Wednesday, April 30, 2025
Google search engine
Homeರಾಷ್ಟ್ರೀಯShivamogga: ಅಖಿಲ ಭಾರತೀಯ ಸಹಕಾರಿ ಸಪ್ತಾಹ..!

Shivamogga: ಅಖಿಲ ಭಾರತೀಯ ಸಹಕಾರಿ ಸಪ್ತಾಹ..!

ಶಿವಮೊಗ್ಗ: ಮಾಜಿ ಪ್ರಧಾನಿ ನೆಹರೂ ದಿನ ಮಕ್ಕಳ ದಿನಾಚರಣೆಯ ದಿನದಂದು 70 ನೇ ಅಖಿಲ ಭಾರತೀಯ  ಸಹಕಾರಿ ಸಪ್ತಾಹವನ್ನ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು.

ಇಂದು ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಠಿನಡೆಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ್ ಗೌಡ ಏಳು ದಿನ ಈ ದಿನಾಚರಣೆ ನಡೆಯಲಿದೆ. ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಏಳುದಿನ ವಿವಿಧ ಜಿಲ್ಲೆಯಲ್ಲಿ ನಡೆದರೆ ಜಿಲ್ಲೆಯ ಏಳು ದಿನ ವಿವಿಧ ತಾಲೂಕಿನಲ್ಲಿ ನಡೆಯಲಿದೆ ಎಂದರು.

ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿತ್ತು . ಆದರೆ ಬರ ಹಿನ್ನಲೆಯಲ್ಲಿ ಸಿಎಂ‌ ಭಾಗಿಯಾಗುತ್ತಿಲ್ಲ.  ಹಿರಿಯ ಸಹಕಾರಿಗಳು ಸಹಕಾರಿ ದೂರಿಣರು ಹಾಗೂ ಹಾಲಿ ಸಹಕಾರಿ ಸಚಿವರಾದ ರಾಜಣ್ಣ ಉದ್ಘಾಟಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚಿತ್ರದುರ್ಗದ ಉಸ್ತುವಾರಿ ಸುಧಾಕರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ. ಮಾಜಿ ಮಂತ್ರಿ ಜಿ.ಡಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಇದರ ಉದ್ದೇಶ 5 ಟ್ರಿಲಿಯನ್ ಆರ್ಥಿಕ ಗುರಿ ಮುಟ್ಟಬೇಕು ಇದರ ಬಗ್ಗೆ ಏಳುದಿನ ನಡೆಯಲಿದೆ. ಮೊದಲನೇ ದಿನ ಸಂಪನ್ಮೂಲ ವ್ಯಕ್ತಿಗಳು ನಡೆಸುತ್ತಾರೆ. ಸರ್ಕಾರವೇ ಈ ಕಾರ್ಯಕ್ರಮ ನಡೆಸುತ್ತಿದೆ. ಸಹಕಾರಿ ಸಂಸ್ಥೆಗಳ ವಸ್ತುಪ್ರದರ್ಶನ, ರೈತರಿಗೆ ಬೇಕಾದ ವಸ್ತುಗಳ ವಸ್ತು ಪ್ರದರ್ಶನ, ಚಿಕ್ಕದಾಗಿ ಚೊಕ್ಕದಾಗಿ ಸಾಂಕೇತಿಕವಾಗಿ ಮಾಡಲಾಗುತ್ತದೆ.

ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್  ಮ್ಯಾಮ್ ಕೋಸ್ ಸಂಸ್ಥೆ, ಸೊಸೈಟಿ, ಮಹಿಳಾ ಸಹಕಾರಿ ಸಂಸ್ಥೆಗಳಿವೆ. ಆತ್ಮವಲೋಕನ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗದಲ್ಲಿ ನ.14 ರಂದು ಸಹಕಾರ ಸಂಘ ಸಂಸ್ಥೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತು ಕಾರ್ಯಕ್ರಮ ನಡೆದರೆ,

ನ.15 ರಂದು  ರಾಯಚೂರು, ನ.16 ರಂದು ಶಿರಸಿ, ನ.17 ರಂದು ಹುಬ್ಬಳ್ಳಿಯಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯನ್ಮುಖವಲಯಗಳ  ಕುರಿತು ಕಾರ್ಯಕ್ರಮ ನಡೆಯಲಿದೆ. ನ.18 ರಂದು ಮಂಗಳೂರಿನಲ್ಲಿ ಸಹಕಾರಿ ಸಹಭಾಗಿತ್ವ ಬಲಪಡಿಸುವ ವಿಚಾರ ನಡೆಯಲಿದೆ

ಬೆಂಗಳೂರಿನಲ್ಲೂ ಕಾರ್ಯಕ್ರಮ ನಡೆಯಲಿದೆ. ಏಳು ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನ ಸಮಾರೋಪ ಸಮಾರಂಭವನ್ನ ಬಿಜಾಪುರದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಏಳು ದಿನ ಏಳು ತಾಲೂಕಿನ ಸಹಕಾರಿ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನ. 15 ರಂದು ಶಿಕಾರಿಪುರ, ನ.16 ರಂದು ಭದ್ರಾವತಿ, ನ.17 ರಂದು ಸೊರಬ, ನ.18 ತೀರ್ಥಹಳ್ಳಿ,  ನ.19 ರಂದು ಸಾಗರ, ನ. 20 ರಂದು ಹೊಸನಗರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...