Wednesday, April 30, 2025
Google search engine
Homeಶಿವಮೊಗ್ಗಉದ್ಯಮ ಲೋಕಕ್ಕೆ ಬರುವ ಉದ್ಯಮಿಗಳಿಗೆ ದಾರಿ ದೀಪವಾಗಲಿದೆ ಮಲ್ನಾಡ್ ಸ್ಟಾರ್ಟ್ ಅಪ್ ಸಮ್ಮೇಳನ - ಸಿ.ಎಮ್...

ಉದ್ಯಮ ಲೋಕಕ್ಕೆ ಬರುವ ಉದ್ಯಮಿಗಳಿಗೆ ದಾರಿ ದೀಪವಾಗಲಿದೆ ಮಲ್ನಾಡ್ ಸ್ಟಾರ್ಟ್ ಅಪ್ ಸಮ್ಮೇಳನ – ಸಿ.ಎಮ್ ಪಾಟೀಲ್.

ಮಲೆನಾಡು ಹೆಬ್ಬಾಗಿಲಿನ ಯುವ ಉದಯೋನ್ಮುಖ ಉದ್ಯಮಿಗಳಿಗೆ ಭರವಸೆಯ ಬೆಳಕಾಗಿ ಮಾರ್ಗದರ್ಶನ ಮಾಡಲು ಅನ್ವೇಷಣ ಇನ್ನೋವೇಶನ್ ತಂಡ ಸೆ.9ರ ಶನಿವಾರ ಅನ್ವೇಷಣ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂನ್ನು ಮಲೆನಾಡಿಗೆ ಪ್ರಥಮ ಬಾರಿಗೆ ಪರಿಚಯಿಸಲಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನ್ವೇಷಣ ತಂಡದ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಪಾಟೀಲ್ ರವರು ಮಲೆನಾಡ ಭಾಗದಲ್ಲಿ ಸ್ಟಾರ್ಟಪ್ ಸಂಸ್ಕ್ರತಿಯನ್ನು ಬೆಳೆಸುವ ಹಾಗು ತಂತ್ರಜ್ಙಾನ,ವ್ಯಾಪಾರ,ವಾಣಿಜ್ಯೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಸೆ.9ರ ಶನಿವಾರದಂದು ಸಾಗರ ರಸ್ತೆಯಲ್ಲಿರುವ ಪಿ.ಇ.ಎಸ್ ಕ್ಯಾಂಪಸ್ ನಲ್ಲಿ ಎಂಟ್ರೆಪ್ರೆನ್ಯೂರಿಯಲ್ ಫೋರಂ ಉದ್ಘಾಡನೆಯಾಗಲಿದೆ ಎಂದು ತಿಳಿಸಿದರು.

ಫೋರಂ ಉದ್ಘಾಟನೆಯ ಪ್ರಯೋಜನಗಳು?

ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರಿಗೆ ಹೊಸ ಶಕ್ತಿಯಾಗಿ ಜೊತೆಯಾಗಲಿದೆ.
ಉದ್ಯೋಗ ಸೃಷ್ಟಿ, ಸಣ್ಣ ಪಟ್ಟಣಗಳಿಂದ ಮೆಟ್ರೋ ನಗರಗಳ ಆಚೆಗಿನ ಉದ್ಯಮಿಗಳ ಸಾಮರ್ಥ್ಯ ಗುರುತಿಸುವಲ್ಲಿ ಸಹಕಾರಿಯಾಗಲಿದೆ.

ಉದ್ಯಮ ಲೋಕಕ್ಕೆ ಬರುವವರಿಗೆ ಏನೆಲ್ಲಾ ಸಹಕಾರ ಸಿಗಲಿದೆ ?

ಸ್ಟಾರ್ಟ್ ಅಪ್ ಗಳು ಅಭಿವೃದ್ಧಿಯಾಗಲು ಸೂಕ್ತ ವಾತವರಣ ಕಲ್ಪಿಸಲಾಗುತ್ತದೆ ಹಾಗು ಮಾರುಕಟ್ಟೆ ಪ್ರವೇಶ, ಹಣಕಾಸಿನ ಸೌಲಭ್ಯಗಳು ಒದಗಿಸಲಿದೆ.
ಉದ್ಯಮಿಗಳ ಕೌಶಲ್ಯ ಜ್ಙಾನ ಸಾಧನಗಳನ್ನು ಸಬಲೀಕರಣಗೊಳಿಸಲು ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.
ಉದ್ಯಮಕ್ಕೆ ಬೇಕಾದ ಹಣಕಾಸಿನ ದಾರಿ ಸುಗಮವಾಗಿಸಲು ಅನ್ವೇಷಣ ತಂಡವು ಹೂಡಿಕೆದಾರರು, ಉದ್ದಿಮೆ ಬಂಡವಾಳಗಾರರು ಮತ್ತು ಧನ ಸಹಾಯ ಸಂಸ್ಥೆಗಳ ಸಂಪರ್ಕ ಒದಗಿಸಿ ಸ್ಟಾರ್ಟ್ ಅಪ್ ಗಳಿಗೆ ಅಗತ್ಯವಿರುವ ಹಣಕಾಸಿನ ಬೆಂಬಲ ಪಡೆಯಲು ಸಹಾಯ ಮಾಡುತ್ತದೆ ಎಂದು ಸಿ.ಎಮ್ ಪಾಟೀಲ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ, ಅನ್ವೇಷಣ ನಿರ್ದೇಶಕರಾದ ಬಿ.ಆರ್ ಸುಭಾಷ್, ಪಿ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಉಪಸ್ಥಿತರಿದ್ದರು.

ವರದಿ – ವಿನಯ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...