Wednesday, April 30, 2025
Google search engine
Homeತೀರ್ಥಹಳ್ಳಿBig Breaking news : ತೀರ್ಥಹಳ್ಳಿಯಲ್ಲಿ ಬೃಹತ್ ಹನಿ ಟ್ರ್ಯಾಪ್ ..!ಸರ್ಕಾರಿ ಅಧಿಕಾರಿಗೆ...

Big Breaking news : ತೀರ್ಥಹಳ್ಳಿಯಲ್ಲಿ ಬೃಹತ್ ಹನಿ ಟ್ರ್ಯಾಪ್ ..!ಸರ್ಕಾರಿ ಅಧಿಕಾರಿಗೆ ಬ್ಲಾಕ್ ಮೇಲ್..?!ಒಬ್ಬ ಯುವತಿ ಒಬ್ಬ ಯುವಕನ ಸೆರೆ..!!

ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ದಿನಗಳಿಂದ ಗುಸು-ಗುಸು ಪಿಸು ಪಿಸು ಎನ್ನುತ್ತಿದ್ದ ಹನಿ ಟ್ರ್ಯಾಪ್ ಪ್ರಕರಣ ಒಂದು ಈಗ ಬೆಳಕಿಗೆ ಬಂದಿದ್ದು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಜ್ಜವಳ್ಳಿ ಮೂಲದ ಯುವತಿ ಒಬ್ಬಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಗಂಟೆ ಹಕ್ಲು ಮೂಲದ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಎನ್ನುವ ಮಾಹಿತಿಗಳು ಲಭ್ಯವಾಗಿದ್ದು.

ಇವರ ಹಿಂದೆ ದೊಡ್ಡದಾದ ಗ್ಯಾಂಗ್ ಒಂದು ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ತೀರ್ಥಳ್ಳಿಯ ಪ್ರತಿಷ್ಠಿತ ಜ್ಯುವೆಲರ್ಸ್ ಮಾಲೀಕರು ಒಬ್ಬರಿಗೆ ಹನಿ ಟ್ರ್ಯಾಪ್ ಮಾಡಿದ್ದು ಉಡುಪಿ ಮೂಲದ ಮೂರು ನಾಲ್ಕು ಜನರಿಗೆ ಹನಿ ಟ್ರ್ಯಾಪ್ ಮಾಡಿರುವ ಸಾಧ್ಯತೆ ಇದೆ. ಹನಿ ಟ್ರ್ಯಾಪ್ ಮಾಡುವುದನ್ನು ವೃತ್ತಿ ಮಾಡಿಕೊಂಡ ಈ ಗ್ಯಾಂಗ್ ಮೊದಲು ಅಧಿಕಾರಿಗಳನ್ನು ಹಾಗೂ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದು ನಂತರ ನಿಧಾನವಾಗಿ ನಂಬರ್ ತೆಗೆದುಕೊಂಡು ಅವರ ಜೊತೆ ಸಂಪರ್ಕ ಹೊಂದುವುದು ಆನಂತರ ಅವರನ್ನು ಖೆಡ್ಡಕ್ಕೆಬೀಳಿಸುವುದು ಆಗಿದೆ.

ಮೇಗರಹಳ್ಳಿ ಮೂಲದ ಸರ್ಕಾರಿ ಅಧಿಕಾರಿ ಒಬ್ಬರು ಹನಿ ಟ್ರ್ಯಾಪ್ ಬಲೆಗೆ:

ತಾಲೂಕಿನ ಮೇಗರವಳ್ಳಿ ಮೂಲದ ಸರ್ಕಾರಿ ಅಧಿಕಾರಿ ಒಬ್ಬರು ಈ ಬಲೆಗೆ ಬಿದ್ದಿದ್ದು ಅವರು ನೀಡಿದ ದೂರಿನ ಮೇರೆಗೆ ಈ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇಬ್ಬರು ಮಾತ್ರ ಬಂಧಿತರಾಗಿದ್ದು ವ್ಯವಸ್ಥಿತವಾದ ತಂಡ ಒಂದು ಇದರ ಹಿಂದಿದ್ದು ಅವರ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಈ ಪ್ರಕರಣ ಮೂಲ ಹುಡುಕಿ ಭೇಧಿಸಿದ್ದೆ ಆದಲ್ಲಿ ನಿಜವಾದ ಆರೋಪಿಗಳು ಸಿಕ್ಕಿದೆ ಆದಲ್ಲಿ ತೀರ್ಥಳ್ಳಿಯ ಪೊಲೀಸರ ಪಾಲಿಗೆ ಇದೊಂದು ಹೆಮ್ಮೆಯ ವಿಷಯವಾಗಲಿದೆ.

ಜಿಲ್ಲೆಯ ದಕ್ಷ ಪ್ರಾಮಾಣಿಕ ಎಸ್ ಪಿ ಮಿಥುನ್ ಕುಮಾರ್ ಜಿ ಕೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಮುಖ ಆರೋಪಿಗಳನ್ನು ಬಂಧಿಸುತ್ತಾರಾ ಕಾದುನೋಡಬೇಕು…

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...