Wednesday, April 30, 2025
Google search engine
Homeಶಿವಮೊಗ್ಗಹಣದ ಹಿಂದೆ ಹೋದರೆ ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ...

ಹಣದ ಹಿಂದೆ ಹೋದರೆ ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ..!


ಉಪಾದ್ಯಾಯ ಡಾಕ್ಟ್ರು ಕೇವಲ ಹಣದ ಹಿಂದೆ ಹೋಗಿದ್ದರೆ ಪ್ರಾಯಶಃ ನಾವ್ಯಾರೂ ಇಲ್ಲಿ ಅವರನ್ನು ಹುಡುಕಿಕೊಂಡು‌ ಬಂದು ಶುಭ ಹಾರೈಸುವ ಸಂದರ್ಭವೇ ಬರುತ್ತಿರಲಿಲ್ಲ. ಅವರು ಹಣದ ಹಿಂದೆ ಹೋಗದೆ ಮಾನವೀಯತೆ ಜನಪರ ಕಾಳಜಿಗಳಿಗೆ ಆಧ್ಯತೆ ನೀಡಿದ್ದರಿಂದ ನಿವೃತ್ತಿ ಹೊಂದಿ ಎರಡು ದಶಕಗಳಿಗೂ ಮಿಗಿಲಾಗಿದ್ದರೂ ಸಹೋದ್ಯೋಗಿಗಳು, ಜನರ ಮನದಲ್ಲಿ ಇಂದಿಗೂ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಹಣದ ಹಿಂದೆ ಹೋದವರು ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ತಾಲ್ಲೂಕಿನ ಪ್ರಥಮ ತಾಲ್ಲೂಕು ವೈದ್ಯಾಧಿಕಾರಿಗಳಾಗಿ, ಜೆ ಸಿ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಅಪಾರ ಜನ ಮನ್ನಣೆ ಗಳಿಸಿ, ವಯೋ ನಿವೃತ್ತಿಯ ನಂತರವೂ ಅಗತ್ಯ ಉಳ್ಳವರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ತಾಲ್ಲೂಕಿನ ಹಿರಿಯ ಜನಪ್ರಿಯ ವೈದ್ಯರಾದ ಡಾ.ಪಿ ಎಸ್ ಉಪಾಧ್ಯಾಯರ 79 ನೇ ಜನ್ಮ ದಿನದಂದು ಡಾ.ಉಪಾಧ್ಯಾಯ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಮಾತನಾಡಿದರು.

ತಮ್ಮ ವೃತ್ತಿ ಬದುಕಿನ ವಿವಿಧ ನೆನಪುಗಳನ್ನು ಮೆಲುಕು ಹಾಕಿದ ಡಾ.ಉಪಾಧ್ಯಾಯರು ಎಲ್ಲರ ಆತ್ಮೀಯತೆ, ಪ್ರೀತಿ ವಿಶ್ವಾಸ,ಶುಭ ಹಾರೈಕೆಗಳು ಬದುಕಿನ ಖುಷಿ ಹೆಚ್ಚಿಸಿವೆ. ಬದುಕಿನ ಗಳಿಕೆ ಎಂದರೆ ಇದೇ ಎಂಬ ಭಾವ ತುಂಬಿದೆ. ನನ್ನ ಬಗ್ಗೆ ವಿಶೇಷ ಅಭಿಮಾನ ಪ್ರೀತಿ ತೋರಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ, ಪದಾಧಿಕಾರಿಗಳಾದ ಪ್ರಮೀಳ,ತನುಜಾ,‌ ಶೈಲಜಾ ಶೆಟ್ಟಿ, ರಾಜಪ್ಪ, ರಾಜೇಶ್,ಗಿರಿ ಡಿ ಟಿ, ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ, ನಿವೃತ್ತ ನೌಕರರಾದ ಡಿ ಸಿ ಶಿವಶಂಕರ್, ಕಾಡಪ್ಪ ಗೌಡ,ವಿದ್ಯಾರ್ಥಿ ಅಂಶುಮತ್ ಶೆಟ್ಟಿ ಮತ್ತಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...