Wednesday, April 30, 2025
Google search engine
Homeರಾಜ್ಯಶಿಕ್ಷಣ ಸಚಿವರ ತವರು ಜಿಲ್ಲೆಗೆ ಅನಧಿಕೃತ ವರ್ಗಾವಣೆ..!ಕುರುಡು ಕಾಂಚಾಣ ಕೆಲಸ ಮಾಡಿತೇ..?!

ಶಿಕ್ಷಣ ಸಚಿವರ ತವರು ಜಿಲ್ಲೆಗೆ ಅನಧಿಕೃತ ವರ್ಗಾವಣೆ..!ಕುರುಡು ಕಾಂಚಾಣ ಕೆಲಸ ಮಾಡಿತೇ..?!

ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭೂಮೇಶ್ ಎ ಎಚ್ ಎನ್ನುವ ಮುಖ್ಯೋಪಾಧ್ಯಾಯರು   ಅನಧಿಕೃತವಾಗಿ  ನಿಯಮಬಾಹಿರವಾಗಿ  ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಸಾಗರ ತಾಲೂಕು  ಇಲ್ಲಿಗೆ ವರ್ಗಾವಣೆಯಾಗಿ ಬಂದಿರುತ್ತಾರೆ.

ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಈ ರೀತಿಯ ವರ್ಗಾವಣೆಯಾಗಿ ಬರುವಂತಿಲ್ಲ ಈ ವರ್ಗಾವಣೆ ಹಲವು ಅನುಮಾನಗಳನ್ನು ಮೂಡಿಸುವಂತಿದೆ. ಇಂತಹ ಸ್ಥಳಗಳಿಗೆ ಬರಬೇಕಾದರೆ ಅದರದೇ ಆದ ನೀತಿ ನಿಯಮಗಳಿವೆ ಒಮ್ಮೆ ಆ ನೀತಿ ನಿಯಮಗಳು ಏನು ಎನ್ನುವುದನ್ನು ನೋಡೋಣ ಬನ್ನಿ;

1) ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗಳ ಮೂಲಕವೇ ಬರಬೇಕು.

2) ಕೌನ್ಸಿಲ್ ಮೂಲಕ ಮೆರಿಟ್ ಆಧಾರದ ಮೇಲೆ ಅರ್ಹತೆ ಇರುವ ಅಭ್ಯರ್ಥಿಗಳ ಆಯ್ಕೆಯಾಗಬೇಕು.

3) ಈ ಹುದ್ದೆಗಳಿಗೆ ಐದು ವರ್ಷಗಳ ಅವಧಿ ಇರುತ್ತದೆ ಒಂದು ಸಲ ಬಂದರೆ ಐದು ವರ್ಷ ಅದೇ ಜಾಗದಲ್ಲಿ ಮುಂದುವರಿಯಬೇಕು.

4) ಪರೀಕ್ಷೆಗೆ ಹಾಜರಾಗದೆ ಮೆರಿಟ್ ಇಲ್ಲದೆ ಯಾವುದೇ ಶಿಫಾರಸ್ಸುಗಳ ಮೂಲಕ ಬರಲು ಈ ಹುದ್ದೆಗೆ ಅವಕಾಶವಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ನಿಯಮ ಮೀರಿ ವರ್ಗಾವಣೆ ಮಾಡಲು ಕಾರಣವೇನು..? ಆದೇಶದಲ್ಲಿ ಪ್ರತಿಯನ್ನು ಶಿಕ್ಷಣ ಸಚಿವರಿಗೆ ಅವರ ಕಾರ್ಯಾಲಯಕ್ಕೆ ಹಾಕಬೇಕು ಆದರೆ ಇದರಲ್ಲಿ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಗೆ ಹಾಕಿರುವ ಕಾರಣವೇನು..? ನಿಯಮಬಾಯಿರವಾಗಿದ್ದರೂ   ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಉತ್ತರ ಕನ್ನಡ ಜಿಲ್ಲೆಯ ಡಿಡಿಪಿಐ  ಹಾಗೂ ಸಾಗರದ ಅಕ್ಷರ ದಾಸೋಹಕ್ಕೆ ನೇಮಕ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ಡಿಡಿಪಿಐ  ನಿಲುವೇನು..?! ಮುಖ್ಯಮಂತ್ರಿಗಳಿಂದ ಸಿಪಾರಸ್ಸಿಗೆ ಬಳಸಲ್ಪಟ್ಟ ಆದೇಶ ಇದಲ್ಲ ಅಧೀನ ಕಾರ್ಯದರ್ಶಿಗಳು ಈ ಆದೇಶ ಮಾಡಿದ್ದಾರೆ ಅಂದರೆ ಅವರಿಗೆ ಕಾನೂನಿನ ಅರಿವಿಲ್ಲವೇ..?! ಇದೇ ತಿಂಗಳ 25/ 6/2024 ರಂದು ಪರೀಕ್ಷೆ ಬರೆದ ಆಕಾಂಕ್ಷಿಗಳಿಗೆ ಬೆಂಗಳೂರಿನಲ್ಲಿ ಕೌನ್ಸಿಲಿಂಗ್ ನಡೆಯುತ್ತದೆ.

ಈ ಸಮಯದಲ್ಲಿ ಖಾಲಿ ಇರುವ ಸಾಗರ  ಸಹಾಯಕ ನಿರ್ದೇಶಕ ಹುದ್ದೆಯನ್ನು ಖಾಲಿ ತೋರಿಸುತ್ತಾರಾ? ಅಥವಾ ನಿಯಮವಿಲ್ಲದ ವರ್ಗಾವಣೆಯಿಂದ ಬಂದಿರುವ ಅಧಿಕಾರಿಯನ್ನು ಮುಂದುವರಿಸುತ್ತಾರ..?! ಕುರುಡು ಕಾಂಚಾಣ ಇಲ್ಲಿ ಕೆಲಸ ಮಾಡಿದೆಯಾ..? ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಒಂದಷ್ಟು ಅಧಿಕಾರಿಗಳು ಇದೇ ರೀತಿ ಅನಧಿಕೃತವಾಗಿ ವರ್ಗಾವಣೆಯಾಗಿ ಬಂದಿದ್ದರು ಆಗ ಇದ್ದ ಕಮಿಷನರ್ ವಿಶಾಲ್ ಅವರು ಮತ್ತೆ ಅದನ್ನು ರದ್ದುಗೊಳಿಸಿ ಕೌನ್ಸಿಲಿಂಗ್ ಮೂಲಕವೇ ಆಯ್ಕೆ ಮಾಡಿದ್ದರು.

ಒಟ್ಟಾರೆ ಈ ಪ್ರಕರಣದಲ್ಲಿ ನಿಯಮಬಾಯಿರವಾಗಿ ವರ್ಗಾವಣೆ  ಆಗಿರುವ ವರ್ಗಾವಣೆ ರದ್ದಾಗಬೇಕು ನಿಜವಾದ ಆಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಷಯದಲ್ಲಿ ಗಮನಹರಿಸಿ ಸರಿಪಡಿಸಬೇಕು ಎನ್ನುವುದು ಪತ್ರಿಕೆಯ ಕಳಕಳಿ.

ರಘುರಾಜ್ ಹೆಚ್‌. ಕೆ..9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...