದನ್ನು ಮರಳಿ ಪಡೆದುಕೊಳ್ಳುತ್ತಾರೆ ಅಲ್ಲಿಗೆ ಹಾಕಿದ ದುಡ್ಡಿಗೆ ಎರಡರಷ್ಟು ಲಾಭ ಬಂದಂತಾಗುತ್ತದೆ… ಇಷ್ಟೇ ಲೆಕ್ಕಾಚಾರ…

ರಘುರಾಜ್ ಹೆಚ್.ಕೆ..9449553305….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...