ಶಿವಮೊಗ್ಗ: ಇಬ್ರಾಹಿಂ @ ಇಬ್ಬು, 30 ವರ್ಷ, ಅಶೊಕ ನಗರ ವಾಸಿ ಶಿವಮೊಗ್ಗ ಈತನು ದೊಡ್ಡಪೇಟೆ ಪೊಲೀಸ್ ಠಾಣೆಯ 11ಪ್ರಕರಣಗಳು, ಸಾಗರ ಗ್ರಾಮಂತರ ಪೊಲೀಸ್ ಠಾಣೆಯ 5ಪ್ರಕರಣಗಳು, ವಿನೋಬನಗರ ಪೊಲೀಸ್ ಠಾಣೆಯ 3 ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯ 2 ಪ್ರಕರಣಗಳು, ಕುಂಸಿ ಪೊಲೀಸ್ ಠಾಣೆಯ 1ಪ್ರಕರಣ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 23 ಮನೆಗಳ್ಳತನ ಪ್ರಕರಣಗಳಲ್ಲಿ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಘನ ನ್ಯಾಯಾಲಯವು ಆರೋಪಿತನ ವಿರುದ್ಧ ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಿರುತ್ತದೆ.
ದಿನಾಂಕಃ 01-08-2024 ರಂದು ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ರುದ್ರೇಶ್, ಸಿ.ಹೆಚ್.ಸಿ, ಮಂಜಪ್ಪ ಎಂ ಹೆಚ್, ಸಿ.ಹೆಚ್.ಸಿ, ರವೀಂದ್ರ ಪ್ರಸಾದ್, ಸಿ.ಪಿ.ಸಿ ಹಾಗೂ ಮಂಜುನಾಥ್ ನಾಯ್ಕ್, ಸಿ.ಪಿ.ಸಿ ರವರುಗಳ ತಂಡವು ಆರೋಪಿ ಇಬ್ರಾಹಿಂ @ ಇಬ್ಬು ಈತನನ್ನು ದಸ್ತಗಿರಿ ಮಾಡಿ, ಘನ 2ನೇ ಜೆ ಎಂ ಎಫ್ ಸಿ ನ್ಯಾಯಾಲಯ ಶಿವಮೊಗ್ಗದ ಮುಂದೆ ಹಾಜರ್ ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಸದರಿ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.