Sunday, June 15, 2025
Google search engine
Homeಅರಣ್ಯ ಇಲಾಖೆShivamogga breaking: ಮಾಳೂರು ಪೊಲೀಸ್ ಠಾಣೆಯ ಕ್ವಾರ್ಟರ್ಸ್ ಹತ್ತಿರ ಅಕ್ರಮ ಮರದ ತುಂಡುಗಳು ಪತ್ತೆ..?ಆ ಪೊಲೀಸ್...

Shivamogga breaking: ಮಾಳೂರು ಪೊಲೀಸ್ ಠಾಣೆಯ ಕ್ವಾರ್ಟರ್ಸ್ ಹತ್ತಿರ ಅಕ್ರಮ ಮರದ ತುಂಡುಗಳು ಪತ್ತೆ..?ಆ ಪೊಲೀಸ್ ಪೇದೆಯ ಪಾತ್ರವೇನು..?!

ತೀರ್ಥಹಳ್ಳಿ: ತಾಲೂಕಿನ ಮಾಲೂರು ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್ ಕ್ವಾರ್ಟರ್ಸ್ ನ ಹಿಂಭಾಗದಲ್ಲಿ ಬೆಲೆಬಾಳುವ ಏಳು ಟೀಕ್ ವುಡ್ ಪೀಸ್ ಗಳು ಸಿಕ್ಕಿದ್ದು ಇದು ಯಾರದು..? ಇದರ ಹಿಂದೆ ಯಾರಿದ್ದಾರೆ..? ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಏನು..? ಎನ್ನುವ ಪ್ರಶ್ನೆ ಅರಣ್ಯ ಇಲಾಖೆಯಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳಲ್ಲಿ ಮೂಡಿದೆ.

ಏನಿದು ಪ್ರಕರಣ:

ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳ  ತಂಡ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾರ್ಟರ್ಸ್ ಹಿಂಬಾಗದಲ್ಲಿ ಬೆಲೆಬಾಳುವ 7 ಟೀಕ್ ವುಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾರದು ಈ ಮರದ ತುಂಡುಗಳು ..?

ಮರದ ತುಂಡುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳಿಗೆ ಶಾಕ್ ಆಗಿದೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕ್ವಾಟ್ರಸ್ ನ ಹಿಂಭಾಗದಲ್ಲಿ ಈ ಮರದ ತುಂಡುಗಳು ಸಿಕ್ಕಿರುವುದು ಅದನ್ನು ತಂದಿರುವುದು ಯಾರು..? ತಂದಿರುವುದು ಏಕೆ ..?ಇದರ ಹಿಂದೆ ಯಾರ ಕೈವಾಡವಿದೆ ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಕೇಳಿ ಬರುತ್ತಿರುವ ಆ ಪೊಲೀಸ್ ಪೇದೆಯ ಪಾತ್ರ ಇದರಲ್ಲಿ ಎಷ್ಟಿದೆ ..?ಆತನೇ ಇದನ್ನು ತಂದನಾ..? ಎನ್ನುವ ಸಾಕಷ್ಟು ಅನುಮಾನಗಳು ಇದರಲ್ಲಿ ಹುಟ್ಟು ಹಾಕಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಸಮಗ್ರ ತನಿಖೆಯಿಂದ ಎಲ್ಲಾ ಸತ್ಯವೂ ಹೊರ ಬರಬೇಕಾಗಿದೆ.

ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಆರ್‌ಎಫ್ ಓ ಅಧಿಕಾರಿಗಳಾದ ಹನುಮಂತಪ್ಪ, ದಾನೇಶ್, ಪ್ರಶಾಂತ್, ಮೋಹನ್ ಅವರನ್ನು ಒಳಗೊಂಡ ತಂಡ  ಪಾಲ್ಗೊಂಡಿತ್ತು.

ರಘುರಾಜ್ ಹೆಚ್‌. ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!